235274hassanಹದಿನೆಂಟೂ ಸಮಸ್ತರ ಅರಕಲಗೂಡು ದಸರಾ/festivals/dasara/2008/1007-arakalgud-dasara-communal-harmony.htmlಮೈಸೂರು ದಸರಾ ಜಗದ್ವಿಖ್ಯಾತ. ಅದೇ ರೀತಿ ಮಡಿಕೇರಿಯ ಮಿನಿದಸರಾ ಕೂಡ. ಅದು ಕೊಡಗಿನ ಹೆಮ್ಮೆ. ಹಾಗೆಯೇ ಹಾಸನ ಜಿಲ್ಲೆಯಲ್ಲೂ ದಸರಾ ಸಂಸ್ಕೃತಿ ಸಮೃದ್ಧ. ಕಳೆದ ಒಂದು ದಶಕದಿಂದ ಸದ್ದಿಲ್ಲದೇ ನಡೆದುಕೊಂಡು ಬರುತ್ತಿರುವ ಈ ನವರಾತ್ರಿ ಉತ್ಸವ ಅರಕಲಗೂಡಿನ ಹೆಮ್ಮೆ. 18 ಕೋಮಿನ ಜನರ ಸಹಭಾಗಿತ್ವದಲ್ಲಿ ನಡೆಯುವ ಅರಕಲಗೂಡು ದಸರಾ ರಾಜ್ಯದಲ್ಲೇ ವಿನೂತನ,ವಿಶಿಷ್ಠ ಮತ್ತು ಅನುಕರಣೀಯ. 442http://kannada.oneindia.com/img/2009/09/17-arakalgud-dasara1.jpg235274hassanಪ್ರಕೃತಿ ಮಡಿಲಿನಲ್ಲಿ ವಿಶಿಷ್ಟವಾದ ಕವಿಗೋಷ್ಠಿ/literature/articles/2009/0225-kannada-poets-sahitya-conference-hassan.htmlಫೆ.22 ರಂದು ಹಾಸನ ಸಮೀಪದ ಅನುಗನಾಳಿನ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್ (ಬಿಸಿ‌ಆರ್‌ಟಿ) ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಡಾಟ್‌ಕಾಂ ಬೆಂಬಲಿಗರ ಬಳಗಗಳು ಭಾನುವಾರದ ರಜೆಯನ್ನು ಚೇತೋಹಾರಿಯಾಗಿ ಬದಲಾಯಿಸಿಬಿಟ್ಟವು. ಈ ಮೂರೂ ಸಂಸ್ಥೆಗಳ ಸಂಯುಕ್ತಾಶ್ರಯ ಅನುಗನಾಳಿನ ಬಿ.ಸಿ.ಆರ್.ಟಿ ಆವರಣದಲ್ಲಿ ಕವಿತೆಗಳಿಗೆ ವೇದಿಕೆಯೊದಗಿಸಿತು. ಜಿಲ್ಲಾ ಮಟ್ಟದ ಕವಿಗೋಷ್ಠಿಗಾಗಿ ಕೊಟ್ಟಿದ್ದ ವಿಷಯ 34849http://kannada.oneindia.com/img/2009/02/25-hassan-hasya-kavighosti1.jpg235274hassanಅಶೋಕ್ ಖೇಣಿ ವಿರುದ್ಧ ದೇವೇಗೌಡ ಸ್ಪರ್ಧೆ!!!/news/2009/03/20/hd-devegowda-likes-to-contest-against-ashok-kheny.htmlಬೆಂಗಳೂರು, ಮಾ. 20 : ನೈಸ್ ಸಂಸ್ಥೆಯ ಅಶೋಕ್ ಯಾವ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರೆ, ಅದೇ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವೆ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಮರು ಸವಾಲು ಹಾಕಿದ್ದಾರೆ. ಈ ಮೂಲಕ ನೈಸ್ ಕಾರಿಡಾರ್ ರಸ್ತೆಗೆ ಮಾತ್ರ ಸೀಮಿತವಾಗಿದ್ದ ದೇವೇಗೌಡ-ಖೇಣಿ ಜಗಳ ರಾಜಕೀಯದೊಳಗೆ ಪ್ರವೇಶ ಪಡೆದುಕೊಂಡಂತಾಗಿದೆ. ಈ ಹಿಂದೆ ಖೇಣಿ ದೇವೇಗೌಡರ ವಿರುದ್ಧ ಸ್ಪರ್ಧಿಸುವುದಾಗಿ 35381http://kannada.oneindia.com/img/2009/03/20-hd-devegowda9.jpg235274hassanಕೇವಲ ನಲವತ್ತು ರು.ಗೆ ಹಾಸನಾಂಬ ಕ್ಷೇತ್ರ ದರ್ಶನ /movies/music/2009/03/24-vcd-on-hasanamba-temple-karnataka-tourism.htmlಪುಣ್ಯಸ್ಥಳಗಳ ತವರಾಗಿರುವ ಭಾರತದಲ್ಲಿ ಒಂದೊಂದು ಸ್ಥಳಗಳಿಗೆ ಅದರದೆ ಆದ ಹಿನ್ನಲೆ ಇದೆ. ಈ ಭರತ ಭೂಮಿಯಲ್ಲಿರುವ ಪ್ರಸಿದ್ದ ಸ್ಥಳಗಳನ್ನು ಹಾಗೂ ಅಲ್ಲಿ ಜರಗುವ ಉತ್ಸವಗಳನ್ನು ಕಣ್ಣಾರೆ ನೋಡುವ ಬಯಕೆ ಆಸ್ತಿಕನದು. ಕಾರ್ಯದೊತ್ತಡ, ಸಮಯಾಭಾವ ಸೇರಿದಂತೆ ಹಲವು ತೊಂದರೆಗಳು ಮನುಷ್ಯನ ಜೀವನದಲ್ಲಿ ಎದುರಾಗುವುದು ಸಹಜ. ಈಗ ನೀವು ನೋಡಬೇಕಿರುವ ಜಾಗ ಹಾಗೂ ಜಾತ್ರೆಯನ್ನು ಮನೆಯಲ್ಲೇ ಕುಳಿತು ನೋಡುವ 35480http://kannada.oneindia.com/img/2009/03/24-hasanamba-temple1.jpg235274hassanಜೆಡಿಎಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ /news/2009/03/28/devegowda-releases-jds-candidates-list-for-ls-poll.htmlಬೆ೦ಗಳೂರು, ಮಾ 28: ಜನತಾದಳ ವರಿಷ್ಠ ಎಚ್ ಡಿ ದೇವೇಗೌಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಜೆಡಿಎಸ್ ನ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಯುಗಾದಿಯ ಶುಭ ದಿನದಂದು ಬಿಡುಗಡೆಗೊಳಿಸಿದರು. ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು 2ಕ್ಷೇತ್ರ ದಕ್ಷಿಣಕನ್ನಡ ಮತ್ತು ಉಡುಪಿ -ಚಿಕ್ಕಮಗಳೂರು ಕ್ಷೇತ್ರವನ್ನು ಎಡಪಕ್ಷಗಳಿಗೆ ಬಿಟ್ಟುಕೊಟ್ಟಿದ್ದಾರೆ. 35554http://kannada.oneindia.com/img/2009/03/28-devegowda6.jpg236703ಸಂವಾದಆಪ್ತಮಿತ್ರನೊಂದಿಗೆ ಆಪ್ತ ಸಂವಾದ/movies/hero/2009/02/09-an-interview-with-dwarakish.htmlಇತ್ತೀಚೆಗೆ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಮಾತಿಗೆ ಸಿಕ್ಕಿದ್ದರು. ಕನ್ನಡ ಕುಳ್ಳ ಎಂದೇ ಖ್ಯಾತರಾಗಿರುವ ಅವರು ಜತೆಗೆ ಮಾತಿಗೆ ಕುಳಿತರು. ಅಲ್ಲಿ ಆಯ್ದ ಕೆಲ ಪ್ರಶ್ನೋತ್ತರಗಳ ರೂಪ ನಿಮ್ಮ ಮುಂದಿದೆ...ಕನ್ನಡದಲ್ಲಿ ರೀಮೇಕ್ ಸಿನಿಮಾ ಅನಿವಾರ್ಯವಾ?ಸ್ವಾಮಿ, ಈಗ ಕಾಲ ಬದಲಾಗಿದೆ. ರಾಜ್‌ಕಪೂರ್, ಸುನಿಲ್ ದತ್... ಅಷ್ಟೇ ಏಕೆ, ಇತ್ತೀಚೆಗೆ ಅಮೀರ್ ಖಾನ್ ಕೂಡ ಅದನ್ನೇ ಮಾಡಿದ್ದಾರೆ. ಘಜನಿ ಎಷ್ಟು 34550http://kannada.oneindia.com/img/2009/02/09-dwarakish3e.jpg236703ಸಂವಾದಪ್ರಕೃತಿ ಮಡಿಲಿನಲ್ಲಿ ವಿಶಿಷ್ಟವಾದ ಕವಿಗೋಷ್ಠಿ/literature/articles/2009/0225-kannada-poets-sahitya-conference-hassan.htmlಫೆ.22 ರಂದು ಹಾಸನ ಸಮೀಪದ ಅನುಗನಾಳಿನ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್ (ಬಿಸಿ‌ಆರ್‌ಟಿ) ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಡಾಟ್‌ಕಾಂ ಬೆಂಬಲಿಗರ ಬಳಗಗಳು ಭಾನುವಾರದ ರಜೆಯನ್ನು ಚೇತೋಹಾರಿಯಾಗಿ ಬದಲಾಯಿಸಿಬಿಟ್ಟವು. ಈ ಮೂರೂ ಸಂಸ್ಥೆಗಳ ಸಂಯುಕ್ತಾಶ್ರಯ ಅನುಗನಾಳಿನ ಬಿ.ಸಿ.ಆರ್.ಟಿ ಆವರಣದಲ್ಲಿ ಕವಿತೆಗಳಿಗೆ ವೇದಿಕೆಯೊದಗಿಸಿತು. ಜಿಲ್ಲಾ ಮಟ್ಟದ ಕವಿಗೋಷ್ಠಿಗಾಗಿ ಕೊಟ್ಟಿದ್ದ ವಿಷಯ 34849http://kannada.oneindia.com/img/2009/02/25-hassan-hasya-kavighosti1.jpg236703ಸಂವಾದ'ಟೂರಿಂಗ್ ಟಾಕೀಸ್': ಒಂದೇ ಸಿನಿಮಾ ಸುತ್ತ...! /movies/headlines/2009/04/21-workshop-on-kannada-cinema-by-samvada.htmlಕ್ರೆಡಿಟ್ ಕಾರ್ಡ್ ಅಥವಾ ನಗದಿನ ಮೂಲಕ ಟಿಕೆಟ್ ಖರೀದಿಸುತ್ತೇವೆ. ಸಿನೆಮಾ ನೋಡಿ ಹೊರಬರುತ್ತೇವೆ.ನೋಡಿದ ಸಿನೆಮಾ ಬಗ್ಗೆ ಎರಡು ಮಾತನಾಡಿ ಒಂದು ಕಡೆ ಸರಾಸರಿ ಪ್ರೇಕ್ಷಕನಾಗಿ ಉಳಿದು, ನಾವು ಆಡಿದ ಮಾತುಗಳೆಲ್ಲ ಆಳವಾದ ವಿಮರ್ಶೆ ಎಂದೇ ಭಾವಿಸಿ ಬಿಡುತ್ತೇವೆ. ಇದು ಅಹಂಕಾರ ಎಂದು ಕೂಡ ನಮ್ಮ ಅರಿವಿಗಿರುವುದಿಲ್ಲ. ಇದು ನಮ್ಮಲ್ಲಿ ಅನೇಕರ, ಬಹುಸಂಖ್ಯಾತರ ಸತ್ಯ. ಹೆಚ್ಚಿನ ಮಟ್ಟಿಗೆ ಯುವ 36107http://kannada.oneindia.com/img/2009/04/21-mungaru-male2.jpg236703ಸಂವಾದ'ಕಬಡ್ಡಿ' ವಿಶೇಷ ಪ್ರದರ್ಶನ ಮತ್ತು ಸಂವಾದ/movies/headlines/2009/08/06-kabaddi-film-show-and-samvaada.html'ಕಬಡ್ಡಿ' ಚಲನಚಿತ್ರ ಕನ್ನಡ ಚಿತ್ರರಂಗದಲ್ಲೊಂದು ಒಳ್ಳೆಯ ಪ್ರಯತ್ನ- ಎಂಬ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ...'ಕಬಡ್ಡಿ' ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಇದೇ ಭಾನುವಾರ(ದಿನಾಂಕ:09/08/2009) ಮಧ್ಯಾಹ್ನ 2 ಗಂಟೆಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ನರೇಂದ್ರ ಬಾಬು, ನಿರ್ಮಾಪಕರು (ಡಿ.ಕೆ. ರವಿ, ಕೆ. ರಾಜು. ಜಿ. ಕಿಶೋರ್ ಕುಮಾರ್, ಅನೂಪ್ ಗೌಡ, ಎನ್. ಆಶಾ, ಡಿ.ವಿ. ರಾಜೇಂದ್ರ 38457http://kannada.oneindia.com/img/2009/08/06-kabaddi1.jpg236703ಸಂವಾದಸಂವಾದ : ರಾಷ್ಟ್ರ ಭಾಷೆ ಹಿಂದಿಯೇ ಆಗಬೇಕೆ?/literature/debate/2009/0827-should-hindi-be-national-language.html2-3 ಶತಮಾನಗಳಷ್ಟು ಹಳೆಯದಾದ ಹಿಂದಿ ಭಾಷೆಯೇ ಏಕೆ ರಾಷ್ಟ್ರಭಾಷೆಯಾಗಬೇಕು? ಸಾಕಷ್ಟು ಐತಿಹ್ಯವುಳ್ಳ, ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಇನ್ನೂ ಬೆಳೆಯುತ್ತಿರುವ ಕನ್ನಡ, ತಮಿಳು, ತೆಲಗು, ಬಂಗಾಳಿ ಭಾಷೆಗಳಿಗೆ ಯಾಕೆ ಈ ಸ್ಥಾನಮಾನ ಸಿಗಬಾರದು?* ಚಿ.ಮ. ಗುರುಪ್ರಸಾದ್ಭಾರತ 63ನೇ ಸ್ವಾತಂತ್ರೋತ್ಸವ ಆಚರಿಸುತ್ತಿದ್ದ ಸಂದರ್ಭದಲ್ಲಿ, ರಾಷ್ಟ್ರೀಯ ಮಹತ್ವ ಪಡೆದಿರುವ ವಿಷಯಗಳ ಬಗ್ಗೆ ಮೆಲಕು ಹಾಕುತ್ತಿರುವಾಗ ಒಂದು ವಿಚಾರ ಹೊಳೆದದ್ದು ಎಂದರೆ, 38856http://kannada.oneindia.com/img/2009/08/27-guruprasad-cm1.jpg35082ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!/recipe/drinks/2008/0905-how-to-make-good-coffee.htmlಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ, ಪದ್ಧತಿಗಳಿವೆ. ಬಟ್ಟೆಯಲ್ಲಿ ಕಾಫಿ ಸೋಸುವ ಸಾಂಪ್ರದಾಯಿಕ ವಿಧಾನ, ಪರ್ಕ್ಯೂಲೇಟರ್‌ ವಿಧಾನ, ಫಿಲ್ಟರ್‌ ವಿಧಾನ, ಕುದಿಸಿ ತಯಾರಿಸುವ ವಿಧಾನ ಇತ್ಯಾದಿ, ಇತ್ಯಾದಿ..ಈಗ ಒಂದೊಂದು ವಿಧಾನವನ್ನು ಪ್ರಯತ್ನಿಸೋಣ. ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ 977http://kannada.oneindia.com/img/2009/10/29-filter-coffee1.jpg35082ಮಸಾಲಾ ಬಾದಾಮಿ ಇಡ್ಲಿ/recipe/breakfast/2007/1112-recipe-masala-badam-idli.htmlಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ. ಕುಸುಮಬಾಲೆ ಬೇಕಾಗುವ ಪದಾರ್ಥಗಳು : ಅಕ್ಕಿ : 200 ಗ್ರಾಂ ಕಡಲೆ ಬೇಳೆ : 100ಗ್ರಾಂ ಬಾದಾಮಿ ಹೋಳುಗಳು : 100ಗ್ರಾಂ ಹಸಿ ಮೆಣಸಿನ ಕಾಯಿ : 19453http://kannada.oneindia.com/img/2009/10/13-masala-badam-idli2.jpg35082ಆಟೋ ಬೆನ್ನುಡಿ ಸಾಹಿತ್ಯಕ್ಕೆ ಜಯವಾಗಲಿ/literature/articles/2008/1117-heart-warming-autorikshaw-slogans.htmlಆಟೋಗಳ ಹಿಂಬಾಗ ಅದೆಷ್ಟೋ ಕ್ರಿಯೇಟಿವ್ ಬರಹಗಳಿಗೆ, ಸಿನೇಮಾ ಜಾಹೀರಾತುಗಳಿಗೆ, ಗ್ರಾಹಕ ವಸ್ತುಗಳ ಜಾಹೀರಾತುಗಳಿಗೆ (ಎಫ್.ಎಂ.ಸಿ.ಜಿ ಪ್ರಾಡಕ್ಸ್) ವೇದಿಕೆಯಾಗಿರುತ್ತದೆ. ಅಲ್ಲದೆ, ಆಟೋ ಚಾಲಕರ ಅಭಿರುಚಿಗೆ ಅನುಗುಣವಾಗಿ ಹಿಂಬರಹಗಳು ಪ್ರತಿನಿತ್ಯ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಆಟೋ ಸಂದೇಶಗಳನ್ನು ನೀವು ನೋಡಿರಲಿಕ್ಕೆ ಸಾಕು. ನನ್ನ ಕಣ್ಣಿಗೆ ಬಿದ್ದ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.*ಸುಧೀಂದ್ರ ಎಸ್ ರಾವ್, ಬೆಂಗಳೂರು ಟಿ 32811http://kannada.oneindia.com/img/2009/08/01-sudheendra-deshpande1e.jpg35082ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ/movies/bollywood/2008/12/04-mallika-sherawat-role-hollywood-film-on-christ.htmlಅಪ್ಪಟ ಬ್ರಹ್ಮಚಾರಿಣಿಯ ಪಾತ್ರವನ್ನು ಮಲ್ಲಿಕಾ ಮಾಡುತ್ತಿದ್ದಾರೆ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ಇದು ನಿಜ. ಅದರಲ್ಲೂ ಯೇಸುಕ್ರಿಸ್ತನ ಜೀವನ ಕುರಿತಾದ ಹಾಲಿವುಡ್ ಚಿತ್ರವೊಂದರಲ್ಲಿ ಮಲ್ಲಿಕಾ ಇಂಥದೊಂದು ಪಾತ್ರದಲ್ಲಿ ಕಾಣಿಸಲಿದ್ದಾರೆ. ದಿ ಆಕ್ವೇರಿಯನ್ ಗಾಸ್ಪೆಲ್ ಎಂಬ ಅಮೆರಿಕನ್ ಚಿತ್ರದಲ್ಲಿ ಸರಸ್ವತಿ ಎಂಬ ಯೋಗಿನಿಯ ಪಾತ್ರ ಬರುತ್ತದೆ. ಜೆಸೋವ(ಯೇಸು)ನ ಆಪ್ತ ಮಿತ್ರವಲಯದಲ್ಲಿ ಪ್ರಮುಖವಾದ ವ್ಯಕ್ತಿ ಸರಸ್ವತಿ. ಈ ಚಿತ್ರದಲ್ಲಿ 33188http://kannada.oneindia.com/img/2008/12/mallika-sherawat.jpg35082ಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpgnews"> ಪ್ರಕೃತಿ ಮಡಿಲಿನಲ್ಲಿ ವಿಶಿಷ್ಟವಾದ ಕವಿಗೋಷ್ಠಿ | Kannada sahitya parishat| BCRT| hassan| Arehalli Ravi| Kavighosti - ಪ್ರಕೃತಿ ಮಡಿಲಿನಲ್ಲಿ ವಿಶಿಷ್ಟವಾದ ಕವಿಗೋಷ್ಠಿ - Kannada Oneindia

ಪ್ರಕೃತಿ ಮಡಿಲಿನಲ್ಲಿ ವಿಶಿಷ್ಟವಾದ ಕವಿಗೋಷ್ಠಿ

GS Soumya bags first prize in kavighosti
ಫೆ.22 ರಂದು ಹಾಸನ ಸಮೀಪದ ಅನುಗನಾಳಿನ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್ (ಬಿಸಿ‌ಆರ್‌ಟಿ) ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಡಾಟ್‌ಕಾಂ ಬೆಂಬಲಿಗರ ಬಳಗಗಳು ಭಾನುವಾರದ ರಜೆಯನ್ನು ಚೇತೋಹಾರಿಯಾಗಿ ಬದಲಾಯಿಸಿಬಿಟ್ಟವು. ಈ ಮೂರೂ ಸಂಸ್ಥೆಗಳ ಸಂಯುಕ್ತಾಶ್ರಯ ಅನುಗನಾಳಿನ ಬಿ.ಸಿ.ಆರ್.ಟಿ ಆವರಣದಲ್ಲಿ ಕವಿತೆಗಳಿಗೆ ವೇದಿಕೆಯೊದಗಿಸಿತು.

ಜಿಲ್ಲಾ ಮಟ್ಟದ ಕವಿಗೋಷ್ಠಿಗಾಗಿ ಕೊಟ್ಟಿದ್ದ ವಿಷಯ “ಜಾಗತೀಕರಣ ಮತ್ತು ಅಂತರ್ಜಾಲ ಸಂದರ್ಭದಲ್ಲಿ ಕನ್ನಡದ ಪರಿಸರ" ಸ್ವಲ್ಪ ಕ್ಲಿಷ್ಟವಾಗಿದ್ದಾರೂ ಭಾಗಿವಹಿಸಿದ ಉತ್ಸಾಹಿಗಳಿಗೆ ತೊಡಕೇನೂ ಆಗಲಿಲ್ಲ. ಕವಿಗೋಷ್ಠಿಯ ಕವಿಗಳನ್ನು ಈಗಾಗಲೇ ಆಹ್ವಾನಿಸಿದ್ದ ಕವಿತೆಗಳ ಮೌಲ್ಯಮಾಪನದ ನಂತರ ಆಯ್ಕೆಮಾಡಿದ್ದುದರಿಂದ ಕವಿಗೋಷ್ಠಿ ಅಂದರೆ ಕಿರಿಕಿರಿ ಅನ್ನುವ ಭಯವನ್ನು ಅಳಿಸಿಹಾಕಿದ ಕೀರ್ತಿ ಕೂಡಾ ಈ ಕಾರ್ಯಕ್ರಮಕ್ಕೆ ಸಲ್ಲುತ್ತದೆ.

ಗಿಡ ನೆಟ್ಟು ಪರಿಸರವನ್ನು ಶ್ರೀಮಂತಗೊಳಿಸುವ ಮೂಲಕ ಉದ್ಘಾಟಿಸಲಾದ ಕಾರ್ಯಕ್ರಮದ ರೂಪುರೇಷೆ ಪ್ರಾರಂಭದಲ್ಲೇ ಆಸಕ್ತಿಯನ್ನು ಕುತೂಹಲವನ್ನೂ ಉಂಟುಮಾಡಿದವು. ಧಾನ್ಯರಾಶಿಗೆ ಆಹ್ವಾನಿತ ಗಣ್ಯರಿಂದ ಪೂಜೆಮಾಡಿಸುವ ಮೂಲಕ ದೇಶೀ ಪರಂಪರೆಯನ್ನು ನೆನಪಿಸಿತು. ಹೆಗ್ಗೋಡಿನಿಂದ ಬಂದಿದ್ದ ಸಾಹಿತ್ಯಾಸಕ್ತ ಅವಿನಾಶ್ ತಮ್ಮ ಉದ್ಘಾಟನಾ ಭಾಷಣದಲ್ಲೂ ಹೊಸತನವನ್ನು ಮುಂದುವರೆಸಿದರು. ಇತಿಹಾಸದ ಎಲ್ಲ ಕಾಲಘಟ್ಟಗಳಲ್ಲೂ ಇದ್ದೇ‌ಇರುವ ಹಲವು ಸಂಕಷ್ಟಗಳಂತೆಯೇ ಇಂದಿನ ವರ್ತಮಾನವೂ ಇರುವುದರಿಂದ ಕಾವ್ಯ ಕಟ್ಟುವ ಕೆಲಸಕ್ಕೂ ಈ ಸಂಕಷ್ಟ ಇದ್ದೇ ಇರುತ್ತದೆ. ಇವತ್ತಿನ ನಿಯೋರಿಚ್ ಜನಗಳು ಹಳೆಯ ಬ್ರಾಹ್ಮಣಶಾಹಿಗಳಂತೆಯೇ ಇದ್ದಾರೆ. ಹಳತಾಗಿರುವ ಪಂಥಗಳ ಮೂಲಕ ಸದ್ಯದ ಸಾಹಿತ್ಯ ಸಂದರ್ಭವನ್ನು ಅರಿಯುವುದು ಸಾಧ್ಯವಿಲ್ಲ. ವರ್ತಮಾನದ ಎಚ್ಚರ ಇರದೇ ಇದ್ದರೆ ಬದುಕನ್ನು ಕಟ್ಟಲಿಕ್ಕಾಗುವುದಿಲ್ಲ. ಕೆಲವರು ತಮ್ಮ ಅಭಿಪ್ರಾಯಗಳನ್ನೇ ಆತ್ಯಂತಿಕ ಸತ್ಯವೆಂದು ಭಾವಿಸಿಬಿಟ್ಟಿರುತ್ತಾರೆ. ಅನುಭವದ ದ್ರವ್ಯವಿಲ್ಲದ ಬರಹ ಬರಿಯ ಅಭಿಪ್ರಾಯವಾಗುತ್ತದೆಯೇ ವಿನಾ ಅದು ಸಾಹಿತ್ಯ ಕೃತಿಯಾಗಿ ಚಿರಕಾಲ ನಿಲ್ಲುವುದಿಲ್ಲ. ಅವಿನಾಶರ ಮಾತು ಮುಖ್ಯ ಅತಿಥಿಯಾಗಿ ಬಂದಿದ್ದ ಹರಿಹರಪುರ ಶ್ರೀಧರರ ಮಾತಿನಲ್ಲೂ ಮುಂದುವರೆಯಿತು. ವಿಜ್ಞಾನದ ವಿರೋಧ ಸಲ್ಲದು. ಅಂತರ್ಜಾಲವೂ ವಿಜ್ಞಾನದ ಆವಿಷ್ಕಾರ. ನಮ್ಮೊಳಗಿನ ಅಂತರ್ಜಾಲವನ್ನು ಕ್ಲಿಕ್ಕಿಸದೇ ಹೊರಗಿನ ಅಂತರ್ಜಾಲ ಸಂಪರ್ಕಿಸುವುದು ತೋರಿಗಾಣಿಕೆಯದಾಗುತ್ತೆ ಎಂದು ಅಭಿಪ್ರಾಯಪಟ್ಟರು.

ಇನ್ನೋರ್ವ ಮುಖ್ಯ ಅತಿಥಿ ಕನ್ನಡ ಸಾಹಿತ್ಯ ಡಾಟ್ ಕಾಂನ ಸಂಚಾಲಕ ಅರೇಹಳ್ಳಿರವಿ ಕನ್ನಡದಲ್ಲಿ ಅಂತರ್ಜಾಲ ಸೌಲಭವಿಲ್ಲದ ಕಾಲದಲ್ಲಿ ಕನ್ನಡದ ವೆಬ್ ಸೈಟ್ ನಡೆಸಿದ ಸಾಹಸದ ಅನುಭವವನ್ನು ಹಂಚಿಕೊಂಡರು. ದೃಶ್ಯ ಮಾಧ್ಯಮಗಳಿಗೂ ಇರುವ ಭಾಷೆಯನ್ನು ಅರಿಯಲು ಆರಂಭಿಸಲಾದ ಸಂವಾದ ಡಾಟ್ ಕಾಂ ಹೇಗೆ ಸದ್ದಿಲ್ಲದೇ ಯುವಜನರಿಗೆ ಹೊಸಚಿಂತನೆಗಳನ್ನು ಊಡಿಸುತ್ತಿದೆ ಎಂದು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉದಯರವಿ ಪ್ರಕೃತಿಯ ಮಡಿಲಲ್ಲಿ ಆಯೋಜಿಸಲಾಗಿರುವ ಕವಿಗೋಷ್ಠಿ ನಗರ ಪ್ರಜ್ಞೆಯಲ್ಲೇ ಇರುವ ನಮ್ಮ ಲೇಖಕರಿಗೆ ಹಳ್ಳಿಯ ಪರಿಸರದ ಶ್ರೀಮಂತಿಕೆಯನ್ನು ಪರಿಚಯಿಸುತ್ತಿರುವುದರ ಜೊತೆಜೊತೆಗೆ ದೇಶೀ ವಿಚಾರಗಳಲ್ಲೂ ಆಸಕ್ತಿಯನ್ನು ಹುಟ್ಟಿಸುತ್ತದೆ. ಒತ್ತಡಗಳಿಲ್ಲದೇ ಒಂದು ದಿನವನ್ನಾದರೂ ಕಳೆಯುವ ಭಾಗ್ಯ ನಮ್ಮದಾಯಿತು ಎಂದು ಸಂತಸವನ್ನು ಹಂಚಿಕೊಂಡರು. ಬಿಸಿ‌ಆರ್‌ಟಿಯ ಕೆಲಸವು ಹೇಗೆ ದೇಶೀ ಸಂಪ್ರದಾಯವನ್ನು ಮುಂದುವರೆಸುತ್ತಿದೆ ಎಂದೂ ವಿವರಿಸಿದರು. ಬಿಸಿ‌ಆರ್‌ಟಿ ಸಂಚಾಲಕ ಕೃಷ್ಣಮೂರ್ತಿ ಸ್ವಾಗತಿಸಿ, ಸಾಹಿತ್ಯಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ಬಳೂಟಗಿ ವಂದಿಸಿದರು. ಇಂದಿರಾ ಮಹದೇವ್ ನಿರೂಪಿಸಿದರು.

ಸ್ವಲ್ಪ ಬಿಡುವಿನ ನಂತರ ಕವಿಗೋಷ್ಠಿ ಪ್ರಾರಂಭವಾಯಿತು. ಡಿ.ಎಸ್.ರಾಮಸ್ವಾಮಿಯವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಹದಿನೆಂಟು ಕವಿಗಳು ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದರು. ಉತ್ತಮ ಕವಿತೆಗಳಿಗೆ ಬಹುಮಾನಗಳನ್ನೂ ಘೋಷಿಸಿದ್ದುದರಿಂದ ಅವಿನಾಶ್ ಮತ್ತು ಅರೇಹಳ್ಳಿ ರವಿ ತೀರ್ಪುಗಾರರಾಗಿ ಸಹಕರಿಸಿದರು. ಫಲಿತಾಂಶ ಪ್ರಕಟಿಸುವ ಮುನ್ನ ಕವಿಗೋಷ್ಠಿಯ ಅಧ್ಯಕ್ಷರು ಸದ್ಯದ ಪದ್ಯದ ದುಸ್ಥಿತಿ ಮತ್ತು ಅದನ್ನು ಮೀರುವ ಅನಿವಾರ್ಯತೆಗಳ ಬಗ್ಗೆ ಮಾತನಾಡಿದರು. ವರ್ತಮಾನವನ್ನು ಗ್ರಹಿಸದೇ ಬರಿಯ ಆಶಯಗಳ ಮೂಲಕ ಮಾತನಾಡುವವರು ಘೋಷಣೆಗಳಿಗಷ್ಟೇ ತೃಪ್ತರಾಗಬೇಕಾಗುತ್ತದೆ. ಹಾಗೆಯೇ ಆಧುನಿಕ ಬದುಕಿನ ಪಡಿಪಾಟಲುಗಳನ್ನು ಅರ್ಥಮಾಡಿಕೊಳ್ಳದೆಯೇ ಬರಿಯ ಭಾವನಾತ್ಮಕವಾಗಿ ಪದ್ಯ ಬರೆಯುವವರು ಸ್ವಕೇಂದ್ರ ಮುಕ್ತರಾಗದೇ ಇದ್ದಲ್ಲೇ ಬಿದ್ದು ಹೊರಳಬೇಕಾಗುತ್ತದೆ. ಸಾಹಿತ್ಯ ಪಂಥಗಳನ್ನು ನಮ್ಮ ಮಿತಿಯಲ್ಲಿ ಆವಿರ್ಭವಿಸಿಕೊಂಡು ಹೊಸಪರಿಭಾಷೆಯನ್ನು ಕಂಡುಕೊಳ್ಳದೇ ಹೋದರೆ ಕವಿತೆ ಚಿರಕಾಲ ನಿಲ್ಲುವುದಿಲ್ಲ ಎಂದರು.

ಕವಿಗಿಂತಲೂ ಕವಿತೆ ಮುಖ್ಯ. ಈಗ ಪ್ರಸಿದ್ಧರಾಗಿರುವವರು ಜನಕ್ಕೆ ತಿಳಿದುದು ಅವರ ಕವಿತೆಗಳಿಂದ. ಕವಿ ಜನಮಾನಸದಲ್ಲಿ ಉಳಿಯಬೇದದ್ದು ತನ್ನ ಕವಿತೆಗಳ ಮೂಲಕವೇ ವಿನಾ ತನ್ನ ಹೆಸರಿನ ಬಲದ ಮೇಲಿನಿಂದಲ್ಲ ಎಂದು ಅಭಿಪ್ರಾಯ ಪಟ್ಟರು. ಜಿ. ಎಸ್.ಸೌಮ್ಯ ಅವರ 'ಜಾಗತೀಕರಣ, ರಾಗಿಮುದ್ದೆ ಮತ್ತು ಕನ್ನಡ" ಕವಿತೆ ಮೊದಲ ಬಹುಮಾನ ಪಡೆಯಿತು. ಎನ್.ಎಲ್.ಚನ್ನೇಗೌಡರ 'ಹೂವಿನ ತೋಟದಲ್ಲಿ" ಎರಡನೆಯ ಬಹುಮಾನ ಮತ್ತು ಡಿ.ಎಲ್.ರಮೇಶರ 'ಜಾಗತೀಕರಣ" ಕವಿತೆ ಮೂರನೇ ಬಹುಮಾನ ಪಡೆದವು. ಎಸ್. ಲಲಿತಾ ಮತ್ತು ಕೆ.ಕೆ.ವಿನುತಾ ಪ್ರೋತ್ಸಾಹಕ ಬಹುಮಾನ ಪಡೆದರು. ಕವಿಗೋಷ್ಠಿಯ ನಂತರ ರಾಗಿಮುದ್ದೆ, ಹಲಸಿನ ಕಾಯಿ ಅವರೆಕಾಳಿನ ಸಾರು, ಕಾಯಿ ಹಾಲುಗಳ ದೇಸಿ ಊಟವನ್ನು ಉಣಿಸಲಾಯಿತು. ಬಹುಮಾನ ಬಂದವರೂ ಬಾರದವರೂ ಸಂತೋಷದಿಂದ ತಮ್ಮ ಗೂಡುಗಳಿಗೆ ತೆರಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+