ಮದ್ವೆ ಮನೆಯ ಬಾತ್ರೂಂನಲ್ಲಿ ಏನಾಯ್ದು ಅಂದ್ರೆ?!
ಯಶ್
ಸುಬ್ಬನ ಹೆಂಡತಿ ಸುಬ್ಬಿ ಕಡೆಯವರದ್ಯಾರದೋ ಲಗ್ನಕ್ಕೆ ಸುಬ್ಬ ಬಂದಿದ್ದ. ಎದಿರುಗೊಳ್ಳುವುದು ಎಲ್ಲಾ ಮುಗಿದು ಮರುದಿನ ಅಕ್ಷತೆಗೆ ಎಲ್ಲ ತಯಾರಾಗುತ್ತಿದ್ದರು.
ಸುಬ್ಬನೂ ಸ್ನಾನ ಬೇಗ ಮುಗಿಸಿಬಿಡೋಣವೆಂದು ಬಚ್ಚಲು ಮನೆ ಕಡೆಗೆ ನಡೆದ. ಒಂದು ಬಚ್ಚಲು ಮನೆಯೇನೋ ಖಾಲಿ ಇತ್ತು, ಆದರೆ ಅದರ ಮುಂದೆ ನಿಂತಿದ್ದ ಸುಬ್ಬಿ ಬಳಗದವರೊಬ್ಬರು ಯಾಕೋ ಹಿಂದೆ ಮುಂದೆ ನೋಡುತ್ತಿದ್ದರು.
ಸುಬ್ಬ ಕೇಳಿದ, ''ಯಾಕ್ಸಾರ್ ಖಾಲಿ ಇದೆಯಲ್ಲ ಬೇಗನೆ ಸ್ನಾನ ಮುಗಿಸಿ"" ಅಂದ.
ಅದಕ್ಕವರು, ''ಇದಕ್ಕೆ ಬಚ್ಚಲು ಮನೆಗೆ ಒಳಗಡೆಯಿಂದ ಕೊಂಡಿ ಇಲ್ಲ"" ಅಂದರು.
''ನೀವೇನು ಬಿಡಿ ಸಾರ್, ಗಂಡಸಾಗಿ.. ಕೊಂಡಿ ಇಲ್ಲದಿದ್ದರೆ ಏನಂತೆ"" ಸುಬ್ಬ ತಮಾಷೆ ಮಾಡಿದ.
ಅದಕ್ಕವರು ಹ್ಹಿಹ್ಹಿಹ್ಹಿ ಅಂತ ನಗುತ್ತಾ, ''ಅದಕ್ಕೇನಿಲ್ಲ, ಗಡಿಬಿಡಿಯಲ್ಲಿ ಮದುವೆಗೆ ಬರುವಾಗ ಇನ್ನೊಂದು ಪಟ್ಟಾಪಟ್ಟಿ ತರಲು ಮರೆತುಬಿಟ್ಟೆ"" ಅಂದು, ''ನೀವೇನು ಬೇಜಾರು ಮಾಡಿಕೊಳ್ಳದಿದ್ದರೆ, ಇಲ್ಲೇ ಕಾಯ್ತಾ ನಿಂತಿರ್ತೀರಾ, ಬೇಗನೆ ಸ್ನಾನ ಮುಗಿಸಿ ಬಂದು ಬಿಡುತ್ತೇನೆ"" ಅಂತ ರಿಕ್ವೆಸ್ಟ್ ಮಾಡಿಕೊಂಡರು.
''ಅದಕ್ಕೇನಂತೆ ಬಿಡಿ ಸಾರ್, ನಾನಿಲ್ಲೇ ಇರ್ತೇನೆ, ಮುಗಿಸಿಕೊಂಡು ಬನ್ನಿ"" ಅಂತ ಸುಬ್ಬ ಅಭಯಹಸ್ತ ನೀಡಿದ.
ಸರಿ, ಬಿದ್ದೆ ಬಿದ್ದೆ.. ಅಂತ ಯಾವ್ದೋ ಹಾಡು ಗುನುಗುನಿಸುತ್ತ ಮಧ್ಯ ಮಧ್ಯ ಆಹಾಹಾ ಅಂತ ಸ್ನಾನದ ಆನಂದ ಪಡೆದುಕೊಳ್ಳುತ್ತಿದ್ದರು ಸುಬ್ಬಿ ಸಂಬಂಧಿ.
ಇತ್ತ ಯಾರ್ದೋ ಜೊತೆಗೆ ಮಾತನಾಡುತ್ತ ಸುಬ್ಬ ಮೈಮರೆತು ನಿಂತುಬಿಟ್ಟ. ಆಗಲೆ, ಏಏಏ ಅಂತ ಸುಬ್ಬಿ ಸಂಬಂಧಿ ಬಾಗಿಲನ್ನು ಧಡಾರನೆ ಹಾಕಿಕೊಂಡರು. ನೋಡಿದರೆ, ಅವರ ಹೆಂಡತಿಯೇ ಯಾರೂ ಇದ್ದಿರಲಿಕ್ಕಿಲ್ಲ ಅಂತ ಬಾಗಿಲನ್ನು ತಳ್ಳಿಬಿಟ್ಟಿದ್ದರು. ದಡಬಡನೆ ಟವಲ್ಲನ್ನು ಸುತ್ತಿಕೊಂಡು, ಮುಖ ಕೆಂಪಗೆ ಮಾಡಿಕೊಂಡು ಸುಬ್ಬಿ ಸಂಬಂಧಿ ಸುಬ್ಬನನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದರು.
''ಏನು ಸುಬ್ಬು ಅವರೆ, ಕಾಯ್ತಾ ನಿಂತ್ಕೊಳ್ತೀನಿ ಅಂದೋರು ಹೀಗೆ ಮೈಮರೆತಿದ್ದಕ್ಕೆ ಏನಾಯ್ತು ನೋಡಿ. ಹೆಂಡ್ತಿ ಬಂದು ಬಾಗಿಲು ತಳ್ಳಿಬಿಟ್ಟಳು"" ಅಂತ ರೇಗಲು ಶುರುಮಾಡಿದರು.
ಅದಕ್ಕೆ ಸುಬ್ಬು, ''ಅಯ್ಯೋ ಹೌದಾ, ನಿಮ್ಮ ಹೆಂಡತಿ ಬಾಗಿಲು ತಳ್ಳಿದ್ದು ಒಳ್ಳೆಯದೇ ಆಯಿತು. ಬೇರೆ ಯಾರಾದರೂ ತಳ್ಳಿದ್ದರೆ ನಿಮ್ಮ ಮಾನ, ಮರ್ಯಾದೆ ಹೊರಟು ಹೋಗಿರೋದು!"" ಅಂತ ಬೇರೆ ಸ್ನಾನದಮನೆಗೆ ನಡೆದ.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications