ಕಂಪ್ಯೂಟರಿನಲ್ಲಿ ಕನ್ನಡ ಬರೆಯುವುದಕ್ಕೆ ಮಾರ್ಗದರ್ಶಿ

ಗೂಗಲ್ ಟ್ರಾನ್ಸ್ ಲಿಟರೇಷನ್ ಜನಪ್ರಿಯತೆಗೆ ಕಾರಣವೂ ಇದೆ. ಸರಳತೆ ಹಾಗೂ ಸ್ಪಷ್ಟ ಮಾಹಿತಿ ನೀಡಿಕೆ ಇದರ ಹೆಗ್ಗುರುತು. ಇಂಗ್ಲೀಷ್ ನಲ್ಲಿ ಟೈಪ್ ಮಾಡೋಕೆ ಬರುವವರು ಗೂಗಲ್ ಟ್ರಾನ್ಸ್ ಲಿಟರೇಷನ್ (ಲಿಪ್ಯಂತರ) ಕಿಂಡಿಯನ್ನು ತೆರೆದುಕೊಂಡು ಸುಲಭವಾಗಿ ಟೈಪ್ ಮಾಡಿ ಒಂದು ಪದದ ನಂತರ ಸ್ಪೇಸ್ ಬಾರ್ ಒತ್ತಿದರೆ ಸಾಕು. ನಿಮಗೆ ಬೇಕಾದ ಕನ್ನಡ ಪದ ತೆರೆಯ ಮೇಲೆ ಕಾಣುತ್ತದೆ.
ಉದಾ: http://www.google.co.in/transliterate/indic/Kannada ದಲ್ಲಿ kannada sundara bhashe ಎಂದು ಟೈಪ್ ಮಾಡಿದರೆ ಕನ್ನಡ ಸುಂದರ ಭಾಷೆ ಎಂದು ಪಡೆಯಬಹುದು. ಕನ್ನಡದಿಂದ ಇಂಗ್ಲೀಷ್ ಗೆ ಅಥವಾ ಇಂಗ್ಲೀಷ್ ನಿಂದ ಕನ್ನಡಕ್ಕೆ ಬದಲಾಯಿಸಿಕೊಳ್ಳಲು Ctrl+g ಕೀಲಿ ಒತ್ತಬಹುದು. ಇಷ್ಟೇ ಅಲ್ಲದೆ, ಇಲ್ಲಿ ಟೈಪ್ ಆಗುವ ಬರಹವನ್ನು ತಿದ್ದಲು, ಸಂಕಲನ ಮಾಡಲು, ವೆಬ್ ಲಿಂಕ್ ಸೇರಿಸಲು ಬೇಕಾಗುವ ಟೂಲ್ ಗಳನ್ನು ಸಹ ಒದಗಿಸಲಾಗಿದೆ. ನೀವು ಬರೆದ ಬರಹವನ್ನು ಇದೇ ವೆಬ್ ಕಿಂಡಿಯಿಂದ ನೇರವಾಗಿ ಪ್ರಿಂಟ್ ತೆಗೆದುಕೊಳ್ಳುವ ವ್ಯವಸ್ಥೆ ಕೂಡ ಲಭ್ಯವಿದೆ. ಆದರೆ, ನೀವು ಬರೆದ ಪದಗಳು ಸರಿಯಿದೆಯೇ ಇಲ್ಲವೇ ಎಂದು ಸಂದೇಹವೇ ಇದಕ್ಕಾಗಿ ಪದಗಳ ಚೆಕ್ ಮಾಡಲು ಪದಕೋಶ ಲಭ್ಯವಿದೆ. ಅಲ್ಲದೆ ಡ್ರಾಪ್ ಡೌನ್ ಮೂಲಕ ನಿಮಗೆ ಸೂಕ್ತ ಪದದ ಸಲಹೆ ಸಿಗುತ್ತದೆ. ಪದ ಆಯ್ಕೆ ಅವಾಂತರವಾದರೆ ಕಷ್ಟ. ಇದಕ್ಕಾಗಿ ಪದಕೋಶದ ನೆರವು ಪಡೆಯಬಹುದು.
ಉದಾ: ಮೇಲಿನ ಉದಾಹರಣೆಯಲ್ಲಿ ಸುಂದರ ಎಂಬ ಪದ ಮೇಲೆ ಮೌಸ್ ಕರ್ಸರ್ ಇಟ್ಟರೆ ಡ್ರಾಪ್ ಡೌನ್ ನಲ್ಲಿ ಸುಂದರ, ಸುನ್ದರ, ಸುಂದರಾ, ಸುನದರ.. ಹೀಗೆ ಪದಗಳ ಪಟ್ಟಿ ಸಿಗುತ್ತದೆ. ಅದರಲ್ಲಿ ಆಯ್ಕೆ ಮಾಡಬಹುದು.
ಇಂಗ್ಲೀಷ್-ಕನ್ನಡ ಸರಳ ಪದಕೋಶ: ಇಲ್ಲಿ ನೀಡಿರುವ ಪದಕೋಶ ಬಳಸಿ ಆಂಗ್ಲಪದಗಳಿಗೆ ಕನ್ನಡದಲ್ಲಿ ಸರಳ ಅರ್ಥವನ್ನು ಪಡೆಯಬಹುದು. ಹಾಗೂ ಕನ್ನಡದಿಂದ ಆಂಗ್ಲ ಪದಕ್ಕೆ ತರ್ಜುಮೆ ಮಾಡಿ ಬಳಸಬಹುದು. ಗೂಗಲ್ ಟ್ರಾನ್ಸ್ ಲಿಟರೇಷನ್ ಸಾಧನವು ಬ್ಲಾಗ್, ಜೀಮೆಲ್, ಕ್ಲೋನ್, ಆರ್ಕುಟ್ ಗಳಲ್ಲಿ ಲಭ್ಯವಿದೆ. ಅಲ್ಲದೆ, ನಿಮ್ಮದೇ ವೆಬ್ ತಾಣದಲ್ಲೂ ಗೂಗಲ್ ಟ್ರಾನ್ಸ್ ಲಿಟರೇಷನ್ ಸಾಧನದ API ಅಳವಡಿಸಿಕೊಳ್ಳಬಹುದು. ಕನ್ನಡ ಸೇರಿದಂತೆ ಸುಮಾರು 22ಕ್ಕೂ ಅಧಿಕ ಭಾಷೆಗಳಲ್ಲಿ ಈ ಸಾಧನವು ಲಭ್ಯವಿದೆ.
ತಪ್ಪದೇ ಓದಿ: ಗೂಗಲ್ಲಿಗೆ ಕನ್ನಡ ಸುದ್ದಿ ಅಸ್ಪೃಶ್ಯವಾಯಿತೆ? || ಗೂಗಲ್ ಯಂತ್ರವನ್ನು ಓಲೈಸುವುದು ಹೇಗೆ?
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications