ಸುನಿಲ್ ಕುಮಾರ್ ಅವರ ಕವನ: ಭಾವನೆ
*ಸುನಿಲ್ ಕುಮಾರ್. ಎನ್
ಮನಸ ಭಾವನೆ ಗೂಡಿನೊಳಗೆ
ಹಲವು ಆಸೆಯ ತಾಣವಿದೆ
ಎಲ್ಲ ಬಯಕೆಗೂ ಬೆಳಕು ಕಾಣದೆ
ಬದುಕಿಗರ್ಥವ ತಂದಿದೆ..
ಕತ್ತಲೊಳಗಲಿ ಪುಟ್ಟ ಪ್ರಪಂಚ
ಚಿಂತೆ ರಾಶಿಯು ತುಂಬಿದೆ
ಸ್ತುತಿಗೆ ಇದುವೇ ಮೂಲಕಾರಣ
ನಿತ್ಯ ಕರ್ಮವಿದಾಗಿದೆ..
ಬಾಳ ತಿರುಳಲಿ ಮುಳ್ಳು ಹಾದಿಯು
ಪುಟದ ಮುನ್ನುಡಿ ಸೇರಿದೆ
ಹೆಜ್ಜೆಯಿಡುವೆಡೆ ರಕುತದೋಕುಳಿ
ಕೆಂಪು ಚಿಲುಮೆಯ ನೀಡಿದೆ..
ಆಸೆ ಮುಗಿಲಿಗೆ ಏಣಿಯಿಡುವೆಡೆ
ತಳದಿ ನಿಲ್ಲಲ್ಲು ಸಾಧ್ಯವೇ?
ಹಾರೋ ಹಕ್ಕಿಗೂ ಸ್ಥಳವು ನೀಡದೆ
ಗಗನ ಚುಂಬಕವಾಗುವೆ..
ಯಾವ ಬಯಕೆಗೆ ಎಲ್ಲೋ ಚಿಗುರು
ದೇವನಿಚ್ಛೆಗೂ ಮೀರಿದೆ
ಕಾಲ ಬರುವುದು ಬದುಕಲೊಮ್ಮೆ
ತಾಳ್ಮೆಯಿದ್ದರೆ ಗೆಲುವಿದೆ..












Click it and Unblock the Notifications