ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿ.ಸೀತಾರಾಮ್ ಅವರ ‘ಮನಮಂಥನ’ ಬಿಡುಗಡೆ
ಬೆಂಗಳೂರು : ಹಿರಿಯ ಪತ್ರಕರ್ತ ಸಿ. ಸೀತಾರಾಮ್, ಲೇಖಕಿಯರಾದ ಎಚ್.ಎಸ್. ಪಾರ್ವತಿ ಮತ್ತು ತೇಜಸ್ವಿನಿ ಅರಸ್ ಅವರು ಬರೆದಿರುವ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಜೂ.17ರಂದು ಆಯೋಜಿಸಲಾಗಿದೆ.
ಸಿ.ಸೀತಾರಾಂ ಅವರ ‘ಮನಮಂಥನ’, ಎಚ್.ಎಸ್. ಪಾರ್ವತಿಯವರ‘ ನಂದ-ನಂದನ’ ಮತ್ತು ತೇಜಸ್ವಿನಿ ಅರಸ್ ಅವರ‘ಅವಧರಿಸು ಬಾ’ ಎಂಬ ಪುಸ್ತಕಗಳನ್ನು ಸುಂದರ ಪ್ರಕಾಶನ ಹೊರತಂದಿದ್ದು, ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಜೂ.17ರಂದು ಸಂಜೆ 6ಗಂಟೆಗೆ ಏರ್ಪಡಿಸಿದೆ.
ಈ ಸಂದರ್ಭದಲ್ಲಿ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಮತ್ತು ಅರುಣ್ಕುಮಾರ್(ಡ್ರಮ್ಸ್) ಅವರ ಜುಗಲ್ಬಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾಹಿತ್ಯ ಮತ್ತು ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಸುಂದರ ಪ್ರಕಾಶನದ ಗೌರಿ ಸುಂದರ್ ಕೋರಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Tuesday, April 5, 2005, 16:50 [IST]