ಗುಬ್ಬಚ್ಚಿ : ಬದುಕಿದೆಯಾ ಬಡಜೀವವೆ

ನಗರವಾಸಿಗಳಿಗಂತೂ ಈ ಅಂಗುಲ ಉದ್ದದ ಉಣ್ಣೆ ಉಂಡೆಯಂತಹ ಪಕ್ಷಿಯ ಬಗ್ಗೆ ವಿಶೇಷ ಅಕ್ಕರೆ. ಅಂಗಡಿಯ ಶೆಲ್ಪಿನ ಮೂಲೆಯಲ್ಲಿ, ಕ್ಯಾಲೆಂಡರಿನ ಹಿಂದೆ, ಗೋಡೆಗೆ ನೇತಿಟ್ಟ ದೇವರ ಫೋಟೋದ ಹಿಂಬಾಗದಲ್ಲಿ, ಬೆಳಕಿಂಡಿಯ ಕಿಟಕಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಗರಿಗಳನ್ನು, ಹುಲ್ಲು ಗರಿಕೆಗಳನ್ನು ತಂದು ಬೆಚ್ಚನೆಯ ಗೂಡುಕಟ್ಟಿ ಸಂಸಾರ ಹೋಡುವ ಈ ಹಕ್ಕಿ ನಿರುಪದ್ರವಿ. ಆದರೆ ಈ ಪುಟ್ಟ ಜೀವಕ್ಕೆ ಮನುಷ್ಯನ ಉಪದ್ರವ ಮಾತ್ರ ಸಂತತಿಯೇ ನಾಶವಾಗುವಷ್ಟು ಕಾಡಿಸಿದ್ದು ಖರೆ.
ಆಧುನಿಕ ಅತ್ಯಾವಶ್ಯಕ ವಸ್ತುವಾಗಿರುವ ಮೊಬೈಲ್ ಸಂಜ್ಞೆಗಳಿಂದಾಗಿ ಗುಬ್ಬಚ್ಚಿಯ ಸಂತತಿಯೇ ನಾಶವಾಗುವ ಹಂತ ತಲುಪಿದ್ದು ಹಳೆಯ ಸಂಗತಿ. ವಿಜ್ಞಾನಿಗಳು ಗುಬ್ಬಿಯ ಮೇಲೆ ಸಂಜ್ಞೆಗಳು ಬೀರಿದ ಪರಿಣಾಮವನ್ನು ಆಧಾರವಾಗಿಟ್ಟುಕೊಂಡೇ ಮೊಬೈಲ್ ಮನುಷ್ಯನ ಮೇಲೆ ಅದರಲ್ಲೂ ಚಿಕ್ಕಮಕ್ಕಳ ದೇಹದ ಮೇಲೆ ಬೀರುವ ಅಪಾಯಗಳ ಕುರಿತು ಪ್ರತಿಪಾದಿಸಿದ್ದರು. ಹೃದಯ, ಮೆದುಳು ಮುಂತಾದ ಸೂಕ್ಷ್ಮ ಅವಯವಗಳ ಮೇಲೆ ಅಪಾಯವುಂಟುಮಾಡಿ, ಕ್ಯಾನ್ಸರ್ನ ಹುಟ್ಟಿಗೆ ಕೂಡ ಕಾರಣವಾಗಬಹುದು ಎಂದು ಎಚ್ಚರಿಸಿದ್ದರು.
