ಸಂಪ್ರದಾಯ ಧಿಕ್ಕರಿಸುವ ಕೇಶಮುಂಡನ ಎಷ್ಟು ಸರಿ?

ತಲತಲಾಂತರಗಳಿಂದ ಅವರ ಮನೆತನದಲ್ಲಿ ಕೆಲವು ಸಂಪ್ರದಾಯಗಳನ್ನು ಚಾಚೂತಪ್ಪದೆ ಪರಿಪಾಲಿಸಿಕೊಂಡು ಬರುತ್ತಿರುವಾಗ ಇಂಥ ಪರಿಸ್ಥಿತಿ ಉದ್ಭವವಾದುದು ಅವರನ್ನು ಕೊಂಚ ಗಲಿಬಿಲಿಗೆ ಈಡುಮಾಡಿತು. ಅದಕ್ಕೆ ಅವರು ಜತೆಗಾರರ ಸಲಹೆ ಸೂಚನೆಗಳನ್ನು ಕೋರಿ ಯಾಹೂ ಜಗಲಿ ಕಟ್ಟೆಗೆ ಒಂದು ಪತ್ರ ಹಾಕಿದರು. ಅದರ ಸಾರಾಂಶ ಹೀಗಿದೆ:
1) ನನ್ನ ಆರು ವರ್ಷದ ಮಗಳು ನೀನೀ ನೀಳಕೇಶಿ. ಅವಳಿಗೆ ಕೂದಲು ತುಂಬಾ ಉದ್ದ ಬೆಳೆಯುತ್ತದೆ. ಈ ಕಾರಣದಿಂದಾಗಿ ಕೆಲವೊಮ್ಮೆ ತಲೆತುರಿಕೆ ಬರುತ್ತದೆ. ಬಹಳ ಕಿರಿಕಿರಿ ಆಗುತ್ತದೆ ಎನ್ನುತ್ತಾಳೆ. ಅವಳನ್ನು ಸೆಲೂನ್ ಗೆ ಕರೆದುಕೊಂಡು ಹೋಗಿ ಹೇರ್ ಕಟಿಂಗ್ ಮಾಡಿಸುವುದು ಸರಿಯೇ? ಅದರಲ್ಲೂ ಭಾದ್ರಪದ ಕೃಷ್ಣ (ಪಕ್ಷಮಾಸ)ದಲ್ಲಿ ಚೌರದ ಅಂಗಡಿಗೆ ಹೋಗಿ ಹೇರ್ ಡ್ರೆಸ್ಸಿಂಗ್ ಮಾಡಿಸುವುದು ಎಷ್ಟರಮಟ್ಟಿಗೆ ಸಮಂಜಸ?
2) ಹೆಣ್ಣು ಮಕ್ಕಳ ಕೂದಲು ಕತ್ತರಿಸುವುದು ತಪ್ಪಾದರೆ, ನನ್ನ ಮಗಳ ಸಮಸ್ಯೆಗೆ ಪರಿಹಾರ ಏನು? ಏನೋ ಒಂದು ನೆಪವೊಡ್ಡಿ ಸಂಪ್ರದಾಯವನ್ನು ಮುರಿಯುವ ಇಚ್ಛೆ ನನಗಿಲ್ಲ. ಇದು ಮಕ್ಕಳಿಗೂ ಅನ್ವಯಿಸುತ್ತದೆ ಹಾಗೂ ಸುಮಂಗಲಿಯರಿಗೂ ಸಲ್ಲುತ್ತದೆ.
3) ಒಂದು ವೇಳೆ ಮಗಳ ಕೂದಲನ್ನು ಕತ್ತರಿಸಿ, ಪ್ರಾಯಶ್ಚಿತ್ತಕ್ಕೋಸ್ಕರ ಆ ಕೂದಲನ್ನು ತಿರುಪತಿಯಲ್ಲಿ ಕಾಣಿಕೆಯಾಗಿ ಕೊಡಬಹುದಾ? ನಾನು ತೆರೆದ ಮನಸ್ಸಿನವನು. ನಿಮ್ಮ ಸಲಹೆ, ಚಿಂತನೆಗಳಿಗಾಗಿ ಎದುರುನೋಡುತ್ತಿದ್ದೇನೆ.
ಸಂದೇಹ ನಿವಾರಣೆಗೆ ಅನೇಕರು ಅನೇಕ ಬಗೆಯ ಸಲಹೆಗಳನ್ನು ಕೊಟ್ಟರು. ಮೂಲ ಪತ್ರಗಾರರ ಸಂದೇಹ ನಿವಾರಣೆ ಆದಹಾಗೆ ಕಾಣುತ್ತಿಲ್ಲ. ನಿಮ್ಮ ಸಲಹೆಗಳು ಎಂತಿವೆಯೋ?
ಯಾಹೂ ಗ್ರೂಪ್ ನಲ್ಲಿರುವ ಅನೇಕರು ದಟ್ಸ್ ಕನ್ನಡ ವಾಚಕ ಬಂಧುಗಳಾಗಿರುವುದರಿಂದ ಚರ್ಚೆಯ ಅಂಗಳವನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಈ ವಿಷಯವನ್ನು ಇಲ್ಲಿ ಪ್ರಸ್ತಾಸಿಸಲಾಗಿದೆ- ಸಂಪಾದಕ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications