ಜಲಿಯನ್ ವಾಲಾ ಬಾಗ್ ಕೃತಿ ಲೋಕಾರ್ಪಣೆ

ಇದಕ್ಕೂ ಮುನ್ನ ಪ್ರಾಸ್ತಾವಿಕ ನುಡಿಗಳನ್ನಾಡಿದ ಲೇಖಕ ಶಿವಪ್ರಸಾದ್, ಇಸ್ರೋ ಸಂಸ್ಥೆ ಹಾಗೂ ಬಾಲ್ಯದಲ್ಲಿ ವಿಜ್ಞಾನ ಹಾಗೂ ಇತಿಹಾಸದಲ್ಲಿ ಮೂಡುತ್ತಿದ್ದ ಸಹಜ ಕುತೂಹಲವೇ ತಾವು ಈ ಕೃತಿಗಳನ್ನು ರಚಿಸಲು ಕಾರಣ ಎಂದರು. ಇಂದಿಗೆ (ಏ.13) ಸಂಜೆ 6 ಕ್ಕೆ ಸರಿಯಾಗಿ ಜಲಿಯನ್ ವಾಲಾ ಹತ್ಯಾಕಾಂಡ ನಡೆದು 90 ವರ್ಷಗಳಾಗುತ್ತದೆ. ಚಂದ್ರಯಾನ ಕೃತಿಯನ್ನು ಹೆಮ್ಮೆಯ ವಿಜ್ಞಾನಿ ಅಬ್ದುಲ್ ಕಲಾಂ ಅವರು ದೆಹಲಿಯಲ್ಲಿ ಅನಾವರಣಗೊಳಿಸಿ, ಪುಸ್ತಕದ ಬಗ್ಗೆ ಮೆಚ್ಚುಗೆಯ ಮಾತಾಡಿದ್ದನ್ನು ಸ್ಮರಿಸಿಕೊಂಡರು.
ಸುಧಾಕರ್ ಚತುರ್ವೇದಿ, ಸ್ವಾತಂತ್ರ ಹೋರಾಟಗಾರರು : ಮೌಢ್ಯ ಮತ್ತು ಅಜ್ಞಾನ ಸಮಾಜಕ್ಕೆ ಕಂಟಕವಾದದ್ದು. ನಾನು ಭಾರತೀಯನಾಗಿ ಹುಟ್ಟಿರುವುದಕ್ಕೆ ಹೆಮ್ಮೆಯಿದೆ. ನಾವು ಜಾತಿ ಪಂಥವನ್ನು ಮರೆತು ಮೊದಲು ಮಾನವರಾಗೋಣ ಎಂದರು. ಶ್ರೀಯುತರು 1919 ರಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಗಳಾಗಿದ್ದಾರೆ. 120 ವರ್ಷದ ಹರೆಯದಲ್ಲೂ ಉತ್ಸಾಹದ ಮಾತುಗಳನ್ನಾಡಿ ಲೇಖಕರನ್ನು ಹುರಿದುಂಬಿಸಿದರು.
ಜಿಬಿ ಹರೀಶ್, ವಿಮರ್ಶಕ: ಇತಿಹಾಸ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ವಿಶೇಷ ಸಂಗತಿ. ಶಿವಪ್ರಸಾದ್ ಅವರ ನಿರೂಪಣೆ ಸ್ವಾರಸ್ಯವಾಗಿದೆ. ಕಥೆ ರೀತಿಯಲ್ಲಿ ವಿಜ್ಞಾನದ ವಿಷಯವನ್ನು ಹೇಳಿದ್ದಾರೆ. ಇನ್ನು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಇರಬಹುದು, ಇತರೆ ಸ್ವಾತಂತ್ರ್ಯ ಸಂಗ್ರಾಮ ಇರಬಹುದು. ಕಾಲಾಂತರದಲ್ಲಿ ಎಲ್ಲಕ್ಕೂ ಸಮರ್ಪಕ ಪ್ರತಿಕ್ರಿಯೆ ಸಿಗುತ್ತದೆ. ಇದಕ್ಕೆ ಅಯೋಧ್ಯಾ ಮಂದಿರ ವಿವಾದವೂ ಹೊರತಾದುದಲ್ಲ ಎಂದರು.
ಇಸ್ರೋ(ಇಸ್ಟ್ರಾಕ್) ಕೇಂದ್ರ ನಿರ್ದೇಶಕ ವಿಜ್ಞಾನಿ ಎಸ್ ಕೆ ಶಿವಕುಮಾರ್ ಅವರು 'ಚಂದ್ರಯಾನ ' ಪುಸ್ತಕವನ್ನು ಅನಾವರಣ ಮಾಡಿ, ಚಂದ್ರಯಾನ ಯೋಜನೆಯ ಕಷ್ಟನಷ್ಟಗಳು, ಲಾಭಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಟಿವಿ 9 ನ ನಿರ್ದೇಶಕ ಮಹೇಂದ್ರ ಮಿಶ್ರಾ ಹಾಗೂ ಪುಸ್ತಕಗಳ ವಿನ್ಯಾಸಕಾರ ವೀರೇಶ್ ಹೊಗೆಸೊಪ್ಪಿನವರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಂಗನಾಥ್ ಭರಧ್ವಾಜ್ ಮಾಡಿದರು.
(ದಟ್ಸ್ ಕನ್ನಡ ಸಭೆ ಸಮಾರಂಭ)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications