Pepper Rice Recipe: ನಿಮಿಷದಲ್ಲೇ ತಯಾರಿಸಿ ರುಚಿರುಚಿಯಾದ ಪೆಪ್ಪರ್ ರೈಸ್..!
ಬೆಳಗಿನ ತಿಂಡಿ ರುಚಿಕರವಾಗಿರಬೇಕು, ಆರೋಗ್ಯಕರವಾಗಿರಬೇಕು ಎಂದುಕೊಂಡವರು ಈ ಪೆಪ್ಪರ್ ರೈಸ್ ಟ್ರೈ ಮಾಡಿ. ಅನ್ನದ ಜೊತೆಗೆ ಕಾಳು ಮೆಣಸಿನ ಘಮ, ಜೊತೆಗೆ ಗೋಡಂಬಿ ಬಾಯಿಗೆ ಸಿಗುತ್ತಿದ್ದರೆ, ಒಂದು ಚಮಚ ತಿನ್ನುವವರು ನಾಲ್ಕು ಚಮಚ ತಿನ್ನಬೇಕು ಅಷ್ಟು ರುಚಿಯಾಗಿರುತ್ತದೆ. ಬಹಳ ಸರಳವಾಗಿ ಮಾಡುವ ಈ ಅನ್ನದ ಖಾದ್ಯ ಮಕ್ಕಳಿಗೂ ಸಹ ಇಷ್ಟವಾಗುತ್ತದೆ.
ಜೊತೆಗೆ ಇನ್ನೇನು ಮಳೆಗಾಲ ಆರಂಭವಾಯ್ತು ಜೊತೆಗೆ ಶೀತ-ಕೆಮ್ಮು ಅಂತಹ ಕಾಯಿಲೆಗಳು ಶುರುವಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಕಾಳು ಮೆಣಣು ಬಳಸಿ ಮಾಡುವ ಖಾದ್ಯಗಳನ್ನು ಹೆಚ್ಚಾಗಿ ತಿನ್ನಬೇಕು. ಇದರಲ್ಲಿ ಪೆಪ್ಪರ್ ರೈಸ್ ನಿಮಗೆ ಬೆಸ್ಟ್ ಆಯ್ಕೆಯಾಗಿರುತ್ತದೆ. ಬೆಳಗಿನ ತಿಂಡಿಗೆ ಪೆಪ್ಪರ್ ರೈಸ್ ತಿಂದರೆ ಗಂಟಲು ಕಿಚಿಕಿಚಿ, ಕೆಮ್ಮು ಸೇರಿದಂತೆ ಮಳೆಗಾಲದಲ್ಲಿ ಬರುವ ಕಾಯಿಲೆಗಳಿಂದ ದೂರ ಇರಬಹುದು. ಹೀಗಾಗಿ ಸುಲಭವಾಗಿ ಪೆಪ್ಪರ್ ರೈಸ್ ಮಾಡುವ ವಿಧಾನ ಇಲ್ಲಿದೆ.

ಪೆಪ್ಪರ್ ರೈಸ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಅನ್ನ- 1 ಕಪ್
ಸಾಸಿವೆ-1/2 ಚಮಚ
ಜೀರಿಗೆ-1/2 ಚಮಚ
ಉದ್ದಿನ ಬೇಳೆ-1 ಚಮಚ
ಗೋಡಂಬಿ-2 ಚಮಚ
ಈರುಳ್ಳಿ-1
ಕಾಳು ಮೆಣಸು-2 ಚಮಚ
ಕರಿಬೇವಿನ ಎಲೆಗಳು
ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು

ಪೆಪ್ಪರ್ ರೈಸ್ ತಯಾರಿಸುವ ವಿಧಾನ
ಮೊದಲು ಅನ್ನವನ್ನು ಸಿದ್ಧಪಡಿಸಿಕೊಳ್ಳಿ. ಸೋನಾ ಮಸೂರಿ ಅಕ್ಕಿಯಾಗಿದ್ದರೆ ಉತ್ತಮ. ಅನ್ನ ಸಿದ್ಧವಾದ ಬಳಿಕ ಕಾಳು ಮೆಣಸನ್ನು ಪುಡಿ ಮಾಡಿ ಸಿದ್ಧಪಡಿಸಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ, ಜೀರಿಗೆ ಮತ್ತು ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ಸಾಸಿವೆ ಕಾಳುಗಳು ಸಿಡಿಯಲು ಪ್ರಾರಂಭವಾಗುವವರೆಗೆ ಚೆನ್ನಾಗಿ ಹುರಿಯಿರಿ, ಈ ಒಗ್ಗರಣೆಗೆ ಗೋಡಂಬಿ ಸೇರಿಸಿ. ನಂತರ ಕತ್ತರಿಸಿದ ಈರುಳ್ಳಿ, ಕರಿಬೇವಿನ ಎಲೆಗಳನ್ನು ಸೇರಿಸಿ ಮತ್ತು ಮೃದುವಾಗುವವರೆಗೆ ಹುರಿಯಿರಿ.
ಬಳಿಕ ಪುಡಿಮಾಡಿದ ಕರಿಮೆಣಸು ಮತ್ತು ಉಪ್ಪು ಸೇರಿಸಿ ಗೋಡಂಬಿ ಒಗ್ಗರಣೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಈ ಮಿಶ್ರಣಕ್ಕೆ ಅನ್ನ ಸೇರಿಸಿ ಕಲಸಿದರೆ ರುಚಿ-ರುಚಿಯಾದ ಬಿಸಿ ಬಿಸಿಯಾದ ಪೆಪ್ಪರ್ ರೈಸ್ ಸವಿಯಲು ಸಿದ್ಧವಾಗುತ್ತದೆ.
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications