ಕರ್ನಾಟಕದಲ್ಲಿ ಲವ್ ಜಿಹಾದಿಗಳ ಹಾವಳಿ

ದಕ್ಷಿಣ ಕನ್ನಡದಲ್ಲಿ ಕೇಳಿ ಬಂದ ಈ ಲವ್ ಅಥವಾ ರೋಮಿಯೊ ಜಿಹಾದ್' ಮೂಲ ಕೇರಳ. ಇಲ್ಲಿನ ಒಂದು ವರ್ಗದ ಮುಸ್ಲಿಮರು ಇದನ್ನು ಸಂಘಟಿಸುತ್ತಿದ್ದಾರೆ ಕಾಸರಗೋಡು ಮೂಲಕ ಸಾಗಿಬಂದ ಇದರ ಮುಂದಿನ ಟಾರ್ಗೆಟ್ ಕೊಡಗು, ಬೆಳಗಾವಿ, ರಾಯಚೂರು ಹಾಗೂ ಚಾಮರಾಜನಗರ ಎನ್ನಲಾಗಿದೆ. ಕೇರಳ ಹೈಕೋರ್ಟ್, ಲವ್ ಜಿಹಾದ್ಗೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ಸೆ.30ರಂದು ಕೇರಳ ಸರಕಾರಕ್ಕೆ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಪೋಷಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಖೆಡ್ಡಾ ಪ್ರೀತಿಯ ನೆಪದಲ್ಲಿ ಅನ್ಯ ಧರ್ಮಿಯರ ಅಂದರೆ ಹಿಂದು ಹುಡುಗಿಯರ ಮನ ಒಲಿಸಿ, ಮದುವೆ ನಂತರ ಇಸ್ಲಾಂಗೆ ಮತಾಂತರಗೊಳಿಸುವುದು. ಕೇರಳದ ಕೆಲ ಮದರಸಗಳಲ್ಲಿ ಈ ಚಟುವಟಿಕೆ ಕಂಡು ಬಂದಿದ್ದು, ಇದಕ್ಕೆ ವಿದೇಶಿ ಹಣ ಹರಿದು ಬರುತ್ತಿದೆ. ಲವ್ ಜಿಹಾದ್ನ ಮಂಚೂಣಿಯಲ್ಲಿರುವುದು ನಿರುದ್ಯೋಗಿ ಯುವಕರು.
ಸಣ್ಣ ಕೆಲಸದಲ್ಲಿದ್ದರೂ, ಶೋಕಿಲಾಲರಂತೆ, ಹಣವಂತರಂತೆ ಬಿಂಬಿಸಿಕೊಂಡು ಉದ್ಯೋಗಿ ಯುವತಿಯರಿಗೆ ಗಾಳ ಹಾಕುವುದು. ತಮ್ಮ ಧರ್ಮದ ಯುವತಿಯರ ಮೂಲಕ ಅನ್ಯ ಧರ್ಮೀಯರ ಪರಿಚಯ ಮಾಡಿಕೊಳ್ಳುತ್ತಾರೆ. ಕೆಲ ದಿನಗಳ ಪ್ರೀತಿ ನಂತರ ಮದುವೆ, ನಂತರ ಮತಾಂತರ. ಮುಂಬಯಿಯಲ್ಲಿ ಪ್ರಾಥಮಿಕ ತರಬೇತಿ ನಂತರ ಯುವ ಪಡೆಗೆ ಕಾಶ್ಮೀರದಲ್ಲಿ ಹೆಚ್ಚಿನ ತರಬೇತಿ ನೀಡಲಾಗುತ್ತದೆ ಎನ್ನಲಾಗಿದೆ.
ತರಬೇತಿಗೆ ಆಯ್ಕೆಯಾದವರು ಅನ್ಯ ಧರ್ಮದ ಯುವತಿಯನ್ನು ಮತಾಂತರಗೊಳಿಸಬೇಕೆಂದು ಷರತ್ತು ಒಡ್ಡಲಾಗುತ್ತದೆ. ವರದಿಗೆ ಆಗ್ರಹ ಲವ್ ಜಿಹಾದ್' ಚಟುವಟಿಕೆ ಕುರಿತು ಮೂರು ವಾರದಲ್ಲಿ ವರದಿ ನೀಡುವಂತೆ ಕೇರಳ ಹೈಕೋರ್ಟ್, ಸರಕಾರಕ್ಕೆ ನಿರ್ದೇಶಿಸಿದೆ. ಮತಾಂತರಕ್ಕೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯದ ಅಭಿಪ್ರಾಯವನ್ನೂ ಪೀಠ ಕೇಳಿದೆ. ಯುವತಿಯರ ಅಪಹರಣ ಹಾಗೂ ಮತಾಂತರಕ್ಕೆ ಸಂಬಂಧಿಸಿದಂತೆ ಇಬ್ಬರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾ.ಕೆ.ಟಿ.ಶಂಕರನ್ ಅವರ ಪೀಠ ಈ ನಿರ್ದೇಶನ ನೀಡಿದೆ.
ಇಂತಹ ಚಟುವಟಿಕೆಗಳಲ್ಲಿ ನಿರತವಾಗಿರುವ ಸಂಘಟನೆ ಯಾವುದು, ಇದಕ್ಕೆ ಹಣ ಎಲ್ಲಿಂದ ಹರಿದುಬರುತ್ತಿದೆ, ಎಷ್ಟು ಮಂದಿ ಮತಾಂತರವಾಗಿದ್ದಾರೆ, ಇದು ಅಖಿಲ ಭಾರತ ಸಂಘಟನೆಯೇ? ಯಾವುದಾದರೂ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದೆಯೇ ಎಂಬ ಮಾಹಿತಿ ನೀಡುವಂತೆ ಪೀಠ ಆದೇಶಿಸಿರುವುದು ಪ್ರಕರಣದ ತೀವ್ರತೆಯನ್ನು ತೋರಿಸುತ್ತಿದೆ.
ರಾಜ್ಯದ ಪ್ರಕರಣ ಚಾಮರಾಜನಗರ ಕುವೆಂಪು ನಗರದ ಸೆಲ್ವರಾಜ್, ತಮ್ಮ ಮಗಳು ಕಳೆದ ಆ. 8ರಂದು ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದರು. ಅಸ್ಗರ್ ಎಂಬಾತ ಆ.15ರಂದು ಫೋನ್ ಮಾಡಿ, ನಿಮ್ಮ ಪುತ್ರಿಯನ್ನು ಮದುವೆಯಾಗುವುದಾಗಿ ಹೇಳಿದ್ದಾನೆ. ಅನಂತರ ಕೆ.ಪಿ. ಪರಿತ್ ಕುಟ್ಟಿ ಎಂಬುವರು ಇನ್ನು ಮುಂದೆ ನೀವು ಮಗಳೊಂದಿಗೆ ಮಾತನಾಡುವಂತಿಲ್ಲ. ಆಕೆ ಮತಾಂತರಗೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಮಗಳನ್ನು ಹುಡುಕುತ್ತ ಪೊಲೀಸರೊಂದಿಗೆ ಕೇರಳದ ಕೊಟ್ಟಾಯಂನ ಎರತ್ತುಪಟ್ಟಿಗೆ ತೆರಳಿದಾಗ ತಂಡವೊಂದು ಇವರನ್ನು ಹಿಂಬಾಲಿಸಿತು. ವಿಧಿಯಿಲ್ಲದೆ ಅಲ್ಲಿಂದ ಹಿಂದಿರುಗಿದೆವು ಎನ್ನುತ್ತಾರೆ ಸೆಲ್ವರಾಜ್.
ಸೆಲ್ವರಾಜ್ ಮಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಪೀಠ, ಲವ್ ಜಿಹಾದ್ ಬಗ್ಗೆ ಮಾಹಿತಿ ಇರುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು ಎಂದು ನಿರ್ದೇಶಿಸಿ, ಅರ್ಜಿದಾರರ ಮಗಳನ್ನು ಹಾಜರು ಪಡಿಸುವಂತೆ ಆದೇಶಿಸಿ ವಿಚಾರಣೆ ಮುಂದೂಡಿದೆ.
(ಸ್ನೇಹಸೇತು - ವಿಜಯ್ ಕರ್ನಾಟಕ)
-
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ












Click it and Unblock the Notifications