ಕಡಲ ತಡಿಯ ತಲ್ಲಣ ಪುಸ್ತಕ ಲೋಕಾರ್ಪಣೆ
ನವದೆಹಲಿ, ಬೆಂಗಳೂರು, ಮಾ. 26: ಸೃಷ್ಟಿ ಪಬ್ಲಿಕೇಶನ್ಸ್, ಬೆಂಗಳೂರು ಇವರು ಹೊರ ತಂದಿರುವ ಉಷಾ ಕಟ್ಟೆಮನೆ ಮತ್ತು ಡಾ. ಪುರುಷೋತ್ತಮ ಬಿಳಿಮಲೆ ಸಂಪಾದಿಸಿದ "ಕಡಲ ತಡಿಯ ತಲ್ಲಣ" ಕರಾವಳಿಯ ಬಹುಸಂಸ್ಕೃತಿಯ ಕುರಿತ ಲೇಖನಗಳ ಸಂಕಲನಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಜಲಜಾರಾಜು ಅವರಿಂದ ಕರಾವಳಿಯ ಕುರಿತಾದ ಹಾಡುಗಳ ಗಾಯನ ಸಹ ಇರುತ್ತದೆ.
ಬಿಡುಗಡೆ:
ಕೆ.ಎಸ್. ಸಚ್ಚಿದಾನಂದ ಮೂರ್ತಿ
ಸ್ಥಾನೀಯ ಸಂಪಾದಕರು, ದಿ ವೀಕ್.
ಅಧ್ಯಕ್ಷತೆ:
ಐ. ರಾಮಮೋಹನ ರಾವ್
ಪ್ರಧಾನ ಸಂಪಾದಕರು, ಎ. ಎನ್. ಐ. ನವದೆಹಲಿ
ಪುಸ್ತಕದ ಕುರಿತು:
ಉಷಾ ಭರತಾದ್ರಿ
ಬಾಲಕೃಷ್ಣ ನಾಯ್ಕ್ ಡಿ.
ಸ್ಥಳ: ದೆಹಲಿ ಕನ್ನಡ ಶಾಲೆ, ಲೋಧಿ ಎಸ್ಟೇಟ್, ನವದೆಹಲಿ.
ದಿನಾಂಕ: 29.03.2009
ಸಮಯ: ಸಾಯಂಕಾಲ 4.00ಗಂಟೆಗೆ
********
ಇದೇ "ಕಡಲ ತಡಿಯ ತಲ್ಲಣ ' ಪುಸ್ತಕವನ್ನು ಬೆಂಗಳೂರಿನಲ್ಲಿ ಮಾರ್ಚ್ 28ರ ಇಳಿ ಸಂಜೆ 6ಗಂಟೆಗೆ ಅನಾವರಣಗೊಳಿಸಲಾಗುವುದು.
ಅಧ್ಯಕ್ಷತೆ:ಬರಗೂರು ರಾಮಚಂದ್ರಪ್ಪ [ಸಾಹಿತಿಗಳು]
ಕೃತಿ ಬಿಡುಗಡೆ: ಪ್ರೊ. ಎಸ್. ಶೆಟ್ಟರ್ [ಇತಿಹಾಸ ತಜ್ಞರು]
ಮುಖ್ಯ ಅತಿಥಿಗಳು: ವಿಲ್ಲಿ.ಆರ್.ಡಿ"ಸಿಲ್ವಾ [ ಸಮಾಜ ಶಾಸ್ತ್ರಜ್ಞರು]
ಉಪಸ್ಥಿತಿ: ಎನ್ .ಎ.ಎಮ್ ಇಸ್ಮಾಯಿಲ್ [ಪತ್ರಕರ್ತರು]
ದಿನಾಂಕ : ಮಾರ್ಚ್28. ಶನಿವಾರ;
ಸಮಯ: ಸಂಜೆ 6ಕ್ಕೆ
ಸ್ಥಳ: ರವೀಂದ್ರ ಕಲಾಕ್ಷೇತ್ರದ "ಸಂಸ" ಬಯಲು ರಂಗ ಮಂದಿರ. ಬೆಂಗಳೂರು.
"ತಲ್ಲಣ"ದಲ್ಲಿ ಭಾಗಿಯದವರು:
ವಡ್ಡರ್ಸೆ ರಘುರಾಮ ಶೆಟ್ಟಿ, ಶಿವರಾಮ ಕಾರಂತ, ದಿನೇಶ್ ಅಮೀನ್ ಮಟ್ಟು, ಯು.ಆರ್. ಅನಂತಮೂರ್ತಿ, ಸಾರಾ ಅಬೂಬಕ್ಕರ್, ವಿವೇಕರೈ, ಕೆ.ವಿ. ತಿರುಮಲೇಶ್, ಜಿ. ರಾಮಕೃಷ್ಣ, ಬೊಳುವಾರು ಮಹಮ್ಮದ್ ಕುಂಞ, ನಿರಂಜನ, ಪ್ರೋ.ಮರಿಯಪ್ಪಭಟ್ಟ.......ಇನ್ನೂ ಅನೇಕರಿದ್ದಾರೆ
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications