ಶ್ರೀವತ್ಸ ಜೋಶಿಯವರ 'ಪುಳಕದ ಟಚ್'ನಲ್ಲೇನಿದೆ?

ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟವಾಗುತ್ತಿದ್ದ 'ಪರಾಗಸ್ಪರ್ಶ' ಅಂಕಣ ಬರಹಗಳ ಸಂಕಲನವೇ 'ಪುಳಕದ ಟಚ್'. ಕಳೆದ ವರ್ಷ ಇದೇ ಅಂಕಣ ಬರಹದ ಎರಡು ಸಂಕಲನಗಳಾದ 'ಚೆಲುವಿನ ಟಚ್' ಮತ್ತು 'ಗೆಲುವಿನ ಟಚ್' ಬಿಡುಗಡೆಯಾಗಿದ್ದವು. ಒನ್ಇಂಡಿಯಾ ಕನ್ನಡದಲ್ಲಿ ಕೂಡ ಜೋಶಿಯವರು 2000ರಿಂದ 5 ವರ್ಷಗಳ ಕಾಲ 'ವಿಚಿತ್ರಾನ್ನ' ಅಂಕಣ ಬರೆಯುತ್ತಿದ್ದರು. ಆ ಅಂಕಣ ಬರಹಗಳು ಕೂಡ ಮೂರು ಭಾಗಗಳಲ್ಲಿ ಪ್ರಕಟವಾಗಿವೆ (ವಿಚಿತ್ರಾನ್ನ, ಇನ್ನೊಂದಿಷ್ಟು ವಿಚಿತ್ರಾನ್ನ, ಮತ್ತೊಂದಿಷ್ಟು ವಿಚಿತ್ರಾನ್ನ).
ಪುಳಕದ ಟಚ್ ಪುಸ್ತಕದಲ್ಲೇನಿದೆ? : ಯಾಂತ್ರಿಕ ಬದುಕಿನಲ್ಲಿ ನೈಜ ಜೀವನ ಸೌಂದರ್ಯವನ್ನು ಎಲ್ಲರಿಗೂ ಸರಳವಾಗಿ ತಿಳಿಸಬೇಕೆಂಬ ಅರ್ಥಪೂರ್ಣ ಕಾಳಜಿ ಮತ್ತು ಲಘು ಹಾಸ್ಯದ ಧಾಟಿಯಲ್ಲಿ ಓದುಗರನ್ನು ನಕ್ಕುನಗಿಸುತ್ತಲೇ ಚಿಂತನೆಗೆ ಹಚ್ಚುವ ವಿಶಿಷ್ಟ ಕರಾಮತ್ತುಗಳು ಈ ಬರಹಗಳಲ್ಲಿ ವಿಪುಲವಾಗಿ ಕಾಣಿಸುತ್ತವೆ.
ಪ್ರತಿಯೊಂದು ಲೇಖನವೂ ಅದರ ವಸ್ತುವಿನ ಸುತ್ತ ಮಾತ್ರ ಸುತ್ತದೆ ವಿವಿಧ ಸಂಗತಿಗಳ ಸಾಧ್ಯತೆ, ಹೊಂದಿಕೆ, ಹೋಲಿಕೆಗಳಿಂದ ಸೃಜನಶೀಲವಾಗುತ್ತದೆ. ಎಷ್ಟೋಸರ್ತಿ ಲೇಖನದ ತಲೆಬರಹವೇ ಓದುವಂತೆ ಪ್ರೇರೇಪಿಸುತ್ತದೆ. ಆರಂಭಿಕ ಹಂತದಲ್ಲೇ ಓದುಗರ ಮನಸ್ಸನ್ನು ಹೈಜಾಕ್ ಮಾಡುತ್ತದೆ. ಕೊನೆತನಕ ಸಲೀಸಾಗಿ ಓದಿಸಿ ಅನುಪಮ ಆನಂದಕ್ಕೆ, ಹದವಾದ ಹಿತಾನುಭವಕ್ಕೆ ಕಾರಣವಾಗುತ್ತದೆ.
ಬಾಲ್ಯ ಕಳೆದ ಹಳ್ಳಿ ಪರಿಸರದ ಸುಂದರ ನೆನಪುಗಳು, ಶಿಕ್ಷಣ ಮತ್ತು ವೃತ್ತಿಯಿಂದ ಬಂದಿರುವ ಎಂಜಿನಿಯರ್ ಮನಸ್ಸು, ತಾರ್ಕಿಕ ವಿಶ್ಲೇಷಣೆ, ಸಣ್ಣಸಣ್ಣ ಸಂಗತಿಗಳಲ್ಲೂ ಸ್ವಾರಸ್ಯವನ್ನು ಹುಡುಕುವ ಮನೋಭಾವ, ಅಕ್ಷರಗಳೊಂದಿಗೆ ಆಟವಾಡುತ್ತ ಪದವಿನೋದದಿಂದ ಹೊಸಹೊಸ ಅರ್ಥಗಳನ್ನು ಹುಟ್ಟುಹಾಕುತ್ತ ಸಾಗುವ ನವಿರಾದ ನಿರೂಪಣೆ- ಇವೆಲ್ಲವೂ ಶ್ರೀವತ್ಸ್ ಜೋಶಿಯವರ ಬರವಣಿಗೆಗೆ ತನ್ನದೇ ಆದ ಛಾಪು ನೀಡುತ್ತದೆ.
ಕಲೆ, ವಿಜ್ಞಾನ, ಸಂಸ್ಕೃತಿ ಎಲ್ಲವನ್ನೂ ಒಳಗೊಂಡ ವಿಷಯಗಳು ಆಮೀಬದಿಂದ ಅನಂತದತ್ತ ಸಾಗುತ್ತವೆ. ಸಣ್ಣಸಣ್ಣ ಸ್ವಾರಸ್ಯಕರ ಸಂಗತಿಗಳನ್ನು ಬೀಜದೊಳಗಿನ ವೃಕ್ಷದಂತೆ ಮುಂದಿಟ್ಟು ಓದುಗರನ್ನು ಸೂಕ್ಷ್ಮಗ್ರಾಹಿಗಳನ್ನಾಗಿ ಮಾಡುತ್ತವೆ.
ಪುಳಕದ ಟಚ್ ವಿವರಗಳು
ಪುಸ್ತಕದ ಹೆಸರು : "ಪರಾಗಸ್ಪರ್ಶ- ಪುಳಕದ ಟಚ್!" (ಇದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಜುಲೈ 2011ರಿಂದ ಮೇ 2012ರ ಅವಧಿಯಲ್ಲಿ ಪ್ರಕಟವಾದ 'ಪರಾಗಸ್ಪರ್ಶ' ಅಂಕಣ ಬರಹಗಳ ಸಂಕಲನ)
ಲೇಖಕ : ಶ್ರೀವತ್ಸ ಜೋಶಿ
ಪ್ರಕಾಶಕರು : ಗೀತಾ ಬುಕ್ ಹೌಸ್, ಮೈಸೂರು
ಮುಖಪುಟ ವಿನ್ಯಾಸ : ವಿನಯ್ ಸಾಯ, ಉಡುಪಿ
ಬೆಲೆ : ರೂ.135
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications