ರಂಗಕರ್ಮಿ ಆರ್. ನಾಗೇಶ್-60: ‘ಭಾಗವತರು’ದಿಂದ ‘ರಂಗ ಗೌರವ’
ಸೌಮ್ಯ-ಸಿಟ್ಟು , ಬಂಡಾಯ-ಮೌನ ಎಂಬುದು ಇವರ ಜೀವನ ಭಾಗ. ಅವರೊಬ್ಬ ಎಡ ಪಂಥೀಯ ರಂಗಕರ್ಮಿ ಎಂದವರಿದ್ದಾರೆ. ಸಿಡುಕಿಲ್ಲ. ಯಾಕೆಂದರೆ ಅವರು ಎಡಪಂಥೀಯ ಚಿಂತನೆಗೆ ಮಾರು ಹೋದವರೇ. ಅವರ ವೇಗ ವಿಪರೀತ. ವೇಗಕ್ಕೆ ಸಿಕ್ಕಿ ಅಲ್ಲಲ್ಲಿ ಎಡವಿದ್ದೂ ಇದೆ. ಎಡವಿ ಬಿದ್ದದೂ ಇದೆ. ಎಡವ ಬೇಕಾದರೆ ಮುಂದೆ ಸಾಗುತ್ತಿರ ಬೇಕಲ್ಲ. ಆವರು ಪ್ರಯೋಗಶೀಲ ವ್ಯಕ್ತಿ. ಪರಿತಪಿಸುವ ಮಾತಿಲ್ಲ. ಚಲನಶೀಲತೆ ಆವರ ಸಹಜ ಸ್ವಭಾವ. ಆ ಗಡಸಾದ ಧ್ವನಿ ಕೇಳಿದರೆ ನೀವೇ ಹೇಳುತ್ತೀರಿ he is ಆರ್.ನಾಗೇಶ್.
ಅವರಿಗೀಗ ಅರುವತ್ತರ ವಸಂತ.(ಜನನ 13 ಮಾರ್ಚ್ 1943 ) ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರು. ರಂಗಕಲೆಯನ್ನು ವಿಕೇಂದ್ರಿಕರಣ ಮಾಡುವ ಪ್ರಯತ್ನ ಅವರ ಅಧ್ಯಕ್ಷತೆ ಅವಧಿಯಲ್ಲಿ ನಡೆದಿದೆ. ರಾಜ್ಯದ ಮೂಲೆ ಮೂಲೆಗೆ ನಾಟಕ ಕೊಂಡೊಯ್ಯುವ ಪ್ರಯತ್ನ ಸಾಗಿದೆ. ಇನ್ನು ಕೆಲವು ಕನಸುಗಳು ಸಕಾರವಾಗದೆ ಉಳಿದಿವೆ. ನನಸು ಮಾಡುವ ಹಠ.
ವಾರ್ತಾ ಇಲಾಖೆಯಲ್ಲಿ ಈ ಹಿಂದೆ ಔದ್ಯೋಗಿಯಾಗಿದ್ದರಿಂದ ಕರ್ನಾಟಕ ಮನದ ಮಾತಾಗಿ ಬಿಟ್ಟಿತ್ತು. ಜೀವನದ ಮುಕ್ಕಾಲು ಭಾಗ ರಂಗಭೂಮಿಯಲ್ಲಿ ದುಡಿದವರು. ಅವರು ರಂಗಸಜ್ಜಿಕೆಗಳನ್ನು ಪ್ರಯೋಗಿಸಿ ಅನುಭವ ಪಡೆದವರು. ಹಲವರ ಪ್ರೀತಿ,ಅಸೂಯೆ, ವ್ಯಂಗ್ಯ, ಮೆಚ್ಚುಗೆ ಇವರಿಗೆ ಸಾಮಾನ್ಯ.
ಈ ಷಷ್ಠ್ಯಬ್ಧಿ ಸಂದರ್ಭದಲ್ಲಿ ‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಆರ್.ನಾಗೇಶ್ ಅವರ ನಾಟಕೋತ್ಸವ, ವಿಚಾರ ಸಂಕಿರಣ ಮತ್ತು ರಂಗ ಗೌರವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜೂ.7ರಿಂದ12ರವರೆಗೆ ನಗರದ ರವೀಂದ್ರ ಕಲಾಕ್ಷೇತ್ರ, ನಯನರಂಗಮಂದಿರ, ಮತ್ತು ಎಡಿಎ ರಂಗಮಂದಿರದಲ್ಲಿ ಈ ಕಾರ್ಯಕ್ರಮಗಳು ಜರಗಲಿವೆ.
ನಾಟಕೋತ್ಸವ ಉದ್ಘಾಟನೆ : ಐ.ಎಂ.ವಿಠಲಮೂರ್ತಿ
ರವೀಂದ್ರ
ಕಲಾಕ್ಷೇತ್ರದಲ್ಲಿ
ಸಂಜೆ
7ಗಂಟೆಗೆ,
ಐದು
ನಾಟಕಗಳು:
- ಪೂಚಂತೆ ರಚನೆಯ -ತಬರನ ಕತೆ, -ಜೂ.7, ಬೆನಕ ತಂಡ
- ಶ್ರಿರಂಗ ರಚನೆಯ -ಶೋಕ ಚಕ್ರ-ಜೂ.8, ಸಮುದಾಯ ತಂಡ
- ಚಂದೇರ ಶೇಖರ ಕಂಬಾರ ರಚನೆಯ -ಹರಕೆಯಕುರಿ-ಜೂ.9, ರಂಗಸಂಪದ
- ಕೆ.ವಿ.ಅಕ್ಷರ ರಚನೆಯ -ಚೂರಿಕಟ್ಟೆ-ಜೂ.10, ಸಂಚಯ ತಂಡ
- ಟಿ.ಎನ್.ಸೀತಾರಾಂ ರಚನೆಯ -ನಮ್ಮೊಳಗೊಬ್ಬ ನಾಜೂಕಯ್ಯ- ಜೂ.11, ನಟರಂಗ
(ಇನ್ಪೋ ವಾರ್ತೆ)