Get Updates
Get notified of breaking news, exclusive insights, and must-see stories!

ಮೋಹನ್ ಭಾಗವತ್ ರಿಂದ ಆ.12ಕ್ಕೆ 'ನಿರ್ಮಾಲ್ಯ' ಕೃತಿ ಲೋಕಾರ್ಪಣೆ

ಬೆಂಗಳೂರು, ಆಗಸ್ಟ್ 11: ಕ್ಯಾನ್ಸರ್ ನಂಥ ಮಹಾಮಾರಿ ದೇಹದೊಳಗಿದ್ದರೂ ಮೊಗದಲ್ಲೆಂದಿಗೂ ನಗು ಮಾಸದಂತೆ ಬದುಕಿದವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ನಾ ಕೃಷ್ಣಪ್ಪ.

ಅವರ ಆದರ್ಶ ಬದುಕನ್ನು ಮೆಲುಕು ಹಾಕುವ ಆರೆಸ್ಸೆಸ್ ನ ಹಿರಿಯ ಪ್ರಚಾರಕರಾದ ಸಂದ್ರಶೇಖರ ಭಂಡಾರಿ ಅವರು ಬರೆದ 'ನಿರ್ಮಾಲ್ಯ' ಎಂಬ ಕೃತಿ ಆ.12, ಭಾನುವಾರದಂದು ಸಂಜೆ 5:30 ಕ್ಕೆ ಬಿಡುಗಡೆಯಾಗುತ್ತಿದೆ.

ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ಸರ್ ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ.

RSS chief Mihan Bhagwat to release Nirmalya book in Bengaluru on Aug 12

ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಆರೆಸ್ಸೆಸ್ ನ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಗ್ರಂಥ ಪರಿಚಯ ಮಾಡಿಕೊಡಲಿದ್ದಾರೆ.

ಸಹೃದಯರು ಕಾರ್ಯಕ್ರಮಕ್ಕೆ 10 ನಿಮಿಷ ಮುಂಚಿತವಾಗಿಯೇ ಆಗಮಿಸುವಂತೆ ಕೋರಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+