ತಿರುವಳ್ಳುವರ್ ಪ್ರತಿಮೆ ಅನಾವರಣ ನಂತರ ಮುಂದೇನು?

* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
ಪರ-ವಿರೋಧಗಳ ಮಧ್ಯೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯು ಅನಾವರಣಗೊಳ್ಳುತ್ತಿದೆ. ಅನಾವರಣವನ್ನು ಸಮರ್ಥಿಸುತ್ತ ಕರ್ನಾಟಕದ ಉಚ್ಚ ನ್ಯಾಯಾಲಯವು ಕನ್ನಡಪರ ಸಂಘಟನೆಗಳಿಗೆ ದಂಡಿಯಾಗಿ ಉಪದೇಶವನ್ನೂ ನೀಡಿದೆ.
ಇನ್ನೀಗ ಆಗಬೇಕಿರುವುದು ಕಾವೇರಿ ಜಲವಿವಾದ, ಹೊಗೇನಕಲ್ ಹಗರಣ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಮುಂತಾಗಿ ತಮಿಳುನಾಡಿನೊಡನೆ ಜ್ವಲಂತವಾಗಿರುವ ಕರ್ನಾಟಕದ ಸಮಸ್ಯೆಗಳ ನಿವಾರಣೆ ಮತ್ತು ಬೆಂಗಳೂರಿನಲ್ಲಿ ತಮಿಳರೂ ಸೇರಿದಂತೆ ಕನ್ನಡೇತರರು ಮೇಲುಗೈ ಸಾಧಿಸಹೊರಡದೆ ಕನ್ನಡಿಗರೊಡನೆ ಬೆರೆತು, ಕನ್ನಡವನ್ನೇ ಮಾತಾಡುತ್ತ, ತಾವೂ ಕನ್ನಡನಾಡಿನ ಪ್ರಜೆಗಳೆಂಬ ವಾಸ್ತವವನ್ನು ಮನಸಾ ಸ್ವೀಕರಿಸಿ ಸಮಾನಭಾವದಿಂದ ಸಾಗುವಂಥ ವಾತಾವರಣದ ಸೃಷ್ಟಿ.
ತಮಿಳುನಾಡಿನೊಡನೆ ಮಾತುಕತೆ ಮೂಲಕ ಸಮಸ್ಯೆಗಳನ್ನು ನಿವಾರಿಸುವುದಾಗಿ ನಮ್ಮ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ. ಪ್ರತಿಮೆಯ ಸ್ಥಾಪನೆಯಾದ ಮರುಕ್ಷಣವೇ ಅವರು ಈ ಆಶ್ವಾಸನೆಯನ್ನು ಗಾಳಿಗೆ ತೂರಿಬಿಡುವ ಲಕ್ಷಣ ಅವರ ಇದುವರೆಗಿನ ಕಾರ್ಯವೈಖರಿಯನ್ನು ಗಮನಿಸಿದಾಗ ಕಾಣುತ್ತದೆ. ನಾಡಿನ ನೆಲ-ಜಲ-ಭಾಷೆಗಳ ವಿಷಯದಲ್ಲಿ ಹೀಗೆ ಮಾಡಿದರೆ ಅದು ಅಕ್ಷಮ್ಯ ಅಪರಾಧ. ನಾಡಿನ ಕೋಟ್ಯಂತರ ಜನರು ಈ ವಿಷಯದಲ್ಲಿ ಮುಖ್ಯಮಂತ್ರಿಗಳ ಭವಿಷ್ಯದ ನಡೆಯೇನೆಂಬುದನ್ನು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಮುಖ್ಯಮಂತ್ರಿಯವರು ತಾನು ನುಡಿದಂತೆ ನಡೆದು ತೋರಿಸಬೇಕು.
ಸಮಸ್ಯೆಗಳು ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳ ಮೆಟ್ಟಿಲು ಹತ್ತಿದ್ದರೂ ಉಭಯ ರಾಜ್ಯಗಳು ಒಂದು ಒಪ್ಪಂದಕ್ಕೆ ಬಂದರೆ ಸಮಸ್ಯೆಗಳ ಇತ್ಯರ್ಥವು ಕಗ್ಗಂಟೇನಲ್ಲ. ಉಭಯ ರಾಜ್ಯಗಳೂ ಒಪ್ಪಂದವನ್ನು ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳಿಗೆ ಸೂಕ್ತ ಮನವಿಯೊಂದಿಗೆ ಕಾನೂನು ರೀತ್ಯಾ ಸಲ್ಲಿಸಿದರಾಯಿತು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿಕೆ ವಿರೋಧಿಸಿ ಗಾಂಧಿ ಎಂಬುವವರು ತಾನು ಹೂಡಿರುವ ಮೊಕದ್ದಮೆಯನ್ನೂ ಕರುಣಾನಿಧಿ ಒಂದು ಸೂಚನೆ ಕೊಟ್ಟರೆ ಸಾಕು, ಹಿಂತೆಗೆದುಕೊಂಡುಬಿಡುತ್ತಾರೆ.
ಇನ್ನು, ಬೆಂಗಳೂರಿನಲ್ಲಿ ತಮಿಳರೂ ಸೇರಿದಂತೆ ಕನ್ನಡೇತರರ ವಿಷಯ. ಈ ವಿಷಯದಲ್ಲಿ ಸರ್ಕಾರದಷ್ಟೇ ಬೆಂಗಳೂರಿನ ಕನ್ನಡಿಗರೂ ಜವಾಬ್ದಾರರು. ಸರ್ಕಾರವು ಯಾವುದೇ ಕಾರಣಕ್ಕಾಗಲೀ ಕನ್ನಡೇತರರನ್ನು ಓಲೈಸುವ ಕೆಲಸಕ್ಕಿಳಿಯಬಾರದು. ಈ ಅನುಮಾನದಿಂದಲೇ ಹಲವರು ಪ್ರತಿಮೆ ಅನಾವರಣವನ್ನು ವಿರೋಧಿಸಿದ್ದೆಂಬುದನ್ನು ಸರ್ಕಾರವು ನೆನಪಿಟ್ಟುಕೊಳ್ಳಬೇಕು.
ಬೆಂಗಳೂರಿನಲ್ಲಿ (ಮತ್ತು ಇಡೀ ಕರ್ನಾಟಕದಲ್ಲೂ ಕೂಡ) ಕನ್ನಡಿಗರು ಕನ್ನಡೇತರರೊಡನೆ ಕನ್ನಡದಲ್ಲೇ ಮಾತನಾಡಬೇಕು ಮತ್ತು ವ್ಯವಹರಿಸಬೇಕು. ಇಂದಿನಿಂದ ಹೀಗೊಂದು ದೃಢಸಂಕಲ್ಪ ಮಾಡಬೇಕು. ಇದೇ ವೇಳೆ, ಕರ್ನಾಟಕದ ರಾಜಧಾನಿಯಲ್ಲಿ ಕನ್ನಡಿಗರು ಆಗಲೇ ಅಲ್ಪಸಂಖ್ಯಾತರಾಗಿಬಿಟ್ಟಿರುವುದರಿಂದ ಇನ್ನುಮೇಲೆ ಅನ್ಯ ರಾಜ್ಯಗಳಿಂದ ಬೆಂಗಳೂರಿಗೆ ಜನರ ಪ್ರವಾಹೋಪಾದಿಯ ವಲಸೆಯನ್ನು ನಿಯಂತ್ರಿಸಲು ಸರ್ಕಾರವು ಕಾನೂನಿನ ಚೌಕಟ್ಟಿನೊಳಗೇ ಕ್ರಮಗಳನ್ನು ಕೈಗೊಳ್ಳಬೇಕು. ಉದ್ಯಮ, ನೌಕರಿ ಇತ್ಯಾದಿ ವಿಷಯಗಳಲ್ಲಿ ಇಂಥ ಕ್ರಮಗಳನ್ನು ಕೈಗೊಳ್ಳಲು ಸರ್ವಥಾ ಸಾಧ್ಯ.
ಶಾಲಾ ಪಠ್ಯದಲ್ಲಿ ಸರ್ವಜ್ಞನ ಬಗ್ಗೆ ಪಾಠವನ್ನು ತಮಿಳುನಾಡು ಸರ್ಕಾರವೂ, ತಿರುವಳ್ಳುವರ್ ಕುರಿತು ಪಾಠವನ್ನು ಕರ್ನಾಟಕ ಸರ್ಕಾರವೂ ಅಳವಡಿಸಲಿ. ತಿರುವಳ್ಳುವರ್ ಪ್ರತಿಮೆಯ ಅನಾವರಣವಾಗಿ ನಾಲ್ಕು ದಿನಗಳ ಅನಂತರ ಸರ್ವಜ್ಞನ ಪ್ರತಿಮೆಯು ಅನಾವರಣಗೊಳ್ಳುತ್ತಿದೆ. ಸರ್ವಜ್ಞನ ಪಾಠವನ್ನು ತಮಿಳುನಾಡು ಸರ್ಕಾರವು ಶಾಲಾಪಠ್ಯದಲ್ಲಿ ಅಳವಡಿಸಿದ ಶೈಕ್ಷಣಿಕ ವರ್ಷದ ಮುಂದಿನ ವರ್ಷ ನಾವು ತಿರುವಳ್ಳುವರ್ ಪಾಠವನ್ನು ಅಳವಡಿಸೋಣ. ಇದಕ್ಕೆ ತಮಿಳುನಾಡು ಸರ್ಕಾರ ಒಪ್ಪಲಿ. ಆಗ ನಮಗೆ ತಮಿಳುನಾಡು ಸರ್ಕಾರದಮೇಲೆ ನಂಬಿಕೆಯೂ ಬರುತ್ತದೆ, ಸೌಹಾರ್ದವೆಂಬ ಮಾತಿಗೆ ಬೆಲೆಯೂ ಇರುತ್ತದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications