ಸುದ್ದಿ ಸೋಜಿಗ : ಯಮನವ್ವ ಆಹಾರ ಸೇವಿಸಿ 20 ವರ್ಷವಾಯಿತು!

ಒಂದು ದಿನ, ಎರಡು ದಿನ... ಒಂದು ವಾರ... ಎಂಟನೇ ದಿನಕ್ಕೆ ದೇಹ ಕೇಳಬೇಕಲ್ಲ. ಅಣ್ಣಾ ಹಜಾರೆ ಉಪವಾಸ ಕುಳಿತಾಗ ಅವರ ಜೀವಕ್ಕೆ ಏನಾದರೂ ಹೆಚ್ಚೂಕಡಿಮೆ ಆದೀತೆಂದು ಅವರ ಆಗ್ರಹಳನೇಕನ್ನು ಒಪ್ಪಿಕೊಂಡು ಉಪವಾಸ ಮುರಿಯುವಂತೆ ಮಾಡಿತ್ತು. ಆದರೆ ಇಲ್ಲೊಬ್ಬಳಿದ್ದಾಳೆ ನೋಡಿ, ಒಂದೆರಡು ದಿನವಲ್ಲ ಕಳೆದ 20 ವರ್ಷಗಳಿಂದ ಅನ್ನಾಹಾರ ಸೇವಿಸದೆ ಉಪವಾಸ ಮಾಡುತ್ತಿದ್ದಾಳೆ. ನಂಬಲು ಅಸಾಧ್ಯವಾದರೂ ಇದು ನಿಜ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅಮ್ಮಾಪೂರ (ಎಸ್ ಕೆ) ಗ್ರಾಮದ ಹೊರವಲಯದಲ್ಲಿ ಚಿಕ್ಕದೊಂದು ಮನೆ ಮಾಡಿಕೊಂಡು ಒಂದು ಕೃಷಿಕ ಕುಟುಂಬ ಜೀವನ ನಡೆಸುತ್ತಿದೆ. ಆ ಮನೆಯ ಯಮನವ್ವ (55) ಕಳೆದ 20 ವರ್ಷಗಳಿಂದ ಆಹಾರವನ್ನು ತ್ಯಜಿಸಿದ್ದರೂ ಗಟ್ಟಿಮುಟ್ಟಾಗಿದ್ದಾಳೆ. ನೀರು ಮತ್ತು ಚಹಾ ಹೊರತಾಗಿ ಏನನ್ನೂ ಸೇವಿಸುವುದಿಲ್ಲ.
ಎಲ್ಲವೂ ಚೆನ್ನಾಗೇ ಇತ್ತು... : ಮೊದಲು ಎಲ್ಲರ ಹಾಗೇ ಚೆನ್ನಾಗಿ ಊಟ ಮಾಡುತ್ತಿದ್ದಳು. ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಕೊನೆಯ ಮಗುವಿಗೆ ಜನ್ಮ ನೀಡುವಾಗ ಆರೋಗ್ಯದಲ್ಲಿ ತೊಂದರೆಯಾಗಿ ಆಗಿನಿಂದ ಆಹಾರ ಬಿಟ್ಟವಳು ಈವರೆಗೂ ಮುಟ್ಟಿಲ್ಲ ಅಂತಾಳೆ ಯಮನವ್ವ. ಎಲ್ಲರ ಹಾಗೆ ಮನೆಯಲ್ಲಿ ಒಬ್ಬಳೆ ಎಲ್ಲಾ ಕೆಲಸವನ್ನು ಮಾಡುತ್ತಾಳೆ. ಮನೆಯವರ ಒತ್ತಾಯಕ್ಕೆ ಒಂದೆರಡು ಬಾರಿ ಆಹಾರ ಸೇವನೆ ಮಾಡಲು ಪ್ರಯತ್ನ ಮಾಡಿದ್ದಾಳೆ. ಆದರೆ ಆಹಾರ ಸೇವನೆ ಮಾಡಿದ ನಂತರ ವಾಂತಿಯಾಗುತ್ತಿತ್ತು. ಈ ಬಗ್ಗೆ ಹಲವು ವೈದ್ಯರನ್ನು ಸಂಪರ್ಕಿಸಿದ್ದಾಳೆ. ಆದರೆ ಪರಿಹಾರ ಮಾತ್ರ ದೊರೆತಿಲ್ಲ.
ಈ ಯಮನವ್ವ ದಿನಕ್ಕೆ 4 ರಿಂದ 5 ಬಾರಿ ನೀರು ಮತ್ತು ಚಹಾ ಸೇವನೆ ಮಾಡುತ್ತಾಳೆ ಅದನ್ನು ಬಿಟ್ಟು ಬೇರೆ ಏನನ್ನೂ ಸೇವನೆ ಮಾಡುವುದಿಲ್ಲ. ಊಟ ಬಿಟ್ಟರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಾಮಾನ್ಯ ಮಹಿಳೆಯಂತೆ ಓಡಾಡಿಕೊಂಡಿದ್ದಾಳೆ. ಇಂದೊಂದು ವಿಜ್ಞಾನ ಲೋಕಕ್ಕೆ ಸವಾಲಾಗಿದೆ ಎಂದರೆ ತಪ್ಪಾಗುವುದಿಲ್ಲ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications