ಬೆಂಗಳೂರಿಗೆ ಶ್ರೀವತ್ಸ ಜೋಶಿ-ಭಾನುವಾರ ಪುಸ್ತಕ ಬಿಡುಗಡೆ

ಈ ಸ್ನೇಹಸ್ಪರ್ಶ ಕಾರ್ಯಕ್ರಮ ಭಾನುವಾರ ಜುಲೈ 3, 2011ರಂದು ಬೆಳಿಗ್ಗೆ ಹತ್ತು ಗಂಟೆಗೆ ಬೆಂಗಳೂರು ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ಆತ್ಮೀಯ ಕಾರ್ಯಕ್ರಮದಲ್ಲಿ ಅಂಕಣಕಾರನೊಡನೆ ನೇರ ಮಾತುಕತೆಗೆ ಅವಕಾಶವಿರುತ್ತದೆ. ಲಘು ಉಪಾಹಾರದ ನಂತರ ಕಾರ್ಯಕ್ರಮ ಆರಂಭ.
ಇದೇ ಸಂದರ್ಭದಲ್ಲಿ ಅಂಕಣದ ಇತ್ತೀಚಿನ ಬರಹಗಳ ಸಂಕಲನದ ಎರಡು ಪುಸ್ತಕಗಳು ('ಗೆಲುವಿನ ಟಚ್" ಮತ್ತು 'ಚೆಲುವಿನ ಟಚ್" - ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಬಿಡುಗಡೆಯಾಗುತ್ತಿವೆ. ಖ್ಯಾತ 'ಹನಿ"ಸಾಹಿತಿ ಎಚ್.ಡುಂಡಿರಾಜ್ ಮತ್ತು ಪತ್ರಕರ್ತ ನಾಗೇಶ ಹೆಗಡೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.
ಇದು ಉದ್ದುದ್ದ ಭಾಷಣಗಳ ಕಾರ್ಯಕ್ರಮವಲ್ಲ. Informal friendly get-together ಮಾದರಿಯದು. ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಮ್ಮನ್ನೂ ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇನೆ. ಬನ್ನಿ ಎನ್ನುತ್ತಿದ್ದಾರೆ ಇವತ್ತು ತಾನೇ ಬೆಂಗಳೂರಿಗೆ ಬಂದಿಳಿದ ಅಂಕಣಕಾರ ಜೋಶಿ.












Click it and Unblock the Notifications