ವಿಶ್ವ ನುಡಿಸಿರಿ : ಮೋಹನ್ ಆಳ್ವ ಸಂದರ್ಶನ (ಭಾಗ 3)

ಉ : ನಿಜ, ವಿಶ್ವ ನುಡಿಸಿರಿ ವಿರಾಸತ್ಗೆ ಅಂದಾಜು ಖರ್ಚು 15 ಕೋಟಿ ರು. ಅಷ್ಟು ಹಣವನ್ನು ಜನರಿಂದ ಒಟ್ಟು ಸೇರಿಸುವ ಭರವಸೆ ಇದೆ. 100 ರು. ಪಡೆದು 5 ಲಕ್ಷ ಮಂದಿಯನ್ನು ಸದಸ್ಯನಾಗಿರಿಸುವ ಗುರಿ ಹೊಂದಿದ್ದೇವೆ. ಜೊತೆಗೆ ಬೇರೆ ಬೇರೆ ಜಿಲ್ಲೆಗಳಿಂದ ಹೊರೆಕಾಣಿಕೆ ರೂಪದಲ್ಲಿ ವಸ್ತುಗಳನ್ನು ಸಂಗ್ರಹಿಸುವ ಯೋಚನೆ ಕೂಡಾ ಇದೆ. ಅಷ್ಟೇ ಅಲ್ಲ, ಐದು ಕೋಟಿ ರುಪಾಯಿ ವೆಚ್ಚದಲ್ಲಿ ಕನ್ನಡಭವನ ಕಟ್ಟಿಸುವ ಕನಸು ನನ್ನದು. ಈ ಬಾರಿಯ ವೈಶಿಷ್ಟ್ಯತೆ ಅಂದರೆ, ಹಗಲು ಕನ್ನಡ ಸಾಹಿತ್ಯ ಸಮಾರಾಧನೆ ನಡೆದರೆ, ರಾತ್ರಿ ವಿದ್ಯಾಗಿರಿಯ ಬಯಲಿನಲ್ಲಿ ಆಳ್ವಾಸ್ ವಿರಾಸತ್ ಮೂಲಕ ಅಪೂರ್ವವಾದ ಸಾಂಸ್ಕೃತಿಕ ಲೋಕ ತೆರೆದುಕೊಳ್ಳಲಿದೆ. ಆಮೂಲಕ ಆಳ್ವಾಸ್ ನುಡಿಸಿರಿ ಮತ್ತು ವಿರಾಸತ್ ಎರಡೂ ಸಂಸ್ಕೃತಿಪ್ರಿಯರ ಹಸಿವು ತಣಿಸಲಿದೆ.
ಪ್ರ : ಅಂತೂ ಸರಕಾರಿ ಪ್ರಯೋಜಿತ ವಿಶ್ವ ಕನ್ನಡ ಸಮ್ಮೇಳನಕ್ಕೆ ಸೆಡ್ಡು ಹೊಡೆಯಲು ಸಿದ್ದರಾಗಿದ್ದೀರಿ ಅಂದ ಹಾಗಾಯ್ತು?
ಉ : ನೋಡಿ... ಒಂದು ವಿಶ್ವ ಕನ್ನಡ ಸಮ್ಮೇಳನಕ್ಕೆ 60ರಿಂದ 70 ಕೋಟಿ ರು. ಖರ್ಚುಮಾಡುತ್ತಾರೆ. ಲಕ್ಷಗಟ್ಟಲೆ ಸುರಿದು ಐಶ್ವರ್ಯ ರೈಯನ್ನು ತಂದು ಸಮ್ಮೇಳನಕ್ಕೆ ಗ್ಲಾಮರ್ ಟಚ್ ಕೊಡಲಾಗುತ್ತದೆ. ಸಲ್ಲಬೇಕಾದವರಿಗೆ ನ್ಯಾಯ ಸಿಕ್ಕದೆ, ಒಟ್ಟಾರೆ ಜನ ಸೇರಿಸುವ ಕೆಲಸ ಆಗ್ತದೆ. ಆದ್ರೆ ನಾವು ಮಾಡುವ ವಿಶ್ವ ನುಡಿಸಿರಿ ಹಾಗಲ್ಲ. ಇಂಥಹ ಸಮ್ಮೇಳನಗಳಿಗೆ ಯಾರು ಬರಬೇಕೋ ಅವರು ಬರುವಂತೆ ಮಾಡುತ್ತೇವೆ. ಅಂದಾಜು 30,000 ಸಾಹಿತ್ಯಾಸಕ್ತರು ಸೇರುತ್ತಾರೆಂಬ ನಿರೀಕ್ಷೆಯಿದೆ. ನಮಗೆ ಐಶ್ವರ್ಯ ರೈಯಂಥವರ ಮೂಲಕ ಜನ ಸೇರಿಸುವ ಅನಿವಾರ್ಯತೆ ಇಲ್ಲ.
ಈಗ್ಲೇ ಪ್ಲಾನ್ ಮಾಡಿ : ಇದು ವಿಶ್ವ ನುಡಿಸಿರಿಯ ಸಿದ್ಧತೆ ನಡೆಸುತ್ತಿರುವ ಡಾ.ಮೋಹನ್ ಆಳ್ವರ ಮುಕ್ತ ಮಾತು. ವಿದೇಶಕ್ಕೆ 80 ಮಂದಿ ವಿದ್ಯಾರ್ಥಿಗಳ ತಂಡವನ್ನು ಒಯ್ದು, ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ, ನುಡಿಸಿರಿ ಘಟಕ ಸ್ಥಾಪಿಸುವ ಮೂಲಕ ಆಳ್ವರು ನುಡಿಸಿರಿಯ ಯಶಸ್ಸಿಗೆ ಟೊಂಕಕಟ್ಟಿ ನಿಂತಿದ್ದಾರೆ. ಅಂದ ಹಾಗೆ ವಿಶ್ವ ನುಡಿಸಿರಿಗೆ ಇನ್ನೂ 10 ತಿಂಗಳಿದೆ. ಸಮ್ಮೇಳನ ನಡೆಯೋದು ಡಿಸೆಂಬರ್ 19, 20, 21, 22. ಆಳ್ವರ ಆತಿಥ್ಯ ಸ್ವೀಕರಿಸಲು ಈಗ್ಲೇ ಪ್ಲಾನ್ ಮಾಡಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications