Get Updates
Get notified of breaking news, exclusive insights, and must-see stories!

ನಾಡಗೀತೆಗೆ ವಿವಾದ: ಕತ್ತರಿಸಿದ ಸಾಲುಗಳನ್ನು ಅಂಟಿಸಿದ ಸರ್ಕಾರ

ಬೆಂಗಳೂರು : ನಾಡಗೀತೆಯ ಕತ್ತರಿ ಪ್ರಯೋಗ ಆದೇಶವನ್ನು ರಾಜ್ಯ ಸಚಿವ ಸಂಪುಟ ವಾಪಸು ಪಡೆದಿದ್ದು, ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ಗೀತೆಯ ಮೂಲ ಪಠ್ಯವನ್ನು ನಾಡಗೀತೆಯಾಗಿ ಪುನಃ ಅಂಗೀಕರಿಸಿದೆ.

ಶಂಕರ ರಾಮಾನುಜ ವಿದ್ಯಾರಣ್ಯ / ಬಸವೇಶ್ವರ ರಿಹ ದಿವ್ಯಾರಣ್ಯ ಎನ್ನುವ ಚರಣಗಳು ಸೇರಿದಂತೆ ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಕವಿತೆಯ ಎಲ್ಲ ಸಾಲುಗಳನ್ನೂ , ಆ ಸಾಲುಗಳ ಮೂಲರೂಪದಲ್ಲಿಯೇ ನಾಡಗೀತೆಯನ್ನಾಗಿ ಸರ್ಕಾರ ಅಂಗೀಕರಿಸಿದೆ. ಜ.20ರ ಮಂಗಳವಾರ ನಡೆದ ಸಚಿವ ಸಂಪುಟ ಸಭೆ ಈ ಮಹತ್ವದ ತೀರ್ಮಾನ ಕೈಗೊಂಡಿತು. ಸರ್ಕಾರ ಅಂಗೀಕರಿಸಿರುವ ನಾಡಗೀತೆಯಲ್ಲಿ ಮಧ್ವಾಚಾರ್ಯರ ಹೆಸರು ಇಲ್ಲ .

ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ತಾ ಸಚಿವ ಡಾ.ಜಿ.ಪರಮೇಶ್ವರ- ಸರ್ಕಾರ ನಾಡಗೀತೆಯ ಸಾಹಿತ್ಯದಲ್ಲಿ ಹೊಸತನ್ನು ಸೇರಿಸುವುದೂ ಇಲ್ಲ , ಮೂಲರೂಪವನ್ನು ಬಿಡುವುದೂ ಇಲ್ಲ ಎಂದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+