Jackfruit Sambar: ಮನೆಯಲ್ಲಿ ಹಲಸಿನಕಾಯಿ ಇದ್ಯಾ? ಹಾಗ್ರಿದೆ ಈಗಲೇ ಮಾಡಿ ಈ ಸುಲಭ ಸಾಂಬಾರ್
ಇನ್ನೇನು ಬೇಸಿಗೆಗಾಲ ಆರಂಭವಾಯ್ತು, ಬೇಸಿಗೆಯ ಹಣ್ಣಿನ ಸುಗ್ಗಿಯೂ ಶುರುವಾಯ್ತು, ಮಾವಿನ ಹಣ್ಣು, ಹಲಸಿನ ಹಣ್ಣು ಹೀಗೆ ಬೇಸಿಗೆಯಲ್ಲೇ ಬೆಳೆಯುವ ಬೇಸಿಗೆಯಲ್ಲೇ ಸೇವಿಸಬೇಕಾದ ಹಣ್ಣುಗಳ ಸೀಜನ್ ಈಗಾಗಲೇ ಆರಂಭವಾಗಿದೆ. ಅದರಲ್ಲೂ ಹಲಸಿನ ಹಣ್ಣು, ನಾಲಿಗೆಗೆ ಎಷ್ಟು ರುಚಿಯೋ..ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಆದ್ರೆ ಅದನ್ನು ಬಿಡಿಸುವ ಪರಿ ಮಾತ್ರ ಕೊಂಚ ಕಷ್ಟ.
ಹಲಸಿನ ಹಣ್ಣು ಮಾತ್ರವಲ್ಲ ಹಲಸಿನ ಕಾಯಿ ಕೂಡ ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿ ಹಲಸಿನ ಕಾಯಿಯನ್ನು ಸಾಂಬಾರ್ ಅಥವಾ ಪಲ್ಯ ಮಾಡಿ ಈ ಬೇಸಿಯಲ್ಲಿ ಒಮ್ಮೆ ಸವಿಯಿರಿ. ಕೆಲವೊಂದು ಹಲಸು ಹಣ್ಣಾದ ಮೇಲೆ ತಿನ್ನಲು ರುಚಿ ಇರುವುದಿಲ್ಲ, ಅಂತಹ ಹಲಸನ್ನು ಸಾಂಬಾರ್ ಮಾಡಿ ತಿನ್ನಿ. ಸರಳವಾಗಿ ಹಲಸಿನ ಕಾಯಿ ಸಾಂಬಾರ್ ಮಾಡುವ ವಿಧಾನ ಇಲ್ಲಿದೆ.

ಹಲಸಿನ ಕಾಯಿ ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಚಿಕ್ಕ ಹಲಸಿನ ಹಣ್ಣು- 1/2 ಭಾಗ
ತೊಗರಿ ಬೇಳೆ- 4 ಚಮಚ
ಅರಿಶಿನ ಪುಡಿ- ದೊಡ್ಡ ಚಿಟಿಕೆ
ಉಪ್ಪು-ನಿಮ್ಮ ರುಚಿಗೆ ತಕ್ಕಂತೆ
ಬೆಲ್ಲ- 1/2 ಚಮಚ
ಹುಣಸೆಹಣ್ಣು-ಒಂದು ನೆಲ್ಲಿಕಾಯಿ ಗಾತ್ರ
ಮಸಾಲೆಗೆ ಬೇಕಾಗುವ ಸಾಮಾಗ್ರಿಗಳು
ತುರಿದ ತೆಂಗಿನಕಾಯಿ-1/2 ಕಪ್
ಕೆಂಪು ಮೆಣಸಿನಕಾಯಿ-4-5
ಉದ್ದಿನ ಬೇಳೆ-1 ಚಮಚ
ಕೊತ್ತಂಬರಿ ಬೀಜಗಳು- 2 ಚಮಚ
ಜೀರಿಗೆ-1/2 ಚಮಚ
ಸಾಸಿವೆ ಬೀಜಗಳು-1/4 ಚಮಚ
ಮೆಂತ್ಯ ಬೀಜಗಳು-7-8
ಇಂಗು-ಒಂದು ಚಿಟಿಕೆ
ಅಡುಗೆ ಎಣ್ಣೆ-1/2 ಚಮಚ
ಕರಿಬೇವಿನ ಎಲೆಗಳು

ಒಗ್ಗರಣೆಗೆ ಬೇಕಾಗುವ ಸಾಮಾಗ್ರಿಗಳು
ಕೆಂಪು ಮೆಣಸಿನಕಾಯಿ-1
ಕರಿಬೇವಿನ ಎಲೆಗಳು-5-6
ಸಾಸಿವೆ ಬೀಜಗಳು-1/2 ಚಮಚ
ಅಡುಗೆ ಎಣ್ಣೆ-1 ಚಮಚ
ಪುಡಿಮಾಡಿದ ಬೆಳ್ಳುಳ್ಳಿ-4-5
ಹಲಸಿನ ಕಾಯಿ ಸಾಂಬಾರ್ ಮಾಡುವ ವಿಧಾನ
ಮೊದಲು ತೊಗರಿ ಬೇಳೆಯನ್ನು 15 ನಿಮಿಷಗಳ ಕಾಲ ನೆನೆಸಿಡಿ. ಹಸಿ ಹಲಸಿನ ಕಾಯಿ ಕತ್ತರಿಸಿ. ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಬಳಿಕ ಕುಕ್ಕರ್ನಲ್ಲಿ ಕತ್ತರಿಸಿದ ಹಲಸಿನ ಕಾಯಿ, ನೆನೆಸಿಟ್ಟ ಬೇಳೆ, ಚಿಟಿಕೆ ಅರಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಮಸಾಲೆಗೆ ಬೇಕಾಗುವ ಸಾಮಾಗ್ರಿಗಳನ್ನು ಬೆರೆಸಿ ರುಬ್ಬಿಕೊಳ್ಳಿ. ಬಳಿಕ ಬೇಯಿಸಿದ ಹಲಸಿನ ಕಾಯಿ ಹಾಗೂ ರಬ್ಬಿದ ಮಸಾಲೆಯನ್ನು ಸೇರಿಸಿ, ಬಳಿಕ ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಕೊನೆಯಲ್ಲಿ ಒಗ್ಗರಣೆ ಸೇರಿಸಿದರೆ ರುಚಿ-ರುಚಿಯಾದ ಹಲಸಿನ ಕಾಯಿ ಸಾಂಬಾರ್ ಸವಿಯಲು ಸಿದ್ಧ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು












Click it and Unblock the Notifications