ನಾವೇಕೆ ಜೀವನದಲ್ಲಿ ದೈವ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು? ಉತ್ತರ ಇಲ್ಲಿದೆ..!
ದೇವರ ಮೇಲೆ ನಂಬಿಕೆ ಇಡುವುದು ಅವರವರಿಗೆ ಬಿಟ್ಟ ವಿಚಾರ. ಆದರೆ ದೇವರ ಬಗ್ಗೆ ನಂಬಿಕೆಯಿಡುವುದು ಅಥವಾ ಶ್ರದ್ಧೆ ತೋರುವುದರಿಂದ ಒಂದಷ್ಟು ಪ್ರಯೋಜನ ಇರುವುದಂತು ನಿಜ. ಹಾಗಾದರೆ ದೈವ ಶ್ರದ್ಧೆಯಿಂದ ನಮಗೇನು ಪ್ರಯೋಜನ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ಆ ಪ್ರಶ್ನೆಗೆ ಅಧ್ಯಾತ್ಮದಲ್ಲಿ ಏನು ಉತ್ತರವಿದೆ ಗೊತ್ತಾ.?
ಹಾಗೆನೋಡಿದರೆ ನಮ್ಮ ಮಧ್ಯೆ ಆಸ್ತಿಕ ಮತ್ತು ನಾಸ್ತಿಕ ಎಂಬ ಎರಡು ವರ್ಗವಿದೆ. ಇಲ್ಲಿ ಆಸ್ತಿಕರು ದೇವರ ಮೇಲೆ ನಂಬಿಕೆ ಇರದ ನಾಸ್ತಿಕರಿಗಿಂತ ಹೆಚ್ಚಿನ ಅನುಕೂಲ ಪಡೆಯುತ್ತಾರಂತೆ. ದೇವರ ಮೇಲೆ ನಂಬಿಕೆಯಿಡುವುದು ಅಥವಾ ನಂಬಿಕೆಯಿಡದೇ ಇರುವುದು ಇದು ಆಯಾಯ ವ್ಯಕ್ತಿಗಳಿಗೆ ಸಂಬಂಧಿಸಿದ್ದಾಗಿದೆ.

ನಮ್ಮಲ್ಲಿ ದೇವರ ಬಗ್ಗೆ ನಂಬಿಕೆ ಇಲ್ಲದೆ ಹೋದರೆ ಏನಾಗುತ್ತೆ ಎಂಬ ಪ್ರಶ್ನೆಗಿಂತ ದೇವರ ಮೇಲಿನ ನಂಬಿಕೆಯಿಂದ ನಮಗೆ ಎಂತಹ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳುವುದು ಮಾನಸಿಕವಾಗಿ ನೆಮ್ಮದಿಯಾಗಿ ಬದುಕಲು ಸಹಕಾರಿಯಾಗುತ್ತದೆ.
ಮನಸ್ಸಿನ ಚಂಚಲತೆ, ಸಂಕಟ ನಿಯಂತ್ರಣ
ದೇವರಲ್ಲಿ ಗಾಢವಾದ ಹಾಗೂ ಪ್ರಾಮಾಣಿಕವಾದ ನಂಬಿಕೆಯನ್ನು ನಾವು ಬೆಳೆಸಿಕೊಂಡಿದ್ದೇ ಆದರೆ ನಮ್ಮ ಮನಸ್ಸನ್ನು ನಿಯಂತ್ರಿಸಲು ಏಕಾಗ್ರತೆ ಬೆಳೆಸಿಕೊಳ್ಳಲು ಸಮರ್ಥವಾದ ಶಕ್ತಿ ಒದಗುತ್ತದೆಯಲ್ಲದೆ ಭಕ್ತಿಯ ನಿರಂತರವಾದ ಶಕ್ತಿ ದೊರಕುವುದರೊಂದಿಗೆ ಭಕ್ತಿಯ ನಿರಂತರವಾದ ಆಚರಣೆಯಿಂದ ದೇವರ ಬಗೆಗಿನ ಉತ್ಸಾಹವು ಹೆಚ್ಚುತ್ತದೆ.
ಮನಸ್ಸಿನ ಚಂಚಲತೆ ಸಂಕಟ ಆತಂಕಗಳು ಎದುರಾಗುವಾಗ ದೇವರ ಧ್ಯಾನದಲ್ಲಿ ತೊಡಗಿ ಕೆಲವೊಮ್ಮೆ ಎಲ್ಲಾ ಉದ್ವೇಗ, ನೋವುಗಳಿಂದ ಆಶ್ಚರ್ಯಕರವಾಗಿ ಪಾರಾಗಬಹುದು. ಶ್ರೀ ರಾಮಕೃಷ್ಣರು ಉಪದೇಶವೊಂದರಲ್ಲಿ ದೈವಶ್ರದ್ಧೆಯುಳ್ಳವರಿಗೆ ಎಂತಹ ಅನುಕೂಲವಿದೆ ಎಂಬುದನ್ನು ಹೀಗೆ ವಿವರಿಸುತ್ತಾರೆ.

ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯ
ಹುಲಿ ಇತರ ಪ್ರಾಣಿಗಳನ್ನು ಕೊಂದು ತಿನ್ನುವಂತೆ ಭಗವದಾಸಕ್ತಿಯ ಹುಲಿ ಕಾಮ, ಕ್ರೋಧ ಮತ್ತಿತರ ರಾಗಭಾವಗಳನ್ನು ನುಂಗಿ ನೊಣೆಯುತ್ತದೆ. ದೈವೀತತ್ಪರತೆ ಹೃದಯದಲ್ಲಿ ಗಾಢವಾದಷ್ಟೂ ಕಾಮ ಮತ್ತಿತರ ಅರಿಷಡ್ ವರ್ಗಗಳು ಮಾಯವಾಗುತ್ತವೆ. ಬೃಂದಾವನದ ಗೋಪಿಯರಿಗೆ ಶ್ರೀಕೃಷ್ಣನನ್ನು ಕುರಿತು ಈ ಬಗೆಯ ಗಾಢವಾದ ಅನುರಕ್ತಿ ಇತ್ತು.
ನಮ್ಮಲ್ಲಿ ಯಾವಾಗ ಕಾಮಕ್ರೋಧಗಳು ಇಲ್ಲವಾಗುತ್ತವೆಯೋ ಆಗ ಮನಸ್ಸು ಪರಿಶುದ್ಧ ವಾಗುತ್ತದೆ. ಪರಿಶುದ್ಧವಾದ ಮನಸು ಪರಿಶುದ್ಧವಾದ ವಿಚಾರಗಳನ್ನೇ ಯೋಚಿಸುವುದರಿಂದ ಅಲ್ಲದೆ ಚಂಚಲವಾಗಿ ಪ್ರವಹಿಸುವ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.
ಭಗದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದೇನು?
ದೇವರಲ್ಲಿ ನಂಬಿಕೆ ಯಿಲ್ಲದವರು ಈ ವಿಚಾರದಲ್ಲಿ ಕಷ್ಟಕರವಾದ ಹಾದಿಯನ್ನು ತುಳಿಯಬೇಕಾಗುತ್ತದೆ. ಏಕೆಂದರೆ ಅವರು ತಮ್ಮ ಅಪನಂಬಿಕೆಗಳನ್ನು ಕಳೆದುಕೊಳ್ಳದ ಹೊರತು ದೈವಶ್ರದ್ಧೆಯನ್ನು ಪಡೆಯಲಾರರು.
ಶ್ರೀ ಭಗವದ್ಗೀತೆಯಲ್ಲಿ ಕೃಷ್ಣ ಹೇಳಿರುವ ಉಪದೇಶ ಎಷ್ಟು ಮಹತ್ವವಾಗಿದೆ ಎಂಬುದು ಅರಿವಿಗೆ ಬರುತ್ತದೆ. ಕೃಷ್ಣ ಹೇಳುತ್ತಾನೆ ನನ್ನ ಯಾವುದೇ ಭಕ್ತ ಜಿತೇಂದ್ರಿಯನಲ್ಲದಿದ್ದರೂ, ವಿಷಯಾಕರ್ಷಣೆಗಳಿಂದ ಪೀಡಿತನಾಗಿದ್ದರೂ, ನಿಜವಾದ ಹಾಗೂ ದೃಢವಾದ ಭಕ್ತಿಯೊಂದಿತ್ತು ಎಂದಾದರೆ ಆತ ಸಾಮಾನ್ಯವಾಗಿ ತನ್ನ ಹಾದಿಯಿಂದ ವಿಚಲಿತನಾಗುವುದಿಲ್ಲ.
ದೈವಶ್ರದ್ಧೆಯಿಂದ ಮನಸ್ಸಿನ ಶುದ್ಧೀಕರಣ
ದೇವರ ಮೇಲೆ ನಂಬಿಕೆಯುಳ್ಳವರ ಮನಸ್ಸು ತನಗೆ ತಾನೇ ಶುದ್ಧೀಕರಣಕ್ಕೆ ಒಳಗಾಗುವ ಪ್ರಕ್ರಿಯೆ ತೀರಾ ಸರಳವಾದದ್ದು, ಅಂತಹವರು ದೈವೀಪರವಾದ ಪ್ರೇಮವನ್ನು ಬೆಳೆಸಿಕೊಂಡು ಹಾಗೆಯೇ ಅವರ ಮನಸ್ಸು ಕೇವಲ ಭಗವಂತನ ಮೇಲೆ ಮಾತ್ರ ನಿಲ್ಲುತ್ತದೆ. ಏಕೆಂದರೆ ನಮಗೆ ಯಾವುದು ಪ್ರಿಯವೋ ಅದರ ಮೇಲೆ ನಮ್ಮ ಮನಸ್ಸು ನಿಲ್ಲುತ್ತದೆ ಎನ್ನುವುದು ತಿಳಿದ ವಿಚಾರವೇ.
ಹಾಗೆಯೇ ಯಾವುದರ ಮೇಲೆ ಮನಸ್ಸು ನಿಲ್ಲುತ್ತದೆಯೋ ಅದರ ಗುಣಗಳನ್ನು ಮನಸ್ಸು ಒಳಗೊಂಡಿರುತ್ತದೆ. ಆದ ಕಾರಣ ಭಗವಂತನ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಿದರೆ, ನಾವು ದೈವೀ ಸಂಪತ್ತಿಗೆ ಅಧಿಕಾರಿ ಗಳಾಗುತ್ತೇವೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ.
ದೈವ ನಂಬಿಕೆಯಿಂದ ಪ್ರಯೋಜನವೇನು?
ದೇವರಲ್ಲಿ ನಂಬಿಕೆ ಹೆಚ್ಚಾಗುತ್ತಿದ್ದಂತೆಯೇ ಚಿತ್ತ ಶುದ್ಧಿ, ಇಂದ್ರಿಯ ನಿಗ್ರಹ, ಕ್ರೋಧರಾಹಿತ್ಯ ನೆಮ್ಮದಿ, ನಿಶ್ಚಲತೆ ಮುಂತಾದವುಗಳನ್ನು ಗಳಿಸಿಕೊಳ್ಳುವಲ್ಲಿಯೂ ನಮಗೆ ಸಾಧ್ಯವಾಗುತ್ತದೆ. ಒಬ್ಬ ಮನುಷ್ಯನ ಬದುಕಿನಲ್ಲಿ ಶುದ್ಧ ಮನಸ್ಸು ಮತ್ತು ನೆಮ್ಮದಿ ರಾರಾಜಿಸಲು ಶುರುವಾಗುತ್ತದೆಯೋ ಆತ ಸುಖಿಯಾಗಿದ್ದಾನೆ. ಆರೋಗ್ಯವಾಗಿದ್ದಾನೆ ಎಂದರ್ಥ.
ನಮ್ಮೆಲ್ಲರ ಬದುಕಿನಲ್ಲಿ ಆರೋಗ್ಯ ಮತ್ತು ನೆಮ್ಮದಿ ಇಲ್ಲದೆ ಹೋದರೆ ಆತ ಎಷ್ಟೇ ಶ್ರೀಮಂತನಾದರೂ ಖುಷಿಯಾಗಿ ತನ್ನ ಜೀವನವನ್ನು ಕಳೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮನಸ್ಸು ಆದಷ್ಟು ಶಾಂತಚಿತ್ತವಾಗ ಬೇಕಾದರೆ ದೈವತ್ವದ ಕಡೆಗೆ ಒಲವು ತೋರಬೇಕು. ಆ ಮೂಲಕ ದೈವಶ್ರದ್ಧೆ ಬೆಳೆಸಿಕೊಳ್ಳಬೇಕು.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ












Click it and Unblock the Notifications