ಲ.ನಾ.ಭಟ್ಟರ ಷೇಕ್ಸ್ಪಿಯರ್ ಸಾನೆಟ್ ಚಕ್ರ-ಕಿನ್ನರಲೋಕ ಬಿಡುಗಡೆ
*ಎಂ. ಕೆ. ಗೋಪಿನಾಥ್
ಬೇರೆ ಭಾಷೆಯ ಕಾವ್ಯವನ್ನು ನಮ್ಮ ಭಾಷೆಗೆ ಅನುವಾದಿಸುವುದೆಂದರೆ ಬೇರೆ ಮನೆಯ ಹೆಣ್ಣನ್ನು ಮದುವೆ ಮಾಡಿಕೊಂಡು ಮನೆಗೆ ಕರೆ ತಂದ ಹಾಗೆ. ಆ ಸೊಸೆ ನಾಳೆ ನಮ್ಮ ವಂಶ ಬೆಳೆಸುವ ಸೌಭಾಗ್ಯಲಕ್ಷ್ಮಿಯಾಗಬಹುದು. ಅನುವಾದಗೊಂಡ ಕೃತಿಗಳು ಶ್ರೇಷ್ಠ ಕೃತಿಗಳಾಗಿದ್ದರಂತೂ ಅದು ನಮ್ಮ ಭಾಷೆಯ ಪುಣ್ಯ.
‘ಡಾ. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟರು ಇಂಗ್ಲಿಷ್ನಿಂದ ಕನ್ನಡಕ್ಕೆ ತಂದಿರುವ ‘ಷೇಕ್ಸ್ಪಿಯರ್ ಸಾನೆಟ್ ಚಕ್ರ’ ಅಂಥ ಶ್ರೇಷ್ಠ ಕೃತಿ. ಷೇಕ್ಸ್ಪಿಯರನ ಆಯ್ದ ನೂರು ಸಾನೆಟ್ ಕವಿತೆಗಳ ಸುಂದರ ಅನುವಾದ. ಭಟ್ಟರು ಈ ಹಿಂದೆ ಜಗತ್ಪ್ರಸಿದ್ಧ ಕವಿಗಳಾದ ಯೇಟ್ಸ್ ಮತ್ತು ಎಲಿಯಟ್ರ ಅತ್ಯುತ್ತಮ ಕವಿತೆಗಳನ್ನು ಅನುವಾದಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ವಿಮರ್ಶಕರ ಮೆಚ್ಚುಗೆ ಗಳಿಸಿದ್ದರು. ಅವರ ಅನುವಾದಗಳು ತುಂಬ ಮೇಲು ನೆಲೆಯದಾಗಿದ್ದು, ಕನ್ನಡ ಅನುವಾದ ಕ್ಷೇತ್ರದಲ್ಲಿನ ಒಂದು ಮಹತ್ವದ ವಿಕ್ರಮ ಎನಿಸಿಕೊಂಡಿದೆ. ಈ ಸಾಹಸಕ್ಕಾಗಿ ನಾಡು ಅವರನ್ನು ಅಭಿನಂದಿಸಬೇಕು.’
ಹೀಗೆ ಹೇಳಿದವರು ಕನ್ನಡದ ಪ್ರಸಿದ್ಧ ಕವಿ. ಡಾ.ಜಿ.ಎಸ್. ಶಿವರುದ್ರಪ್ಪನವರು. ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ 7-3-2002ರಂದು ನಡೆದ ಭಟ್ಟರ ‘ಷೇಕ್ಸ್ಪಿಯರ್ ಸಾನೆಟ್ ಚಕ್ರ’ ಮತ್ತು ‘ಕಿನ್ನರ ಲೋಕ’ ಎಂಬ ಎರಡು ಪುಸ್ತಕಗಳ ಬಿಡುಗಡೆಯ ಉತ್ಸವದ ಅಧ್ಯಕ್ಷತೆ ವಹಿಸಿದ್ದ ಜಿ.ಎಸ್. ಎಸ್. ಮೊದಲ ಪುಸ್ತಕದ ಬಗ್ಗೆ ಮಾತನಾಡುತ್ತಾ - ಭಟ್ಟರ ಅನುವಾದಗಳ ಹಿಂದಿರುವ ಪ್ರತಿಭೆ, ಶ್ರದ್ಧೆ, ಶ್ರಮ ಪಾಂಡಿತ್ಯಗಳನ್ನು ಮುಕ್ತ ಮನಸ್ಸಿನಿಂದ ಪ್ರಶಂಸಿದರು.
ಲಕ್ಷ್ಮೀನಾರಾಯಣ ಭಟ್ಟರು ಶ್ರೇಷ್ಠ ನವ್ಯ ಕವಿತೆಗಳನ್ನು ಬರೆದು ನಾಡಿನ ಪ್ರತಿಷ್ಠಿತ ಕವಿ ಎನಿಸಿಕೊಂಡಿದ್ದಾರೆ. ಮೋಹಕವಾದ ನೂರಾರು ಭಾವಗೀತೆಗಳನ್ನು ಬರೆದು ಎಲ್ಲ ಜನಕ್ಕೆ ಪ್ರಿಯರಾಗಿದ್ದಾರೆ. ಮಕ್ಕಳ ಗೀತೆಗಳನ್ನು ರಚಿಸಿ ಎಳೆಯರ ಜಗತ್ತನ್ನು ತಣಿಸಿದ್ದಾರೆ. ಹೀಗೆ ಅವರದ್ದು ಬಹುಮುಖ ಪ್ರತಿಭೆ. ತಮ್ಮ ಅನುವಾದ ಕೃತಿಗಳಿಂದ ಕನ್ನಡದ ಭಾವ ಸಂಪತ್ತನ್ನು ವಿಚಾರ ಸಂಪತ್ತನ್ನು ಬೆಳೆಸಿ ಯಶಸ್ವೀ ಲೇಖಕರಾಗಿದ್ದಾರೆ ಎಂದು ಜಿ.ಎಸ್. ಎಸ್. ಬಣ್ಣಿಸಿದರು.
ಕನ್ನಡದ ಪ್ರಸಿದ್ಧ ವಿಮರ್ಶಕರಾದ ಎಲ್.ಎಸ್. ಶೇಷಗಿರಿ ರಾಯರು, ಭಟ್ಟರ ಅನುವಾದದಲ್ಲಿ ಬಳಕೆಯಾಗಿರುವ ಭಾಷೆ, ಲಯ ಮತ್ತು ಸೃಜನಶೀಲತೆ ಅಪರೂಪದ್ದಾಗಿದ್ದು ಅವು ಕನ್ನಡಕ್ಕೆ ಬಹಳ ಬೆಲೆಯುಳ್ಳ ಕೊಡುಗೆಯಾಗಿದೆ ಎಂದರಲ್ಲದೆ, ಕೆಲವು ಪದ್ಯಗಳನ್ನು ಓದಿ ಭಟ್ಟರ ಅನುವಾದದ ಹೆಚ್ಚುಗಾರಿಕೆಗೆ ನಿದರ್ಶನ ನೀಡಿದರು.
ಪುಸ್ತಕಗಳನ್ನು ಬಿಡುಗಡೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಸಿ. ಸೋಮಶೇಖರ್ ಕಿನ್ನರ ಲೋಕ ಎಂಬ ಮಕ್ಕಳ ಕವಿತೆಗಳ ಸಮಗ್ರ ಸಂಪುಟದ ಕುರಿತು ಮಾತನಾಡಿದರು. ಇಲ್ಲಿರುವ ಎಷ್ಟೋ ಕವಿತೆಗಳು ನಾಡಿನ ಮಕ್ಕಳಿಗೆಲ್ಲ ಕಂಠಪಾಠವಾಗಿ ಹೋಗಿದೆ. ‘ಭಾಳ ಒಳ್ಳೇವ್ರ್ ನಮ್ ಮಿಸ್ಸು ’ ‘ಗೇರ್ ಗೇರ್ ಮಂಗಣ್ಣ ’‘ ಟಾಮಿ ಟಾಮಿ ನಮ್ಮನೆ ನಾಯಿ’ ಮೊದಲಾದ ಕವಿತೆಗಳು ಮಕ್ಕಳ ಜಗತ್ತನ್ನು ಇನ್ನಷ್ಟು ಸುಂದರವಾಗಿ ಮಾಡಿವೆ ಎಂದು ಶ್ಲಾಘಿಸಿದರು.
ಗೌರಿಸುಂದರ್ ಅವರ ‘ ಚಿತ್ರಶ್ರೀ’ ಸಂಸ್ಥೆ ಈ ಸಮಾರಂಭವನ್ನು ಏರ್ಪಡಿಸಿತ್ತು. ಆರಂಭದಲ್ಲಿ ಕುಮಾರಿ ಅರ್ಚನಾ ಉಡುಪ, ಭಟ್ಟರ ಎರಡು ಭಾವಗೀತೆಗಳನ್ನು ಆಕರ್ಷಕವಾಗಿ ಹಾಡಿದರು.
ಮುಖಪುಟ / ಸಾಹಿತ್ಯ ಸೊಗಡು-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ಬೆಂಗಳೂರಿನಲ್ಲಿ ಇಂದು ಶ್ರೀ ಎಂ ಅವರ "ಉಪನಿಷತ್ತುಗಳು ಮತ್ತು ಜೆ.ಕೃಷ್ಣಮೂರ್ತಿ" ಹೊಸ ಕೃತಿ ಬಿಡುಗಡೆ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ











Click it and Unblock the Notifications