ಈ ಕುರಿತು ಹಲವು ವಿಸ್ತ್ರತ ಸಂಶೋಧನೆಗಳು ನಡೆದವು. ಮೊಬೈಲ್ ವಿಕಿರಣಗಳು ಬೀರುವ ಅಪಾಯಗಳೂ ಸಿದ್ಧವಾದವು. ಜನರು ವಿಜ್ಞಾನಿಗಳು ನೀಡಿದ ವರದಿಯಿಂದ ಕಂಗಾಲಾದರು. ಆದರೆ ಮೊಬೈಲ್ ಬಳಕೆಯಿಂದ ವಿಮುಖವಾಗುವ ಮನಸ್ಸನ್ನು ಯಾರೂ ಮಾಡಿಲ್ಲ. ಅಪಾಯದ ಅರಿವಿದ್ದರೂ ಮೊಬೈಲ್ ಕಂಪನಿಗಳು ನೀಡುವ ತರಹೇವಾರಿ ಆಫರ್ಗಳಿಗೆ ಮನಸೋತು ಖರೀದಿಸಿದರು. ಇದೆಲ್ಲದರ ಪರಿಣಾಮ ನೇರವಾಗಿ ಆಗಿದ್ದು ಗುಬ್ಬಚ್ಚಿಯೆಂಬ ಪುಟ್ಟ ಪಕ್ಷಿಯಮೇಲ್ಹಾಗೂ ಇಂತದೇ ಇನ್ನಷ್ಟು ಸೂಕ್ಷ್ಮ ಜೀವಿಗಳ ಮೇಲೆ. ಸುಮಾರು 10 ವರ್ಷಗಳ ಕಾಲ ಒಂದೇ ಸಮನೆ ಈ ಗುಬ್ಬಿಯ ಸಂತತಿಯು ಕ್ಷೀಣಿಸಿತು. ಆದರೆ ಇದೀಗೆ ಮತ್ತೆ ಕಾಣಿಸಕೊಳ್ಳತೊಡಗಿವೆ. ದುಂಡುದುಂಡಾಗಿ ಅಂಗಡಿಯಮುಂಗಟ್ಟುಗಳ ಮುಂದೆ, ಬಸ್ಟ್ಯಾಂಡ್ನ ಟ್ಯೂಬ್ಲೈಟ್ ಮೇಲೆ, ಪುಸ್ತಕದ ಅಂಗಡಿಯಲ್ಲಿ ನೇತುಬಿಟ್ಟ ಪುಸ್ತಕಗಳ ಮೇಲೆ ಗುಬ್ಬಿಗಳ ರೆಕ್ಕೆ ಸದ್ದು ಕೇಳತೊಡಗಿದೆ.
ಜೀವ ವಿಜ್ಞಾನದ ಮಹತ್ವದ ಅಂಶವೊಂದು ಸಾಮಾನ್ಯನ ಅರಿವಿಗೂ ಬರುವಂತಾಗಿದೆ. ಗುಬ್ಬಿಗಳ ದೇಹದಲ್ಲಿ ಮೊಬೈಲ್ ವಿಕಿರಣಗಳನ್ನು ಜಯಿಸುವಂತೆ ಮಾರ್ಪಾಟಾಗಿರಬಹುದು. ಈ ಬದಲಾವಣೆಯೇ ಮತ್ತೆ ಗುಬ್ಬಿಗಳು ಕಾಣಿಸಿಕೊಳ್ಳಲು ಕಾರಣವಾಗಿರಲೂಬಹುದು.
ಜೀವ ವಿಕಾಸದ ಪ್ರಮುಖ ಘಟ್ಟದಲ್ಲಿ ಅಳಿಯಲಿರುವ ಸಂತತಿಯೊಂದು ಉಳಿಯುವುದಕ್ಕಾಗಿ ಪ್ರಕೃತಿಯ ಒತ್ತಡಗಳ ಜೊತೆಗೆ ಜಿದ್ದಿಗೆ ಬಿದ್ದು ಗೆದ್ದಿದೆ ಎನ್ನಬಹುದು. ಇದೇ ರೀತಿ ಮನುಷ್ಯನು ಕೂಡ ನಿರಂತರವಾಗಿ ಮೊಬಾಯಿಲ್ ಸಂಸರ್ಗದಲ್ಲಿಯೇ ಇರುತ್ತಾನಾದ್ದರಿಂದ ಅಪಾಯಗಳನ್ನು ಜಯಿಸಿದರೂ ಜಯಿಸಬಹುದು. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಸಂಶೋಧನೆಗಳನ್ನು ಕೈಗೊಂಡು ವಾಸ್ತವಾಂಶಗಳನ್ನು ಖಚಿತಪಡಿಸಬೇಕಾಗಿದೆ.
IS ELECTROSMOG KILLING THE SPARROW?
-
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications