ಮೂಕಜ್ಜಿ ನೆನಪಾದರೆ ಸಾಕು ಅದೇನೊ ಮರೆಯಲಾಗದ ಭಾವ
ಮೂಕಜ್ಜಿಯ ಮಡಿಲಲ್ಲಿ ಎಲ್ಲವು ಚಂದ ಮತ್ತು ಚಂದ. ಈ ಮೂಕಜ್ಜಿಯ ಪರಿಚಯ ಆಗಿದ್ದು ಕಾರಂತರ ಕಾದಂಬರಿಯ ಸಹವಾಸದಿಂದ. ಸಂಜೆಯೊ, ಬೆಳಿಗ್ಗೆಯೊ, ರಾತ್ರಿಯೊ ಓದುತ್ತಾ ಓದುತ್ತಾ ಸಮಯ ಕಳೆದದ್ದೆ ತಿಳಿಯಲಿಲ್ಲ. ಮತ್ತೆ ಮತ್ತೆ ಓದಿದರೂ ಬೇಸರವಾಗಲಿಲ್ಲ. ಮೂಕಜ್ಜಿಯ ಇಷ್ಟು ಹತ್ತಿರವಾಗುತ್ತಾಳೆ, ನಾ ಮೌನಿಯಾದರೂ ಆಕೆ ಪಟ ಪಟನೆ ಇಷ್ಟು ಸ್ಪಷ್ಟವಾಗಿ ಮಾತನಾಡುತ್ತಾಳೆ ಎಂದು ತಿಳಿದಿರಲಿಲ್ಲ. ಮೂಕಜ್ಜಿಯ ಮಾತುಗಳು ನಾನು ಕಣ್ಣು ಮುಚ್ಚಿ ಅದೇನೋ ಯೋಚಿಸುವಾಗಲು ನನಗೆ ಜೋರಾಗಿ ಕೇಳಿಸಿ ಎದೆಯ ಕದ ತಟ್ಟಿ ಒಮ್ಮೆಲೆ ಕಣ್ಣುತೆರೆಯುವಂತೆ ಮಾಡಿದ್ದವು.
ಮೂಕಜ್ಜಿ ನಿಜವಾಗಿಯೂ ಸಾವಿಲ್ಲದೆ ಸಾವಿರ ಕಾಲ ಬದುಕಿರುತ್ತಾಳೆ. ಅದೆಲ್ಲಿ ಎಂದರೆ ಡಾ.ಕೆ. ಶಿವರಾಮ ಕಾರಂತರ "ಮೂಕಜ್ಜಿಯ ಕನಸುಗಳು" ಕಾದಂಬರಿಯಲ್ಲಿ. ಓದಿದವರ, ಕೇಳಿದವರ ಮನಸಲ್ಲಿ. ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸುಗಳನ್ನು ತುಸು ತುಸುವಾಗಿ ಕಾಯಿಸಿ, ಕರಗಿಸುವ ಕೆಲಸವನ್ನು ಅತ್ಯಂತ ನಾಜೂಕಾಗಿ ಮಾಡಿ ಮುಗಿಸಿದ್ದಾಳೆ, ಮಾಡುತ್ತಿದ್ದಾಳೆ.
ಕಾರಂತರೇ ಕಾದಂಬರಿಗೆ ಕಥಾನಾಯಕನಿಲ್ಲ, ನಾಯಕಿಯಿಲ್ಲ, ಮೂಕಜ್ಜಿಯು ಇಲ್ಲಿ ಕಥಾನಾಯಕಿಯಲ್ಲ ಎಂದು ಹೇಳಿದ್ದರು. ಬರುವ ಪ್ರತಿ ಪಾತ್ರಗಳು ಓದುಗರ ಮನಸಲ್ಲಿ ಅದ್ಭುತವಾಗಿ ಜೀವಂತವಾಗಿರುತ್ತವೆ. ಜೊತೆಗೆ ಪ್ರತಿ ಪ್ರತಿ ಪುಟವನ್ನು ತಿರುಗಿಸುವ ಹೊತ್ತಿಗೆ ಓದಿರದ ಪುಟಗಳು ಓದುವ ತವಕ ಹೆಚ್ಚಿಸುತ್ತವೆ. ಮೂಕಜ್ಜಿಯ ಮಾತುಗಳಂತೂ ಒಂದು ಕ್ಷಣ ತಲೆ ಕೆರೆದು ಯೋಚಿಸುವಂತೆ ಮಾಡುತ್ತವೆ.

ಕಾರಂತರು ಹೇಳಿರುವುದು ನೂರಕ್ಕೆ ನೂರು ಸತ್ಯ. ಪ್ರತಿಯೊಬ್ಬರ ಕಲ್ಪನೆ ಎಷ್ಟೆಷ್ಟು ಬೆಡಗಿನದೊ, ಭವ್ಯವೊ, ಅದರ ಮೇಲಿಂದ ಅವರು ಹೇಳಿದ್ದೆ ಸತ್ಯವೆನಿಸುವುದು. ಮನುಷ್ಯನೆ ಹೀಗೆ ಅಲ್ಲವೇ ಏನಾದರೂ ಹೊಸದೊ ಅಥವಾ ಅಪರೂಪದ ವಸ್ತುವನ್ನೆ ಆಗಲಿ, ಕಥೆಯನ್ನೆ ಆಗಲಿ ತನ್ನದೇ ರೀತಿಯಲ್ಲಿ ನೋಡುತ್ತಾನೆ. ಅವನಷ್ಟಕ್ಕೆ ಅವನೇ ಕಲ್ಪಿಸಿಕೊಂಡು ತನ್ನದೇ ಕಾಲ್ಪನಿಕ ಜಗತ್ತು ಕಟ್ಟುತ್ತಾನೆ. ತನ್ನ ಯೋಚನೆ ಕಲ್ಪನೆಗಳನ್ನೆಲ್ಲ ಅದಕ್ಕೆ ಒಂದೊಂದನ್ನೆ ಜೋಡಿಸುತ್ತಾ ಹೋಗುತ್ತಾನೆ. ಹಿರಿಯರು ಹೇಳಿದ ಪ್ರತಿ ಪದಕ್ಕೂ ಒಂದು ಪ್ರಶ್ನೆಯನ್ನಿಡುತ್ತಾ, ಕೂತೂಹಲ ಹೆಚ್ಚಿಸಿಕೊಳ್ಳುತ್ತಾನೆ. ಉತ್ತರ ಹುಡುಕುತ್ತಾನೆ.

ಓದುತ್ತ ಓದುತ್ತಾ "ಮೂಕಜ್ಜಿಯ ಕನಸುಗಳು" ಮನಸಿಗೆ ಅದೇನೊ ಖುಷಿ ನೀಡಿತ್ತು. ಅವಳ ಮಡಿಲು ಮತ್ತು ಕಾರಂತರ ಪದಗಳ ರಾಶಿಯ ಹೊತ್ತ ಹಣ್ಣಿನ ಬುಟ್ಟಿಯು ಮನಸನ್ನು ತಣಿಸಿತ್ತು. ಇಲ್ಲಿಯೂ ಕೂಡ ಮೂಕಜ್ಜಿಯ ಪಾತ್ರ ಅಪರೂಪದ್ದು ಎಂದರೆ ಸಾಲದು. ಆಕೆಯ ಆ ಚುರುಕು ತನ್ನ ಯೋಚನೆ ಹೇಳತೀರದ್ದು. ಕಾರಂತರಂತೂ ಪ್ರತಿ ಪ್ರತಿ ಸಾಲಲ್ಲು ಸತ್ವವನ್ನಿಡುತ್ತ ಜೊತೆಯಲ್ಲಿ ಪ್ರತಿ ಪದವನ್ನು ಬದುಕಿಸಿದ್ದಾರೆ. ಮೂಕಜ್ಜಿ ನೆನಪಾದರೆ ಸಾಕು ಅದೇನೊ ಮರೆಯಲಾಗದ ಭಾವ. ಮೂಕಜ್ಜಿಯ ಪ್ರತಿ ಕಾಲ ಕಾಲಕ್ಕೂ ಒಳ್ಳೆಯ ರೀತಿಯಲ್ಲಿ ಬದುಕುತ್ತಲೆ ಹೋಗಬೇಕು. ಪ್ರತಿ ಪೀಳಿಗೆಗೂ ಆಕೆಯ ಮಡಿಲು ಹೆಚ್ಚು ಹೆಚ್ಚು ನೆಮ್ಮದಿ ನೀಡುತ್ತಿರಬೇಕು, ಕನ್ನಡದ ಕಂದಗಳನ್ನು ಮಡಿಲಿಗೆ ಕರೆದು ಜಾಗ ನೀಡಬೇಕು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications