ಮನೆಯ ಈ ಸ್ಥಳದಲ್ಲಿ ಬಿದಿರು ಗಿಡ ಬೆಳೆಸಿದರೆ ಹಣ ನೀರಿನಂತೆ ಖರ್ಚಾಗುವುದಿಲ್ಲ...
ಮನೆಯನ್ನು ಸುಂದರವಾಗಿಡಲು ಅನೇಕ ಜನರು ಒಳಾಂಗಣ ಸಸ್ಯಗಳನ್ನು ಖರೀದಿಸಿ ಬೆಳೆಸುತ್ತಾರೆ. ವಾಸ್ತು ಪ್ರಕಾರ ಮನೆಯೊಳಗೆ ಹಸಿರು ಗಿಡಗಳನ್ನು ಬೆಳೆಸುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ.
ಅದೃಷ್ಟವನ್ನು ಆಕರ್ಷಿಸಲು ಸಹಾಯ ಮಾಡುವ ವಿವಿಧ ಸಸ್ಯಗಳು ವಾಸ್ತುವಿನಲ್ಲಿವೆ. ಅವುಗಳಲ್ಲಿ ಒಂದು ಬಿದಿರು ಸಸ್ಯ. ಅನೇಕರು ಈ ಬಿದಿರಿನ ಗಿಡವನ್ನು ತಮ್ಮ ಮನೆಗಳಲ್ಲಿ ಮಾತ್ರವಲ್ಲದೆ ತಮ್ಮ ಕಚೇರಿಗಳಲ್ಲಿಯೂ ಬೆಳೆಸುತ್ತಿದ್ದಾರೆ.

ಏಕೆಂದರೆ ಬಿದಿರಿನ ಗಿಡವು ಅದೃಷ್ಟವನ್ನು ಆಕರ್ಷಿಸುತ್ತದೆ ಮತ್ತು ಹಣದ ಸಮಸ್ಯೆಗಳನ್ನು ನಿವಾರಿಸುತ್ತದೆ. ಅದಕ್ಕಾಗಿ ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಬಿದಿರಿನ ಗಿಡವನ್ನು ಬೆಳೆಸಬೇಕು.
ಬಿದಿರಿನ ಗಿಡವನ್ನು ತಪ್ಪು ದಿಕ್ಕಿನಲ್ಲಿ ಬೆಳೆಸಿದರೆ, ಅದು ಮನೆಯ ಆರ್ಥಿಕ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗಾದರೆ ಬಿದಿರಿನ ಗಿಡವನ್ನು ಮನೆಯಲ್ಲಿ ಯಾವ ದಿಕ್ಕಿಗೆ ಬೆಳೆಸಬೇಕೆಂದು ಈಗ ತಿಳಿಯೋಣ.
ಬಿದಿರಿನ ಸಸ್ಯವನ್ನು ಏಕೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ?
ವಾಸ್ತು ಶಾಸ್ತ್ರದ ಪ್ರಕಾರ ಬಿದಿರಿನ ಗಿಡವನ್ನು ಅತ್ಯಂತ ಮಂಗಳಕರವಾದ ಸಸ್ಯವೆಂದು ಪರಿಗಣಿಸಲಾಗಿದೆ. ಬಿದಿರಿನ ಸಸ್ಯ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮನೆಯ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಮನೆಗೆ ಸಂಪತ್ತು ಹಾಗೂ ಸಮೃದ್ಧಿಯನ್ನು ತರುತ್ತದೆ. ಇದಲ್ಲದೆ ಈ ಸಸ್ಯವು ಮನಸ್ಸಿಗೆ ಮತ್ತು ಆತ್ಮಕ್ಕೆ ಶಾಂತಿಯನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ.

ಬಿದಿರಿನ ಗಿಡಯ ಎಷ್ಟು ಕೊಂಬೆಗಳನ್ನು ಹೊಂದಿರುವುದು ಒಳ್ಳೆಯದು?
ವಾಸ್ತು ಪ್ರಕಾರ ಮನೆ ಅಥವಾ ಕಛೇರಿಯಲ್ಲಿ ಬಿದಿರಿನ ಗಿಡವನ್ನು ಹೊಂದಿರುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದು ಬಿದಿರಿನ ಸಸ್ಯದಲ್ಲಿನ ಕೊಂಬೆಗಳನ್ನು ಅವಲಂಬಿಸಿರುತ್ತದೆ. ಅಂದರೆ 11 ಕೊಂಬೆಗಳನ್ನು ಹೊಂದಿರುವ ಬಿದಿರನ್ನು ನೆಟ್ಟರೆ ಒಳ್ಳೆಯದು, 2 ಕೊಂಬೆಗಳು ಪ್ರೀತಿ ಮತ್ತು ದಾಂಪತ್ಯ ಜೀವನಕ್ಕೆ ಒಳ್ಳೆಯದು, 3 ಕೊಂಬೆಗಳು ಸಂತೋಷದ ಜೀವನಕ್ಕಾಗಿ, 5 ಕೊಂಬೆಗಳು ಆರೋಗ್ಯಕ್ಕಾಗಿ, 10 ಕೊಂಬೆಗಳು ಪರಿಪೂರ್ಣ ಜೀವನಕ್ಕಾಗಿ ಮತ್ತು 21 ಕೊಂಬೆಗಳು ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು ಮಂಗಳಕರವೆಂದು ಪರಿಗಣಿಸಲಾಗಿದೆ.
ಬಿದಿರಿನ ಗಿಡವನ್ನು ಯಾವ ದಿಕ್ಕಿನಲ್ಲಿ ಮತ್ತು ಯಾವ ಸ್ಥಳದಲ್ಲಿ ಇಡಬೇಕು?
* ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆ ಅಥವಾ ಕಛೇರಿಯಲ್ಲಿ ಬಿದಿರಿನ ಗಿಡವನ್ನು ಇಡುತ್ತಿದ್ದರೆ ಅದನ್ನು ಇಡಲು ಪೂರ್ವ ದಿಕ್ಕು ತುಂಬಾ ಒಳ್ಳೆಯದು. ಈ ದಿಕ್ಕಿಗೆ ಬಿದಿರಿನ ಗಿಡವನ್ನು ಇಡುವುದರಿಂದ ಶಾಂತಿ ಮತ್ತು ಸಂತೋಷ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
* ಬಿದಿರಿನ ಗಿಡವನ್ನು ಯಾವಾಗಲೂ ಕಿಟಕಿಯ ಬಳಿ ಇಡಬಾರದು. ಸೂರ್ಯನ ಬೆಳಕನ್ನು ಪಡೆಯುವ ಕಿಟಕಿಯ ಬಳಿಯೂ ಇಡಬಾರದು. ಬಿಸಿಲಿಗೆ ಬಿದಿರಿನ ಗಿಡ ಒಣಗಿ ಹೋದರೆ ಮನೆಯ ಆರ್ಥಿಕ ಸ್ಥಿತಿಗೂ ಧಕ್ಕೆಯಾಗುತ್ತದೆ.
* ವಾಸ್ತು ಪ್ರಕಾರ ಬಿದಿರಿನ ಗಿಡವನ್ನು 2 ರಿಂದ 3 ಅಡಿ ಎತ್ತರದಲ್ಲಿ ಬೆಳೆಸುವುದು ಉತ್ತಮ. ಇಷ್ಟು ಎತ್ತರದ ಬಿದಿರಿನ ಗಿಡವನ್ನು ಕಛೇರಿಯಲ್ಲಿ ಬೆಳೆಸಿದರೆ ಕಛೇರಿಯ ವಾತಾವರಣ ಚೆನ್ನಾಗಿರುತ್ತದೆ ಮತ್ತು ನೆಗೆಟಿವ್ ಎನರ್ಜಿ ಹತ್ತಿರ ಸುಳಿಯುವುದಿಲ್ಲ.
* ವಾಸ್ತು ಪ್ರಕಾರ ಪಶ್ಚಿಮ ದಿಕ್ಕಿನಲ್ಲಿ ಬಿದಿರಿನ ಗಿಡವನ್ನು ಬೆಳೆಸಿದರೆ ಮನೆಯಲ್ಲಿ ಓದುವ ಮಕ್ಕಳಿದ್ದರೆ ಅವರ ಮೂಡ್ ಚೆನ್ನಾಗಿರುತ್ತದೆ. ಮತ್ತು ಆ ಬಿದಿರಿನ ಗಿಡದಲ್ಲಿ ಒಂದು ರೂಪಾಯಿ ನಾಣ್ಯವನ್ನು ಹಾಕಿದರೆ ಮಕ್ಕಳ ಮನಸ್ಥಿತಿ ಸ್ಥಿರವಾಗಿರುತ್ತದೆ.
* ವಾಸ್ತು ಪ್ರಕಾರ ಬಿದಿರಿನ ಗಿಡವನ್ನು ಉತ್ತರ ದಿಕ್ಕಿನಲ್ಲಿ ಇಟ್ಟರೆ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ. ಅಲ್ಲದೆ ಆ ಬಿದಿರಿನ ಗಿಡದ ಮೇಲೆ ನೀಲಿ ಕಲ್ಲನ್ನು ಇಡುವುದರಿಂದ ಇನ್ನೂ ಉತ್ತಮ ಫಲಿತಾಂಶ ದೊರೆಯುತ್ತದೆ.
* ಮನೆಯಲ್ಲಿ ಬಿದಿರಿನ ಗಿಡವನ್ನು ಬೆಳೆಸಿದರೆ ಆ ಮನೆಯಲ್ಲಿ ಲಕ್ಷ್ಮಿ ದೇವಿ ಸದಾ ನೆಲೆಸುತ್ತಾಳೆ. ಪರಿಣಾಮವಾಗಿ ಮನೆಯಲ್ಲಿ ಸಂಪತ್ತು ಸಂಗ್ರಹವಾಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)
-
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ












Click it and Unblock the Notifications