ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ.ಸೀತಾರಾಮ್‌ ಅವರ ‘ಮನಮಂಥನ’ ಬಿಡುಗಡೆ

By Staff
|
Google Oneindia Kannada News

ಬೆಂಗಳೂರು : ಹಿರಿಯ ಪತ್ರಕರ್ತ ಸಿ. ಸೀತಾರಾಮ್‌, ಲೇಖಕಿಯರಾದ ಎಚ್‌.ಎಸ್‌. ಪಾರ್ವತಿ ಮತ್ತು ತೇಜಸ್ವಿನಿ ಅರಸ್‌ ಅವರು ಬರೆದಿರುವ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಜೂ.17ರಂದು ಆಯೋಜಿಸಲಾಗಿದೆ.

ಸಿ.ಸೀತಾರಾಂ ಅವರ ‘ಮನಮಂಥನ’, ಎಚ್‌.ಎಸ್‌. ಪಾರ್ವತಿಯವರ‘ ನಂದ-ನಂದನ’ ಮತ್ತು ತೇಜಸ್ವಿನಿ ಅರಸ್‌ ಅವರ‘ಅವಧರಿಸು ಬಾ’ ಎಂಬ ಪುಸ್ತಕಗಳನ್ನು ಸುಂದರ ಪ್ರಕಾಶನ ಹೊರತಂದಿದ್ದು, ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಜೂ.17ರಂದು ಸಂಜೆ 6ಗಂಟೆಗೆ ಏರ್ಪಡಿಸಿದೆ.

ಈ ಸಂದರ್ಭದಲ್ಲಿ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಮತ್ತು ಅರುಣ್‌ಕುಮಾರ್‌(ಡ್ರಮ್ಸ್‌) ಅವರ ಜುಗಲ್‌ಬಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾಹಿತ್ಯ ಮತ್ತು ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಸುಂದರ ಪ್ರಕಾಶನದ ಗೌರಿ ಸುಂದರ್‌ ಕೋರಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X