ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವದಂತಿ

By Staff
|
Google Oneindia Kannada News
Sreevathsa Duglapurಹೀಗೆಂದು ಉಸುರಿದ್ದೆ

ಪದಗಳೊಂದೆರಡು; ಮೂರು
ದಿನದ ಕಂಬಳಿಹುಳುವಿನ ಮೊಟ್ಟೆ
ಯಂತೆ ಇದ್ದದ್ದು ,
ಈ ಬಾಯಿಯಿಂದ ಆ ಕಿವಿಗೆ
‘ನಿಮಗೆ ಮಾತ್ರ’ ಅಂದದ್ದು,
ಗೋಡೆ ದಾಟುವುದರೊಳಗೆ
ರೆಕ್ಕೆಯಾಡೆದು, ಪುಕ್ಕ ಬಂದು, ನೂರಾಗಿ

ಹೌದೇನ್ರೀ ? ನಿಜವೇನ್ರೀ?
ಕುತೂಹಲದ ತೂಕ
ಹೆಚ್ಚಿ, ಮೈ-
ದುಂಬಿ
ಅವರ ಮನೆ ಅಡುಗೆಮನೆ
ಹೊಸಿಲು ದಾಟಿ ಇವರ ಮನೆ
ಜಗುಲಿಯ ಬಳಿ ಬಂದಾಗ
ಚಿಟ್ಟೆಯಾಗಿತ್ತು.

ಬಿಚ್ಚುಮನಸ್ಸಿನವರು ಸಾದಾ
ರೆಕ್ಕೆಗೆ ಎರಡೋ, ಮೂರೋ
ಬಣ್ಣ ಬಳಿದು
ಸಾವಿರ ಕಣ್ಣಿನ
ಕಿವಿಯ, ಬಾಯಿಯ
ನವಿಲುಗರಿ ಮಾಡಿ,
ಉಬ್ಬಿಸಿ
ಬಿಟ್ಟರು.

ಮತ್ತೆರಡು ಮನ ದಾಟಿ
ತಿರುತಿರುಗಿ ಸಂ-
ಪೂರ್ಣ ಜೀವನಚಕ್ರದ
ಅಂತೆ-ಕಂತೆಗಳ ಪು-
ಕಾರು ಬಾರುಗಳ ನಡುವೆ
ತಾನೇ ಹಾರುವ ಚಿಟ್ಟೆ
ಬಂದು ಕುಳಿತದ್ದು ನನ್ನ ಕಿವಿ ಮೇಲೆ !

ಗುರುತೇ ಸಿಗಲಿಲ್ಲ ನೋಡಿ...

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X