ಬೆಂಗಳೂರಿನ ಕ್ಯಾಬ್ ಡ್ರೈವರ್ ಹೇಳಿಕೊಂಡ ಬದುಕು-ಬವಣೆ
ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರ ಅನುಭವವೇ ಈ ಲೇಖನ. ಯಾವ ಕಂಪೆನಿಯ ಕ್ಯಾಬ್ ಅನ್ನೋದನ್ನು ಬಹಿರಂಗ ಪಡಿಸುತ್ತಿಲ್ಲ. ಆದರೆ ಅವರು ಹೇಳಿಕೊಂಡ ದುಃಖ-ದುಮ್ಮಾನವನ್ನು ನಿಮ್ಮೆದುರು ಇಡಲಾಗುತ್ತಿದೆ. ಇನ್ನು ಮುಂದಿನ ಮಾತುಗಳು ಅವರವು.
ಶುರುವಿನಲ್ಲಿ ಕೊಡ್ತಿದ್ದ ಇನ್ಸೆಂಟಿವ್ ನೋಡಿ ಸಿಕ್ಕಾಪಟ್ಟೆ ಜನ ಕಾರುಗಳನ್ನು ಹಾಕಿಬಿಟ್ಟರು. ಅದೆಷ್ಟೋ ಸಾವಿರ ಜನ ಬ್ಯಾಂಕ್ ಸಾಲ ಮಾಡಿಕೊಂಡು ಕಾರುಗಳನ್ನು ಖರೀದಿಸಿ, ಚಾಲಕರಾದರು. ಆದರೆ ಈಚೆಗೆ ಕಂಪೆನಿಯ ನಿಯಮಗಳು ಬದಲಾಗಿವೆ. ಮುಂಚಿನ ರೀತಿ ಇನ್ಸೆಂಟಿವ್ ಸಿಗ್ತಿಲ್ಲ.
ಈ ಬೆಂಗಳೂರಿನ ಟ್ರಾಫಿಕ್ ನಲ್ಲಿ ಅವರು ಹೇಳಿದಷ್ಟು ಟ್ರಿಪ್ ಮಾಡುವುದು ಅಸಾಧ್ಯ ಅನ್ನೋ ಹಾಗಿದೆ. ಆದರೆ ಬ್ಯಾಂಕ್ ಸಾಲ ತೀರಿಸಬೇಕು, ಸಂಸಾರ ನಡೆಯಬೇಕು, ಜತೆಗೆ ಕಾರಿನ ಡೀಸೆಲ್, ರಿಪೇರಿ ಅದೂ ಇದೂ ಅಂತೆಲ್ಲ ಸೇರಿ ಭಾರೀ ಒತ್ತಡ ಆಗಿಬಿಟ್ಟಿದೆ.
ಮುಂಚೆಲ್ಲ ಟ್ರಾವೆಲ್ಸ್ ಗಳಿಗೆ ಕೆಲಸ ಮಾಡುವಾಗ ಸೀಸನ್ ಗಳಲ್ಲಿ ವಿಪರೀತ ಕೆಲಸ ಇರ್ತಿತ್ತು. ಉಳಿದ ಸಮಯದಲಿ ಹಾಗೂ-ಹೀಗೂ ನಡೆಯುತ್ತಿತ್ತು. ಈಗ ಈ ಕಡೆ ಬಂದ ಮೇಲೆ ಅಲ್ಲೂ ಹೊಸ ಜನ ಬಂದಿದ್ದಾರೆ. ವಾಪಸ್ ಹೋಗೋದಿಕ್ಕೆ ಆಗ್ತಿಲ್ಲ. ಇಲ್ಲಿ ಬರುತ್ತಿರುವ ಆದಾಯ ಸಾಕಾಗ್ತಿಲ್ಲ. ನಾನು ಮನೆಗೆ ಹೋಗೇ ಎರಡು ದಿನ ಆಯಿತು.

ರಾತ್ರಿ ಕಳೆಯುವ ರೀತಿ
ನೀವು ಬನಶಂಕರಿಯಿಂದ ಮುಂದೆ ಜೆಪಿ ನಗರ ರಸ್ತೆಯಲ್ಲಿ ಹೋಗಿ ರಾತ್ರಿ ಹೊತ್ತು ನೋಡಿದರೆ ಉದ್ದಕ್ಕೂ ಕ್ಯಾಬ್ ಡ್ರೈವರ್ ಗಳೇ ಕಾರಿನಲ್ಲಿ ಮಲಗಿರ್ತಾರೆ. ಮನೆಗಳಿಗೂ ಹೋಗದೆ ದುಡಿಯುವ ತುರ್ತಿನಲ್ಲಿ ಅವರು ರಾತ್ರಿ ಕಳೆಯುವ ರೀತಿ ಅದು.

ಶನಿವಾರ-ಭಾನುವಾರದ ದಿನ ಮಾತ್ರ ಡ್ರೈವಿಂಗ್ ಕೆಲಸ
ಇನ್ನು ಬೆಂಗಳೂರಿಗೆ ಹತ್ತಿರ ಇರುವ ತುಮಕೂರು, ಮಂಡ್ಯ, ಮದ್ದೂರು, ರಾಮನಗರ, ಕೋಲಾರ, ಹೊಸೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದಿಂದ ಶನಿವಾರ-ಭಾನುವಾರದ ದಿನ ಮಾತ್ರ ಡ್ರೈವಿಂಗ್ ಕೆಲಸಕ್ಕೆ ಅಂತ ನೂರಾರು ಜನ ಬರ್ತಾರೆ.

ಸುಲಭ್ ಶೌಚಾಲಯಗಳಲ್ಲಿ ಸ್ನಾನ-ನಿತ್ಯ ಕರ್ಮ
ರಸ್ತೆ ಬದಿಯಲ್ಲೆಲ್ಲೋ ಊಟ ಮಾಡಿಕೊಳ್ತಾರೆ. ಸುಲಭ್ ಶೌಚಾಲಯಗಳಲ್ಲಿ ಸ್ನಾನ-ನಿತ್ಯ ಕರ್ಮಗಳನ್ನು ಮುಗಿಸಿಕೊಳ್ತಾರೆ. ಎರಡು ದಿನ ಬಿಡುವಿಲ್ಲದೆ ದುಡಿದು, ಒಂದಿಷ್ಟು ದುಡ್ಡು ಮಾಡಿಕೊಂಡು ವಾಪಸ್ ತಮ್ಮ ಊರುಗಳಿಗೆ ಹೋಗ್ತಾರೆ.

ಈ ಕಾರನ್ನು ಮಾರಿ ನೆಮ್ಮದಿಯಾಗಿ ಬಿಡ್ತೀನಿ
ಯಾರ ಹತ್ತಿರ ಆದರೂ ಡ್ರೈವರ್ ಕೆಲಸ ಸಿಕ್ಕರೂ ಸಾಕು, ಈ ಕಾರನ್ನು ಮಾರಿ ನೆಮ್ಮದಿಯಾಗಿ ಬಿಡ್ತೀನಿ. ನಮ್ಮ ಜನರೇ ಹೀಗೆ. ನನ್ನನ್ನೂ ಸೇರಿಸಿಕೊಂಡು ಹೇಳ್ತಿದೀನಿ: ಸಂಪಾದನೆ ಜಾಸ್ತಿ ಆಗುತ್ತದೆ ಅಂತ ಅನ್ನಿಸಿದ ತಕ್ಷಣ ಹಿಂದೆ-ಮುಂದೆ ನೋಡದೆ ನುಗ್ಗಿ ಬಿಡ್ತಾರೆ.

ಶುರುವಿನಲ್ಲಿ ಒಳ್ಳೆ ದುಡ್ಡು ಕೊಟ್ಟರು
ಶುರುವಿನಲ್ಲಿ ಕ್ಯಾಬ್ ಕಂಪೆನಿಗಳವರು ನಿಜಕ್ಕೂ ತುಂಬ ಒಳ್ಳೆ ದುಡ್ಡು ಕೊಟ್ಟರು. ಆದರೆ ಕ್ರಮೇಣ ಕಡಿಮೆ ಆಗುತ್ತಾ ಹೋಯಿತು. ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡವರು ನಮ್ಮಂಥವರು. ಈಗ ಮುಂಚಿನ ರೀತಿಯಲ್ಲಿ ದುಡ್ಡಿಲ್ಲ. ಆದರೆ ವಿಪರೀತ ಜವಾಬ್ದಾರಿಗಳನ್ನು ಮೈ ಮೇಲೆ ಹೊತ್ತುಕೊಂಡು ಭಾರಕ್ಕೆ ಕುಸಿದು ಹೋದ ಹಾಗೆ ಆಗ್ತಿದೆ.

ಚಕ್ರವ್ಯೂಹದೊಳಗೆ ಬಂದಿದ್ದೀವಿ
ಅದೇನೋ ಚಕ್ರವ್ಯೂಹ ಅಂತಾರಲ್ಲ, ಹಾಗೆ. ಇದರೊಳಗೆ ಬಹಳ ಸಲೀಸಾಗಿ ಬಂದು ಬಿಟ್ಟಿದ್ದೀವಿ. ಹೊರಗೆ ಬರುವುದಕ್ಕೆ ದಾರಿಯೇ ಗೊತ್ತಾಗ್ತಿಲ್ಲ. ಮತ್ತೀಗ ಡ್ರೈವಿಂಗ್ ಕೆಲಸಕ್ಕೆ ಬರುತ್ತಿರುವವರನ್ನು ನೋಡಿ, ಎಸ್ಸೆಸ್ಸೆಲ್ಸಿ ಮುಗಿದಿಲ್ಲ ಅಂದರೆ ಡ್ರೈವಿಂಗ್ ಕಲಿತು ಬಿಡು ಅಂತ ಸಲಹೆ ಕೊಡುವವರೇ ಜಾಸ್ತಿ.

ಎಂಟನೇ ದಿನಕ್ಕೆ ಆಗಲೇ ಸಂಪಾದನೆಗೆ ಇಳಿದು ಬಿಡ್ತಾರೆ
ಒಂದು ವಾರ ಡ್ರೈವಿಂಗ್ ಕಲೀತಾರೆ. ಎಂಟನೇ ದಿನಕ್ಕೆ ಆಗಲೇ ಸಂಪಾದನೆಗೆ ಇಳಿದು ಬಿಡ್ತಾರೆ. ಎಷ್ಟು ಭಯಂಕರವಾಗಿ ಓಡಿಸ್ತಾರೆ ಅಂದರೆ, ನಾವೆಷ್ಟೇ ಸರಿಯಾಗಿ ಓಡಿಸ್ತಿವಿ ಅಂದರೂ ರಸ್ತೆಗಿಳಿಯುವುದಕ್ಕೆ ಭಯ ಪಡುವ ಸ್ಥಿತಿ ಇದೆ. ಈ ಜನ್ಮದಲ್ಲಿ ನನ್ನ ಹಣೆ ಮೇಲೆ ಡ್ರೈವರ್ ಅಂತ ಬರೆದಾಗಿದೆ. ಆದರೆ ಮತ್ಯಾರಿಗೂ ಡ್ರೈವರ್ ಆಗಬೇಡಿ ಅಂತಲೇ ಹೇಳ್ತೀನಿ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications