ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಾರ್ಪಣ

By * ಅಂಜಲಿ ರಾಮಣ್ಣ, ಬೆಂಗಳೂರು.
|
Google Oneindia Kannada News
Between you and me : Kannada poem
ಕಾಡುವ ಕಣ್ಣಾಲಿಗಳನ್ನು
ಮುಡಿ ಬಿಟ್ಟ ನೀರು ಬೆನ್ನು ತಾಗುವುದನ್ನು
ಹಾಲು ಕುಡಿದಾ ಹುಡುಗನ ತುಟಿ ತಾಗಿಸಲೊಂದು ನಗುವನ್ನು
ಎಲ್ಲಿಯ ಹಸಿವಿಗೋ ಇಲ್ಲೊಂದೆರಡು ಅಗುಳನ್ನು
ಅಂಗಿಯ ಮೇಲೊಂದು ಕಲೆಯನ್ನು
ಕಾಲ್ಬೆರಳಲ್ಲಿ ರೆಕ್ಕೆ ಹರಡಿದ ಚಿಟ್ಟೆಯನ್ನು

ಸೂರ್ಯಕಾಂತಿ ಹಚ್ಚಿಕೊಂಡ ಹಳದಿಯನ್ನು
ಗೆರೆಗೆರೆ ಗರಿಗೆ ಬಣ್ಣದ ಹೊದಿಕೆಯನ್ನು
ಒಂದು ಸಣ್ಣ ಕಥೆಯನ್ನು
ಒಂದಿಷ್ಟು ಮಳೆಹನಿಯನ್ನು

ಮೌನ ಸಂಹಿತೆಗೆ ಅರ್ಧ ವಿರಾಮವನ್ನು
ಆತ್ಮ ಸಾಂಗತ್ಯಕ್ಕೆ ಧ್ವನಿಯನ್ನು
ನನ್ನದರ ಒಂದಷ್ಟು ಹಂಚಿಕೆಯನ್ನು
ನಿನ್ನದರಲ್ಲಿ ನನ್ನ ಪಾಲನ್ನು....

ಶರಧಿಯ ಲವಣ ಅಲೆಗೆ ಮುತ್ತಿಟ್ಟು ಹರಳಾದಂತೆ
ಚಿಪ್ಪಿನೊಳಗೆ ಅರಳಿದಂತೆ
ನಾನೇನು ಖುಷಿಯ ಒಡೆತನ ಕೇಳಿದೆನೇ?
ಒಂದಷ್ಟು ಘಳಿಗೆ ಗುತ್ತಿಗೆ ಕೊಟ್ಟರೂ ಸಾಕು
ಅದೂ ಕೃಷ್ಣಾರ್ಪಣ ತಾನೇ?!

16/ಸೆಪ್ಟೆಂಬರ್/2010

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X