Saraswati Puja 2024: ವಿದ್ಯಾರ್ಥಿಗಳು ವಿದ್ಯಾದಾತೆ ಸರಸ್ವತಿಯನ್ನು ಈ ವಿಧಾನದಲ್ಲಿ ಪೂಜಿಸಿದರೆ ಜೀವನದಲ್ಲಿ ಯಶಸ್ಸು ಪಕ್ಕ...
ಬೇಸಿಗೆ ಕಾಲದ ರಜಾ ದಿನಗಳು ಆರಂಭವಾಗಲು ತುಂಬಾ ದೂರವಿಲ್ಲ. ಮಕ್ಕಳು ಈಗಿನಿಂದಲೇ ಅಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೆಚ್ಚು ಅಂಕ ಪಡೆಯಲು ತಾವೇ ಟಾಪ್ ಲಿಸ್ಟ್ನಲ್ಲಿ ಬರಬೇಕು ಅನ್ನೋ ಮಹದಾಸೆಯಿಂದ ಬಿಡುವಿಲ್ಲದೆ ಕೆಲ ವಿದ್ಯಾರ್ಥಿಗಳು ಅಭ್ಯಾಸವನ್ನು ಮಾಡುತ್ತಿರುತ್ತಾರೆ. ಆದರೆ ಇಂಥಹವರಿಗೆ ಓದಿನೊಂದಿಗೆ ದೇವರ ಆಶೀರ್ವಾದವೂ ಮುಖ್ಯ.
ಅದಕ್ಕಾಗಿ ಕೆಲ ವಿಶೇಷ ದಿನಗಳಲ್ಲಿ ವಿದ್ಯಾದಾಯಿನಿ ಸರಸ್ವತಿ ದೇವಿಯನ್ನು ಪೂಜಿಸುವುದರಿಂದ ಮಕ್ಕಳು ಉತ್ತಮ ಅಂಕದೊಂದಿಗೆ ಓದಿನಲ್ಲಿ ಏಕಾಗ್ರತೆಯನ್ನೂ ಪಡೆಯಬಹುದು. ಹಾಗಾದರೆ ಸರಸ್ವತಿಯನ್ನು ಪೂಜಿಸುವುದು ಹೇಗೆ? ಹೇಗೆ ಪೂಜಿಸುವುದರಿಂದ ವಿದ್ಯಾದೇವತೆಯನ್ನು ಒಲಿಸಿಕೊಳ್ಳಬಹುದು? ಆಕೆ ಪೂಜೆಯನ್ನು ಯಾವಾಗ ಮಾಡಬೇಕು? ಇಂತೆಲ್ಲಾ ವಿಷಯಗಳನ್ನು ತಿಳಿಯೋಣ.

ವಿದ್ಯಾರ್ಥಿಗಳು ವಿದ್ಯಾದಾಯಿನಿ ಸರಸ್ವತಿ ದೇವಿಯನ್ನು ಕೆಲ ವಿಧಾನದಲ್ಲಿ ಪೂಜಿಸಬೇಕು. ಆಕೆಯ ಅನುಗ್ರಹದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
ಸರಸ್ವತಿ ಪೂಜೆ 2024: ಸಮಯ, ದಿನಾಂಕ
ಈ ವರ್ಷ ಸರಸ್ವತಿ ಪೂಜೆಯನ್ನು 14 ಫೆಬ್ರವರಿ 2024 ರಂದು ಮಾಡಲಾಗುತ್ತದೆ. ದಿನಾಂಕ ಫೆಬ್ರವರಿ 13 ರಂದು ಮಧ್ಯಾಹ್ನ 2:41 ರಿಂದ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 14 ರಂದು ಮಧ್ಯಾಹ್ನ 12:09 ರವರೆಗೆ ಮುಂದುವರಿಯುತ್ತದೆ.
ಫೆಬ್ರವರಿ 14 ರಂದು ಉದಯತಿಥಿಯಂದು ಪೂಜೆ ನಡೆಯಲಿದೆ. ಈ ದಿನದಂದು ನೀವು ಸರಸ್ವತಿ ದೇವಿಯನ್ನು ಸರಿಯಾಗಿ ಪೂಜಿಸಬೇಕು ಮತ್ತು ಆಕೆಯ ಆಶೀರ್ವಾದವನ್ನು ಪಡೆಯಬೇಕು.

ಸರಸ್ವತಿ ಆವಾಹನೆ
ಸರಸ್ವತಿ ಆವಾಹನೆ ಎಂದರೆ ದೇವಿಯನ್ನು ಪೂಜೆಗೆ ಆಹ್ವಾನಿಸುವುದಾಗಿದೆ. ಈ ಪವಿತ್ರ ದಿನದಂದು 'ಸರಸ್ವತಿ ದೇವಿಯನ್ನು' ಭಕ್ತರು ಕಲಿಯಲು ಮತ್ತು ಜ್ಞಾನವನ್ನು ಪಡೆಯಲು ಆಹ್ವಾನಿಸುತ್ತಾರೆ. ಸರಸ್ವತಿ ದೇವಿಯನ್ನು ಪೂಜಿಸುವುದರಿಂದ ವಿಪುಲ ಜ್ಞಾನ ಲಭಿಸುತ್ತದೆ ಎಂದು ನಂಬಲಾಗಿದೆ. ಸರಸ್ವತಿ ಪೂಜೆಯ ದಿನದಂದು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಸರಸ್ವತಿ ಪೂಜೆಯನ್ನು ಸಹ ನಡೆಸಲಾಗುತ್ತದೆ. ಏಕೆಂದರೆ ಈ ದಿನವು ಶಿಕ್ಷಣ ಮತ್ತು ಕಲಿಕೆಗೆ ಬಹಳ ಮಂಗಳಕರವಾದ ದಿನವಾಗಿದೆ. ಈ ಸಂದರ್ಭದಲ್ಲಿ ಭಕ್ತರು ಸರಸ್ವತಿ ದೇವಿಯ ವಿಗ್ರಹವನ್ನು ಪೂಜಿಸುತ್ತಾರೆ. ಈ ದಿನದಲ್ಲಿ ಸರಸ್ವತಿ ದೇವಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಪ್ರಗತಿಯ ಹಾದಿ ತೆರೆಯುತ್ತದೆ ಎನ್ನುವುದು ನಂಬಿಕೆ.
ಸರಸ್ವತಿ ದೇವಿಯ ಪೂಜಾ ವಿಧಾನ:
* ಫೆಬ್ರವರಿ 14 ರಂದು ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಎದ್ದು ಸ್ನಾನ ಮಾಡಬೇಕು. ಪೂಜಾ ಸ್ಥಳವನ್ನು ಶುದ್ಧೀಕರಿಸಬೇಕು. ಗಂಗಾಜಲದಿಂದ ಸ್ಥಳವನ್ನು ಶುದ್ಧೀಕರಿಸಿದರೆ ತುಂಬಾ ಒಳ್ಳೆಯದು.
*ತಾಯಿ ಸರಸ್ವತಿಯ ವಿಗ್ರಹ ಅಥವಾ ಫೋಟೋವನ್ನು ಪ್ರತಿಷ್ಠಾಪಿಸಿ.
*ತಾಯಿ ಶರಾವತಿಯ ಮುಂದೆ ಧ್ಯಾನ ಮಾಡಿ ಆದರೆ ಅದಕ್ಕೂ ಮೊದಲು ಧೂಪದ್ರವ್ಯವನ್ನು ಬೆಳಗಿಸಿ.
*ಪೂಜೆಯ ಆಸನದ ಮೇಲೆ ಕುಳಿತು ತಾಯಿಯನ್ನು ಮನಃಪೂರ್ವಕವಾಗಿ ಪೂಜಿಸಿ. ಆಸನವಿಲ್ಲದೆ ಪೂಜೆ ಮಾಡಿದರೆ ಅದು ನಿರರ್ಥಕವೆಂದು ಪರಿಗಣಿಸಲಾಗುತ್ತದೆ.
*ತಾಯಿ ಸರಸ್ವತಿಗೆ ತಿಲಕವನ್ನು ಅರ್ಪಿಸಿ ಮತ್ತು ಮಾಲೆಯನ್ನು ಅರ್ಪಿಸಿ.
*ತಾಯಿ ಸರಸ್ವತಿಗೆ ಸಿಹಿತಿಂಡಿಗಳನ್ನು ಅರ್ಪಿಸಿ ಮತ್ತು ಹಣ್ಣುಗಳು ಇತ್ಯಾದಿಗಳನ್ನು ಅರ್ಪಿಸಿ.
*ಸರಸ್ವತಿ ದೇವಿಯ ಮಂತ್ರಗಳನ್ನು ನಿಮ್ಮ ಹೃದಯದಿಂದ ಪಠಿಸಿ ಮತ್ತು ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಿ.
*ಗಮನಿಸಿ ವಿದ್ಯಾದಾಯಿನಿ ಸರಸ್ವತಿಯ ಪೂಜೆಯನ್ನು ಸರಿಯಾದ ಸಮಯದಲ್ಲಿ ಮಾತ್ರ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.
ಸರಸ್ವತಿ ದೇವಿಯ ಮಂತ್ರ:
ಸರಸ್ವತಿ ಪೂಜೆಯ ದಿನ, 'ಓಂ ಐಂ ಸರಸ್ವತ್ಯೈ ಏಂ ನಮಃ' ಈ ಮಂತ್ರವನ್ನು ಪಠಿಸಿ. ಇದರಿಂದಾಗಿ ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ ಮತ್ತು ನೀವು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತೀರಿ.
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications