ಬನ್ನಂಜೆಗೆ ನಮನ, ಬನ್ನಂಜೆಗೆ ಸ್ವಾಗತ

  • ಜಗದೀಶ್‌ ಮಯ್ಯ
ಬನ್ನಂಜೆ ಜ್ಞಾನ ಸೂರ್ಯ, ಧರ್ಮ-ಸಂಸ್ಕೃತಿಯ ಬಗ್ಗೆ ನಮಗಿರುವ ಕತ್ತಲೆಯ ಕರಗಿಸುವ, ಸತ್ಯವ ಬೆತ್ತಲಾಗಿಸುವ ಸಂತ
ಇರವಿನ ಅರಿವಿರದ, ಜಡ್ಡುಗಟ್ಟಿದ, ನಿಷ್ಕಿೃಯ ಜನಾಂಗಕೆ ಮೈನಾಕದ ಗಂಧವ ಪಸರಿಸಿ ಬಡಿದೆಬ್ಬಿಸಿದ ರಾಮದೂತ, ಮಹಾ ಧೀಮಂತ,
ದೇಹ ಧರ್ಮವ ಲೆಕ್ಕಿಸದೆ ಧರ್ಮ ಪ್ರವಚನ ನೀಡುವ ದಯಾವಂತ !

ಪಶ್ಚಿಮದ ಭಾರತೀಯರಿಗೆ ಪೂರ್ವದ ಹಿತ್ತಲಗಿಡದ ಮದ್ದನ್ನು ಮುದ್ದಾಗಿ ತಿನ್ನಿಸುವ,
ಭವರೋಗ ವೈದ್ಯನ ಪ್ರತಿಬಿಂಬ, ಒಳಗಣ್ಣು ತೆರೆದ ಸಾಂಬ, ಒಳಗಣ್ಣ ತೆರೆಸುವನೆಂಬ !

ಪ್ರತಿಯಾಬ್ಬರೂ ವಿಶಿಷ್ಟ ಬೀಜದಂತೆ, ಸಸಿ ಗಿಡಗಳಂತೆ, ಭಗವಂತ ತೋಟಗಾರನಂತೆ- ಬನ್ನಂಜೆ ಉವಾಚ
ಬನ್ನಂಜೆಯೋ ಅರಳಿ ಮರದಂತೆ ! ತೋಟಗಾರನಿಂದ ಹೆಚ್ಚುವಾರಿ ಹರಿಸಿಕೊಂಡವರು, ಹರಸಿಕೊಂಡವರು, ದಿಕ್‌ ದಿಗಂತಗಳಲಿ ಅರಳಿ ನಿಂತವರು ಬುದ್ದುಗಳ ಬುದ್ಧರಾಗಿಸುತ ಜ್ಞಾನೋದಯದ ಫಲವೀಯುವರು !

ಬನ್ನಂಜೆ ! ಬಂಜೆ ತಲೆಗಳಿಗೆ ಜ್ಞಾನಗಂಗೆ, ಬತ್ತಿದೆದೆಗಳಿಗೆ ಹಾಲ್ಜೇನು ಸುರಿದ್ಹಾಂಗೆ !
ಸನಾತನ ಧರ್ಮ ಸಾರಿ ಸಾರಿ ಸಾವಿರ ಬಾರಿ ಬಿತ್ತಿದವರು, ಕೊಳೆ ಕಳೆ ಕಳೆದವರು, ಆಧ್ಯಾತ್ಮಿಕತೆ, ಸತ್ವ ಸ್ವಾಭಿಮಾನವ ಬೆಳೆಸಿದವರು.

ತಿಳಿದು ಮಾಡೆಂಬರು ಬನ್ನಂಜೆ, ನನಗೇನೂ ತಿಳಿಯದು ಎಂದು ತಿಳಿದಿರಲಿ ಎಂಬರು !
ತಿಳಿಸಿ ತಿದ್ದುವರು, ಗೊಡ್ಡುತನವ ಗುದ್ದುವರು, ಒಣ ವೇದಾಂತವ ಹಸಿರಾಗಿಸಿ, ಉಸಿರಾಗಿಸುವರು
ಹಲವು ಗೊಂದಲಗಳ ರಾಡಿ ತಲೆ ಕೊಳೆವ ತಿಳಿಗೊಳವಾಗಿಸಿ ಆತ್ಮತತ್ವವ, ಸರಳ ಸತ್ಯವ ಪ್ರತಿಫಲಿಸುವರು !

ವೇದೋಪನಿಷದ್‌ ಕಾಲದ ಯಾವನೋ ದಾರ್ಶನಿಕ, ಕವಿ, ಋಷಿ ವರೇಣ್ಯ
ಈ ಜನ್ಮದಿ ಆಚಾರ್ಯ ಬನ್ನಂಜೆ, ಹೀಗನ್ನಲು ನಾನಂಜೆ, ಭೂತಾಯಿಯಲ್ಲ ಬಂಜೆ !

ಬನ್ನಂಜೆಯವರೇ ನಿಮಗಿದೋ ಸ್ವಾಗತ ! ಕೃಷ್ಣನ, ಕೃಷ್ಣ ದ್ವೆ ೖಪಾಯನರ ಮೇಲಣ
ನಿಮ್ಮ ವಿಚಾರ ರಸಾಮೃತ ಧಾರೆಗೆ ನಮ್ಮ ತೆರೆದ ಹೃದಯದ ಸ್ವಾಗತ !
ಕ್ಷೀರ ಸಾಗರ ನೀವು, ಹಾಲು ಬಯಸಿದ ರೋಗಿ ನಾವು !

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+