ಸಾಧನಕೇರಿ ಸಂಸ್ಥೆಯಿಂದ ಹುತಾತ್ಮ ಯೋಧರಿಗಾಗಿ ಗಾಯನ ನಮನ
ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು ಸಂಸ್ಥೆ ಹಲವು ಸಾಹಿತ್ಯದ ಕೆಲಸಗಳಲ್ಲಿ ತೊಡಗಿರುವ ಸಂಘಟನೆ. ಈ ಮೊದಲು ಎರಡು ಭಾವಗೀತೆಯ ಧ್ವನಿಸುರುಳಿಗಳನ್ನು, ಭಾವಗೀತಾಲೋಕಕ್ಕೆ ನೀಡಿ, ಲತಾ ಹಂಸಲೇಖ, ಎಂ.ಡಿ. ಪಲ್ಲವಿ, ಮಂಗಳರವಿ, ಶ್ರೀರಕ್ಷಾ ಅರವಿಂದ್, ಶ್ವೇತರಂತಹ ದಿಗ್ಗಜರು ಹಾಡಿದ ಗೀತೆಗಳು ಗುನುಗುವ ಬೆನ್ನೆಲ್ಲೇ, ಹೊಸದೊಂದು ಪ್ರಯತ್ನವಾಗಿ ಯೋಧರ ಬಗೆಗಿನ ಭಾವಗೀತೆಗಳ ಧ್ವನಿಸುರುಳಿ ಹೊರ ತರುವ ಸಾಹಸಕ್ಕೆ ಕೈ ಹಾಕಿದೆ.
ಈ ಮೂಲಕ ಮಡಿದ ಯೋಧರಿಗಾಗಿ ಗಾಯನ ನಮನ ಮಾಡುತ್ತಾ, ಯೋಧರ ನೋವು ನಲಿವುಗಳ ಭಾವ ಸಿಂಚನದೊಂದಿಗೆ ದೇಶ ಪ್ರೇಮಿಗಳ ಹೃದಯ ಅರಳಿಸುವ, ಯೋಧರ ತ್ಯಾಗಕ್ಕೆ ನಮನ ಸಲ್ಲಿಸುವ, ಆತ್ಮಸ್ಥೈರ್ಯ ತುಂಬುವ ಸಣ್ಣ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ಈ ಧ್ವನಿ ಸುರುಳಿಯಲ್ಲಿ, ಯೋಧನ ದೇಶಭಕ್ತಿ, ತಾಯಿ ಹಾಗು ಯೋಧ ಮಗನ ಬಾಂಧವ್ಯ, ಸೈನಿಕ ಪತಿಯನ್ನು ಯುದ್ಧಕ್ಕೆ ಕಳುಹಿಸಿ ವಿರಹ ವೇದನೆ ಅನುಭವಿಸುತ್ತಿರುವ ಪತ್ನಿಯ ಅಳಲು ಹೀಗೆ ಯೋಧನ ಜೀವನದ ಹಲವು ಕೋನಗಳನ್ನು ಒಳಗೊಂಡ ಹಾಡುಗಳಿರುತ್ತವೆ.

ಸಾಧನಕೇರಿಯ ಅಧ್ಯಕ್ಷರಾದ ವತ್ಸಲ ಸುರೇಶ್, ಆಸ್ಟ್ರೇಲಿಯಾದ ಕೃಷ್ಣಪ್ರಸಾದ್, ಡಾ. ಶಿವಕುಮಾರ್ ಮಾಲಿ ಪಾಟೀಲ್ ಗಂಗಾವತಿ, ಪ್ರಸಾದ್ ನಾಯ್ಕ್ ದೆಹಲಿ, ಶಿವಾನಂದ್ ಬಡಿಗೇರ್ ಬೆಂಗಳೂರು, ಪಾಲಾಕ್ಷ ಹಾಗಲವಾಡಿ ಗುಬ್ಬಿ ತಮ್ಮದೇ ವಿಶಿಷ್ಟ ರೀತಿಯಲ್ಲಿ ಸಾಹಿತ್ಯದ ಅಣಿಮುತ್ತುಗಳನ್ನು ಪೋಣಿಸಿದ್ದಾರೆ. ಸಾಧನಕೇರಿಯ ವತ್ಸಲರವರು ಅದರ ಉಸ್ತುವಾರಿಯನ್ನು ವಹಿಸಿರುತ್ತಾರೆ.
"ಮೂಡಲ್ ಕುಣಿಗಲ್ ಕೆರೆ" ಚಿತ್ರಗೀತೆಯ ಖ್ಯಾತಿ, ಅಮೆರಿಕಾ ನಿವಾಸಿ ರಾಮ್ ಪ್ರಸಾದ್ ರವರ ರಾಗ ಸಂಯೋಜನೆಯಲ್ಲಿ, ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಅವರ ವಾದ್ಯ ಸಂಯೋಜನೆಯಲ್ಲಿ ಈ ಗೀತೆಗಳು ಅಮೋಘವಾಗಿ ಮೂಡಿ ಬರಲಿವೆ.
ರತ್ನಮಾಲಾ ಪ್ರಕಾಶ್, ಸುಪ್ರಿಯಾ ಆಚಾರ್ಯ, ಗುರುರಾಜ್ ಹೊಸಕೋಟೆ, ಚಿನ್ಮಯಿ ಅತ್ರೇಯಸ್, ಆಸ್ಟ್ರೇಲಿಯಾದ ಪುಷ್ಪ ಜಗದೀಶ್, ಅಮೆರಿಕಾದ ರಾಮ್ ಪ್ರಸಾದ್, ಸೌಮ್ಯಶ್ರೀ, ಸುಮೇಧ, ಸೋಮ ಶೇಖರ್ ಹೀಗೆ ಹೊರದೇಶದ ಕನ್ನಡಿಗರು ಸಹ ಪಾಲ್ಗೊಳ್ಳಲಿದ್ದಾರೆ.
ಧ್ವನಿಸುರುಳಿಯ ಬಿಡುಗಡೆ ಸಮಾರಂಭವನ್ನು ಅದ್ದೂರಿಯಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಗಣ್ಯರ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲು ಸಾಧನಕೇರಿ ಸನ್ನದ್ಧವಾಗಿದೆ. ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ರಮೇಶ್ ಅರವಿಂದ್, ಚಕ್ರವರ್ತಿ ಸೂಲಿಬೆಲೆ, ದಲಿತ ಕವಿ ಸಿದ್ದಲಿಂಗಯ್ಯ ನವರು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಕನ್ನಡ ಚಿತ್ರರಂಗದ ಹಲವು ಮೇರು ನಟರು ಧ್ವನಿಸುರುಳಿಯ ಬಗ್ಗೆ ಮಾತನಾಡಿ ಸಾಧನಕೇರಿಯನ್ನು ಪ್ರೊತ್ಸಾಹಿಸಿ, ಯೋಧರಿಗೊಂದು ನಮನ ಸಲ್ಲಿಸಲಿರುವುದು ನಮ್ಮ ಸುಕೃತ. ಇದಕ್ಕೆಲ್ಲ ಮುಖ್ಯ ಕಾರಣ ರಾಂಪ್ರಸಾದ್. ಅವರಿಗೆ ಸಾಧನಕೇರಿ ಅಭಾರಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಯೋಧ ಧ್ವನಿಸುರುಳಿ ಸದ್ದು ಮಾಡಲಿದೆ. ಏಕ ಕಾಲದಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾದಲ್ಲಿ ಧ್ವನಿಸುರುಳಿ ಬಿಡುಗಡೆಯಾಗುತ್ತಲಿರುವುದು ವಿಶೇಷ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications