Get Updates
Get notified of breaking news, exclusive insights, and must-see stories!

ಬೆಂಗಳೂರಿಗೆ ಶ್ರೀವತ್ಸ ಜೋಶಿ-ಭಾನುವಾರ ಪುಸ್ತಕ ಬಿಡುಗಡೆ

Srivatsa Joshi Book Release
ಬೆಂಗಳೂರು ಜೂ 30: ವಿಜಯ ಕರ್ನಾಟಕ ದಿನಪತ್ರಿಕೆಯ ಪರಾಗಸ್ಪರ್ಶ ಅಂಕಣದ ಓದುಗಬಳಗವನ್ನು ಒಂದೆಡೆ ಸೇರಿಸುವ ಸ್ನೇಹಸಮಾವೇಶವನ್ನು ಅನಿವಾಸಿ ಲೇಖಕ ಶ್ರೀವತ್ಸ ಜೋಶಿ ಹಮ್ಮಿಕೊಂಡಿದ್ದಾರೆ.

ಈ ಸ್ನೇಹಸ್ಪರ್ಶ ಕಾರ್ಯಕ್ರಮ ಭಾನುವಾರ ಜುಲೈ 3, 2011ರಂದು ಬೆಳಿಗ್ಗೆ ಹತ್ತು ಗಂಟೆಗೆ ಬೆಂಗಳೂರು ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ಆತ್ಮೀಯ ಕಾರ್ಯಕ್ರಮದಲ್ಲಿ ಅಂಕಣಕಾರನೊಡನೆ ನೇರ ಮಾತುಕತೆಗೆ ಅವಕಾಶವಿರುತ್ತದೆ. ಲಘು ಉಪಾಹಾರದ ನಂತರ ಕಾರ್ಯಕ್ರಮ ಆರಂಭ.

ಇದೇ ಸಂದರ್ಭದಲ್ಲಿ ಅಂಕಣದ ಇತ್ತೀಚಿನ ಬರಹಗಳ ಸಂಕಲನದ ಎರಡು ಪುಸ್ತಕಗಳು ('ಗೆಲುವಿನ ಟಚ್" ಮತ್ತು 'ಚೆಲುವಿನ ಟಚ್" - ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಬಿಡುಗಡೆಯಾಗುತ್ತಿವೆ. ಖ್ಯಾತ 'ಹನಿ"ಸಾಹಿತಿ ಎಚ್.ಡುಂಡಿರಾಜ್ ಮತ್ತು ಪತ್ರಕರ್ತ ನಾಗೇಶ ಹೆಗಡೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.

ಇದು ಉದ್ದುದ್ದ ಭಾಷಣಗಳ ಕಾರ್ಯಕ್ರಮವಲ್ಲ. Informal friendly get-together ಮಾದರಿಯದು. ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಮ್ಮನ್ನೂ ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇನೆ. ಬನ್ನಿ ಎನ್ನುತ್ತಿದ್ದಾರೆ ಇವತ್ತು ತಾನೇ ಬೆಂಗಳೂರಿಗೆ ಬಂದಿಳಿದ ಅಂಕಣಕಾರ ಜೋಶಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+