ಗೋಪಿನಾಥ್ ಜೀವನಚರಿತ್ರೆಗೆ ಶೇ.30 ರಿಯಾಯಿತಿ

ಕನ್ನಡಿಗರು ಹೆಮ್ಮೆಪಡುವಂತಹ ಹಾಗೂ ಎಲ್ಲರಿಗೂ ಎಲ್ಲ ಕಾಲಕ್ಕೂ ಮಾದರಿ ವ್ಯಕ್ತಿ ಎನಿಸಿರುವ ಏರ್ ಡೆಕ್ಕನ್ ಎಂಬ ವಿಮಾನಯಾನ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ ಗೌರವಕ್ಕೆ ಪಾತ್ರರಾಗಿರುವ ಕ್ಯಾಪ್ಟನ್ ಗೋಪಿನಾಥ್ ಅವರ ಮಾತುಗಳಿವು. ನಗರದ ಹೋಟೆಲ್ ಗೇಟ್ ವೇಯಲ್ಲಿ ತಮ್ಮ ಆತ್ಮಚರಿತ್ರೆ 'ಸಿಂಪ್ಲಿ ಫ್ಲೈ, ಎ ಡೆಕ್ಕನ್ ಒಡಿಸ್ಸಿ (Simply Fly - A Deccan Odyssey)' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಮಾತಿನುದ್ದಕ್ಕೂ ವ್ಯವಸ್ಥೆ, ಯುವಜನಾಂಗ, ಮುಂದಿನ ಪೀಳಿಗೆ, ರಾಜಕಾರಣ, ಅಭಿವೃದ್ಧಿ ಜೊತೆಗೆ ಯಶಸ್ಸಿನ ಬಗ್ಗೆ ಅನೇಕ ಸಲಹೆ, ಸೂಚನೆಗಳನ್ನು ನೀಡಿದರಲ್ಲದೇ ತಮ್ಮ ಯಶಸ್ವಿ ಜೀವನದ ರಹದಾರಿಯನ್ನು ಹಂಚಿಕೊಂಡರು.
ಕನಸು ಕಾಣುವುದನ್ನು ಬಿಡಬೇಡಿ, ಕನಸುಗಳ ಬೆನ್ನಹತ್ತಿ, ಈ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ, ನಿಧಾನವಾದರೂ ಸಾಕಾರವಾಗುತ್ತೆ. ಕನಸು ಬೆನ್ನತ್ತಿ ಯಶ ಕಾಣುತ್ತಿರುವವರು ಒಂದು ಕಡೆ. ಯಶಸ್ಸು ಕಂಡು ವ್ಯವಸ್ಥೆ ಬಗ್ಗೆ ಅನಾದರ ಹೊಂದಿರುವ ದೊಡ್ಡ ವರ್ಗ ಇನ್ನೊಂದು ಕಡೆ. ಈ ಎರಡೂ ವರ್ಗದ ನಡುವೆ ಸಮನ್ವಯ ಹಾಗೂ ಸೌಹಾರ್ದ ಮೂಡದ ಹೊರತು ನಮ್ಮ ವ್ಯವಸ್ಥೆ ಸುಧಾರಿಸಲು ಸಾಧ್ಯವಿಲ್ಲ ಎಂದು ಗೋಪಿನಾಥ್ ಅಭಿಪ್ರಾಯಪಟ್ಟರು.
ಇನ್ಫೋಸಿಸ್ ಸಂಸ್ಥಾಪಕ ಎನ್ಆರ್ ನಾರಾಯಣಮೂರ್ತಿ ಪುಸ್ತಕವನ್ನು ಬಿಡುಗಡೆ ಮಾಡಿದರು. ಮೈಂಡ್ ಟ್ರೀ ಮುಖ್ಯಸ್ಥ ಸುಬ್ರತೋ ಬ್ಯಾನರ್ಜಿ, ಶಿಕ್ಷಣ ತಜ್ಞ ಪಂಕಜ್ ಚಂದ್ರ, ನಟಿ ಸುಹಾಸಿನಿ, ಟೆನಿಸ್ ಪಟು ವಿಜಯ್ ಅಮೃತರಾಜ್, ನೃತ್ಯಗಾತಿ ವಾಣಿ ಗಣಪತಿ, ವಿಜಯ್ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಂಗ್ಲ ಭಾಷೆಯಲ್ಲಿರುವ ಗೋಪಿನಾಥ್ ಆತ್ಮಚರಿತ್ರೆಯನ್ನು ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ತರುತ್ತಿದ್ದಾರೆ. ನಾನೂರು ಪುಟಗಳಿರುವ ಪುಸ್ತಕದ ಬೆಲೆ 499 ರು.
Buy Simply Fly by Capt. Gopinath @ 30% discount
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications