ಭೈರವಿ ರಾಗದ ಪಟ್ಟಮ್ಮಾಳ್ ವಿಧಿವಶ

ದಿವಂಗತ ಎಂ ಎಸ್ ಸುಬ್ಬಲಕ್ಷ್ಮಿ, ದಿವಂಗತ ಎಮ್ ಎಲ್ ವಸಂತಕುಮಾರಿ ಅವರೊಂದಿಗೆ ಪಟ್ಟಮ್ಮಾಳ್ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಹಿಳಾ ತ್ರಿಮೂರ್ತಿಗಳಲ್ಲಿ ಒಬ್ಬರು. 1919 ರಲ್ಲಿ ಕಾಂಚೀಪುರದಲ್ಲಿ ಜನಿಸಿದ ಅವರು ತಮ್ಮ ಆರನೇ ವಯಸ್ಸಿನಲ್ಲಿ ಸಂಗೀತದತ್ತ ಆಕರ್ಷಿತರಾದರು. 1966 ರಿಂದ ಆಕಾಶವಾಣಿಯ ಪ್ರಮುಖ ಗಾಯಕರಾಗಿದ್ದರು. ಜರ್ಮನಿ ಹಾಗೂ ಫ್ರಾನ್ಸ್ ಅಂತಾರಾಷ್ಟ್ರೀಯ ಸಂಗೀತೋತ್ಸವದಲ್ಲಿ ಭಾಗವಹಿಸಿದ್ದ ಅವರು, ನಾನಾ ಭಾಷೆಗಳ ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿಯೂ ಧ್ವನಿ ನೀಡಿದ್ದರು.
ಸಾಂಪ್ರದಾಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ (ಅಲಮೇಲು ಮೂಲನಾಮ) ಪಟ್ಟಮ್ಮಾಳ್ ಅವರನ್ನು ತಮಿಳು ಕವಿ ವೈರಮುತ್ತು ಅವರು ಪಟ್ಟಮ್ಮಾಳ್ ಎಂದು ಪ್ರೀತಿಯಿಂದ ಕರೆದರು. ಹಾಡುಗಾರಿಕೆಯ ರೂಪಕ ಎಂಬ ಅರ್ಥದಲ್ಲಿ ಹೀಗೆ ಕರೆಯಲಾಗುತ್ತದೆ. ಇವರ ತಂದೆ ದಮಲ್ ಕೃಷ್ಣಸ್ವಾಮಿ ದೀಕ್ಷಿತರಿಗೆ ಸಂಗೀತದ ಬಗ್ಗೆ ಆಳವಾದ ಆಸಕ್ತಿ ಇತ್ತು. ತಾಯಿ ಕಾಂತಿಮತಿ ಅವರು ಉತ್ತಮ ಗಾಯಕಿಯಾಗಿದ್ದರು. 1939ರಲ್ಲಿ ಆರ್ ಈಶ್ವರನ್ ಅವರೊಂದಿಗೆ ಪಟ್ಟಮ್ಮಾಳ್ ಅವರ ವಿವಾಹವಾಯಿತು. ನಂತರ ದಿನಗಳಲ್ಲಿ ವೃತ್ತ ಜೀವನ ಉತ್ತುಂಗದ ಸವಿಯನ್ನು ಸವಿದರು.
(ಏಜನ್ಸೀಸ್)












Click it and Unblock the Notifications