ಇಲ್ಲಿ ಜನರ ಆರ್ತನಾದ, ಅಲ್ಲಿ ಸಂಗೀತದ ನಿನಾದ!

27ರ ಬೆಳಿಗ್ಗೆಯಿಂದಲೇ ಶವಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ಆರಂಭವಾಯಿತು. ಅಗ್ನಿಶಾಮಕ ದಳ-ಬಳ್ಳಾರಿ ಪೊಲೀಸ್ ಪಡೆ-ಪೂನಾದಿಂದ ಬಂದಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸದಸ್ಯರೆಲ್ಲ ಭಾರಿ ಶ್ರಮ ವಹಿಸಿ ಕಾರ್ಯಾಚರಣೆ ಮಾಡಿದರು. ನಾಲ್ಕು ಅಂತಸ್ತು ನೆಲಕಚ್ಚಿ ಇನ್ನುಳಿದ ಮೂರು ಅಂತಸ್ತುಗಳು ದುರ್ಬಲವಾಗಿ ನಿಂತಿದ್ದವು. ಇವುಗಳ ಗೋಡೆಗಳೆಲ್ಲ ಸಂಪೂರ್ಣ ಬಿರುಕು ಬಿಟ್ಟಿದ್ದವು. ಹಲವೆಡೆ ಇವುಗಳು ಜೋತಾಡುತ್ತಿದ್ದವು. ಇಂಥ ಸ್ಥಿತಿಯಲ್ಲಿ ಕಾರ್ಯಾಚರಣೆ ಮಾಡುವವರು ಆಪತ್ತಿನ ಅಂಚಿನಲ್ಲಿಯೇ ಇದ್ದರು. ಅಲ್ಲಿಂದ ವರದಿ ಮಾಡುತ್ತಿದ್ದ ಪತ್ರಕರ್ತರ ಸ್ಥಿತಿಯೂ ಇದೇ ಆಗಿತ್ತು! ಹೊರ ಬರುತ್ತಿದ್ದ ಶವಗಳ ಗುರುತು ಪತ್ತೆ ಹಚ್ಚಿದೊಡನೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಆದರೆ ಕೇವಲ 70 ಕಿಲೋಮೀಟರ್ ದೂರದಲ್ಲಿ ನೃತ್ಯ-ಸಂಗೀತ-ಉತ್ಸವದ ನಿನಾದ ಮೊಳಗುತ್ತಿತ್ತು!
ಇಷ್ಟೆಲ್ಲ ವಿಚಾರ ಏಕೆ ಹೇಳಿದನೆಂದರೆ ಇಂಥ ದುರಂತದ ಸಂದರ್ಭದಲ್ಲಿ ಮತ್ಯಾರೆ ಉಸ್ತುವಾರಿ ಸಚಿವರಾಗಿದ್ದರೂ ಉತ್ಸವ ರದ್ದುಗೊಳಿಸುತ್ತಿದ್ದರು. ಕಣ್ಣಮುಂದೆ ಕಟ್ಟುವ ಹೃದಯ ವಿದ್ರಾವಕ ಇರುವಾಗ ಉತ್ಸವದ ಸೊಬಗಿಗೆ ಅರ್ಥವಿದೆಯೇ.. ಈ ಪ್ರಶ್ನೆಯನ್ನು ಜನಾರ್ದನ ರೆಡ್ಡಿ ಹಾಕಿಕೊಳ್ಳಲಿಲ್ಲ. ಇದಕ್ಕೆ ಉದಾಹರಣೆ 'ಮೂರು ದಿನ ಅದ್ದೂರಿಯಿಂದ ನಡೆದ ಶ್ರೀಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕೋತ್ಸವ"!
ಮುಂದೆ ಕನ್ನಡ ವಿಶ್ವವಿದ್ಯಾಲಯ ಆವರಣದಲ್ಲಿ ವಿಜಯನಗರ ಥೀಮ್ ಪಾರ್ಕ್ ಸ್ಥಾಪನೆ ನಿರ್ಧಾರ. ಇದರಿಂದಾದ ಘಟನಾವಳಿಗಳ ಬಗ್ಗೆ ವಿವರಿಸುತ್ತೇನೆ. ಶ್ರೀಕೃಷ್ಣದೇವರಾಯರ ಮರು ಜನ್ಮ ಕಥೆಯೂ ಇವೆಲ್ಲವುಗಳೊಂದಿಗೂ ತಳಕು ಹಾಕಿಕೊಂಡಿದೆ ಎಂಬುದನ್ನೂ ಗಮನಿಸಿ! [ಕೃಪೆ : ವರದಿಗಾರ]
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications