ಕುವೆಂಪು ತಂತ್ರಾಂಶ ಹೊಸ ಆವೃತ್ತಿ ಬಿಡುಗಡೆ

2ನೇ ಆವೃತ್ತಿಯ ತಂತ್ರಾಂಶದಲ್ಲಿ ಮೊದಲ ಆವೃತ್ತಿಯ ಎಲ್ಲಾ ಅಂಶಗಳ ಜತೆಗೆ ನೂತನವಾಗಿ 3 ಬಗೆಯ ಪರಿವರ್ತಕಗಳು ಮತ್ತು 1 ಬಗೆಯ ಕೀಲಿಮಣೆ ವಿನ್ಯಾಸ, ಸೋನಾಟಾ ಸಾಫ್ಟ್ ವೇರ್ ಕಂಪೆನಿ ಸಹಕಾರದಿಂದ ಪ್ರಕಾಶಕ್ ತಂತ್ರಾಂಶದ ಪ್ರಜಾ ಅಕ್ಷರ ವಿನ್ಯಾಸಗಳಲ್ಲಿ ಆಯ್ದ 4 ಮಾದರಿಗಳನ್ನು ಅಳವಡಿಸಲಾಗಿದೆ.
ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 1: ಅನು, ಎಸ್ ಆರ್ ಜಿ ಹಾಗೂ ಶ್ರೀಲಿಪಿ ಫಾಂಟ್ ಗಳನ್ನು ಬೆಂಬಿಲಿಸುವುದರ ಜೊತೆಗೆ ನಾಲ್ಕು ಬಗೆ ಕೀಲಿಮಣೆ ವಿನ್ಯಾಸ ಹಾಗೂ ನಾಲ್ಕು ಟೆಕ್ಸ್ ಪರಿವರ್ತಕಗಳನ್ನು ಹೊಂದಿದೆ. ANSI ಮಾದರಿ ಫಾಂಟ್ ಮಾತ್ರ ಬಳಕೆಯಾಗುತ್ತಿದ್ದು, ಪತ್ರಿಕಾ ವಿನ್ಯಾಸಗಾರರನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಶೈಲಿಯ ಫಾಂಟ್ ಗಳನ್ನು ರೂಪಿಸಲಾಗಿದೆ. ಆದರೆ, ಇದು ಹೆಚ್ಚು ಕಡೆ ಇನ್ನೂ ಬಳಕೆಯಾಗುತ್ತಿಲ್ಲ. ವಿಧಾನ ಪರಿಷತ್ ಸದಸ್ಯರಾಗಿದ್ದ ಚಂದ್ರಶೇಖರ ಕಂಬಾರರು ತಂತ್ರಾಂಶ ಯೋಜನೆಗೆ 6 ಲಕ್ಷ ರೂ. ಬಿಡುಗಡೆ ಮಾಡಿದ್ದರು. ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಅನುಭವ, ಆಶಯದೊಂದಿಗೆ ತಂತ್ರಾಂಶ ರಚಿಸಲಾಗಿತ್ತು.
ಯಾರಿಗೆ ಉಪಯೋಗ: ಕನ್ನಡ ಬೆರಳಚ್ಚುಗಾರರು, ಡಿಟಿಪಿ ಆಪರೇಟರ್ ಗಳು, ವಿನ್ಯಾಸಗಾರರು, ಸರ್ಕಾರಿ ಕಚೇರಿಗಳಲ್ಲಿ ಬಳಸಬಹುದು. ಸದ್ಯದಲ್ಲೇ ಕುವೆಂಪು ತಂತ್ರಾಂಶದ ಯೂನಿಕೋಡ್ ಆವೃತ್ತಿ ಹೊರ ಬೀಳಲಿದ್ದು ಅಂತರ್ಜಾಲದಲ್ಲಿ ವಿಹರಿಸುವವರು, ಚಾಟ್ ಮಾಡುವವರು, ಪತ್ರ ಬರೆಯುವವರು ಎಲ್ಲರಿಗೂ ಅನುಕೂಲವಾಗಲಿದೆ.
ಮಾಹಿತಿ ಕಣಜವಾಗಲಿದೆ: ತಂತ್ರಾಂಶದೊಂದಿಗೆ ಕನ್ನಡ ಕಾರ್ಪಸ್ ನಿರ್ಮಾಣ ಯೋಜನೆ ಮಾಡಲಾಗುವುದು. ಇದರಿಂದ ಕನ್ನಡ ಇ-ನಿಘಂಟು(ಸುಮಾರು 1 ಕೋಟಿ ಪದ ಸಂಗ್ರಹ), ಸಮಗ್ರ ಕನ್ನಡ ವ್ಯಾಕರಣ ರಚನೆ ಇತ್ಯಾದಿಗಳನ್ನು ನಿರ್ಮಿಸಲಾಗುವುದು. ಆನ್ಲೈನ್ ಡಿಕ್ಷ್ನರಿ, ಕನ್ನಡ ಒಸಿಆರ್ ತಂತ್ರಾಂಶ, ಸಂಭಾಷಣೆಯನ್ನು ಶಬ್ದರೂಪದಲ್ಲಿ ಪರಿವರ್ತಿಸುವ ತಂತ್ರಾಂಶ, ಸ್ಪೆಲ್ಲಿಂಗ್ ಚೆಕ್ ಭಾಷಾಂತರ ದತ್ತ ಕಣಜ, ಸಂಶೋಧನಾ ಕರ್ನಾಟಕ, ವಿದ್ಯಾರ್ಥಿ ಗಳಿಗೆ ಬೋಧನೆ ಮತ್ತು ತರಬೇತಿ, ವೆಬ್ಸೈಟ್ ಮರುವಿನ್ಯಾಸ, ಡಿಜಿಟಲ್ ಸ್ಟುಡಿಯೊ, ಲೈಬ್ರರಿ, ಲ್ಯಾಂಗ್ವೇಜ್ ಲರ್ನರ್, ಆಡಿಯೊ-ವೀಡಿಯೊ ರೆಕಾರ್ಡಿಂಗ್ ಲ್ಯಾಬ್ ಸೇರಿದಂತೆ ಹಲವು ಯೋಜನೆ ಗಳನ್ನು ಸಿದ್ಧಪಡಿಸಲಾಗಿದೆ ಎಂದು ಮುರಿಗೆಪ್ಪ ಹೇಳಿದರು.
ಈ ತಂತ್ರಾಂಶ ಉಚಿತವೇ: ಹೌದು, ಹಂಪಿ ವಿಶ್ವವಿದ್ಯಾಲಯ ಹೊರ ತರುತ್ತಿರುವ ಈ ತಂತ್ರಾಂಶ ವಿಶ್ವವಿದ್ಯಾಲಯದ ವೆಬ್ ತಾಣದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಿರುತ್ತದೆ. ಆದರೆ, ಈ ತಂತ್ರಾಂಶವನ್ನು ಓಪನ್ ಸೋರ್ಸ್ ಆಗಿ ನೀಡುತ್ತಾರೆಯೇ? ಅಥವಾ ಈ ಹಿಂದಿನಂತೆ source on demand ಎಂದು ಹೇಳುತ್ತಾರೋ ಎಂದು ಕಾದು ನೋಡಬೇಕಿದೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications