ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷ್ಣಾರ್ಪಣ
ಕಾಡುವ
ಕಣ್ಣಾಲಿಗಳನ್ನು
ಮುಡಿ ಬಿಟ್ಟ ನೀರು ಬೆನ್ನು ತಾಗುವುದನ್ನು
ಹಾಲು ಕುಡಿದಾ ಹುಡುಗನ ತುಟಿ ತಾಗಿಸಲೊಂದು ನಗುವನ್ನು
ಎಲ್ಲಿಯ ಹಸಿವಿಗೋ ಇಲ್ಲೊಂದೆರಡು ಅಗುಳನ್ನು
ಅಂಗಿಯ ಮೇಲೊಂದು ಕಲೆಯನ್ನು
ಕಾಲ್ಬೆರಳಲ್ಲಿ ರೆಕ್ಕೆ ಹರಡಿದ ಚಿಟ್ಟೆಯನ್ನು
ಮುಡಿ ಬಿಟ್ಟ ನೀರು ಬೆನ್ನು ತಾಗುವುದನ್ನು
ಹಾಲು ಕುಡಿದಾ ಹುಡುಗನ ತುಟಿ ತಾಗಿಸಲೊಂದು ನಗುವನ್ನು
ಎಲ್ಲಿಯ ಹಸಿವಿಗೋ ಇಲ್ಲೊಂದೆರಡು ಅಗುಳನ್ನು
ಅಂಗಿಯ ಮೇಲೊಂದು ಕಲೆಯನ್ನು
ಕಾಲ್ಬೆರಳಲ್ಲಿ ರೆಕ್ಕೆ ಹರಡಿದ ಚಿಟ್ಟೆಯನ್ನು
ಸೂರ್ಯಕಾಂತಿ
ಹಚ್ಚಿಕೊಂಡ
ಹಳದಿಯನ್ನು
ಗೆರೆಗೆರೆ
ಗರಿಗೆ
ಬಣ್ಣದ
ಹೊದಿಕೆಯನ್ನು
ಒಂದು
ಸಣ್ಣ
ಕಥೆಯನ್ನು
ಒಂದಿಷ್ಟು
ಮಳೆಹನಿಯನ್ನು
ಮೌನ
ಸಂಹಿತೆಗೆ
ಅರ್ಧ
ವಿರಾಮವನ್ನು
ಆತ್ಮ
ಸಾಂಗತ್ಯಕ್ಕೆ
ಧ್ವನಿಯನ್ನು
ನನ್ನದರ
ಒಂದಷ್ಟು
ಹಂಚಿಕೆಯನ್ನು
ನಿನ್ನದರಲ್ಲಿ
ನನ್ನ
ಪಾಲನ್ನು....
ಶರಧಿಯ
ಲವಣ
ಅಲೆಗೆ
ಮುತ್ತಿಟ್ಟು
ಹರಳಾದಂತೆ
ಚಿಪ್ಪಿನೊಳಗೆ
ಅರಳಿದಂತೆ
ನಾನೇನು
ಖುಷಿಯ
ಒಡೆತನ
ಕೇಳಿದೆನೇ?
ಒಂದಷ್ಟು
ಘಳಿಗೆ
ಗುತ್ತಿಗೆ
ಕೊಟ್ಟರೂ
ಸಾಕು
ಅದೂ
ಕೃಷ್ಣಾರ್ಪಣ
ತಾನೇ?!
16/ಸೆಪ್ಟೆಂಬರ್/2010
Comments
Story first published: Thursday, September 16, 2010, 14:05 [IST]