ಅಯೋಧ್ಯೆ ರಾಮಮಂದಿರ ಕುಂಬಾಭಿಷೇಕದ ವೇಳೆ ಮನೆಯಲ್ಲಿ ಪೂಜೆ ಮಾಡಿದರೆ ಇಷ್ಟೆಲ್ಲಾ ಪ್ರಯೋಜನ...
ಅಯೋಧ್ಯೆಯಲ್ಲಿಂದು ರಾಮಮಂದಿರದಲ್ಲಿ ಕುಂಭಾಭಿಷೇಕ ನಡೆಯಲಿದೆ. ಪ್ರಧಾನಿ ಮೋದಿ ಸೇರಿದಂತೆ ಹಲವರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇದಕ್ಕಾಗಿ ಅಯೋಧ್ಯೆಯಲ್ಲಿ ಭಾರೀ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಜನವರಿ 18 ರಂದು ಅಯೋಧ್ಯೆಯ ಗರ್ಭಗುಡಿಯಲ್ಲಿ 51 ಇಂಚಿನ ಶ್ರೀರಾಮನ ವಿಗ್ರಹವನ್ನು ಇರಿಸಲಾಯಿತು. ಈ ರಾಮನ ಪ್ರತಿಮೆಯನ್ನು ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ಕುಂಭಾಭಿಷೇಕದ ವೇಳೆ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ.

ಇಂದು ನಡೆಯಲಿರುವ ಅಯೋಧ್ಯೆ ರಾಮ ಮಂದಿರ ಕುಂಬಾಭಿಷೇಕದಲ್ಲಿ ಸಾಕಷ್ಟು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಪ್ರಮುಖ ನಾಯಕರು ಪಾಲ್ಗೊಳ್ಳುವುದರಿಂದ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಇದರಿಂದಾಗಿ ಅಯೋಧ್ಯೆ ರಾಮಮಂದಿರ ಕುಂಬಾಭಿಷೇಕದಲ್ಲಿ ಸಾರ್ವಜನಿಕರು ಭಾಗವಹಿಸುವಂತಿಲ್ಲ.
ರಾಮಮಂದಿರ ಕುಂಬಾಭಿಷೇಕಕ್ಕೆ ಹಾಜರಾಗಲು ಸಾಧ್ಯವಾಗದವರು ಮನೆಯಲ್ಲಿ ರಾಮನಿಗೆ ಹೇಗೆ ಪೂಜೆ ಮಾಡಬೇಕು ಅನ್ನೋದನ್ನು ತಿಳಿಯಬಹುದು. ಈ ವಿಧಾನವನ್ನು ಅನುಸರಿಸಿ ನೀವು ಮನೆಯಲ್ಲಿಯೇ ಪೂಜೆಯನ್ನು ಮಾಡಬಹುದು. ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಮಾತ್ರವಲ್ಲದೆ ಶ್ರೀರಾಮನ ಆಶೀರ್ವಾದವನ್ನು ಪಡೆಯಬಹುದು.

ಮನೆಯಲ್ಲಿ ಶ್ರೀರಾಮನ ಪೂಜೆ:
ರಾಮನ ವಿಗ್ರಹ ಪ್ರತಿಷ್ಠಾ ಸಮಾರಂಭ ಜನವರಿ 22, 2024 ರಂದು ಮಧ್ಯಾಹ್ನ 12:20 ರಿಂದ 12:45 ರವರೆಗೆ ನಡೆಯಲಿದೆ. ನೀವು ಮನೆಯಲ್ಲಿ 'ಓಂ ರಾಮ್ ರಾಮಾಯ ನಾಮ'ವನ್ನು ಬರೆಯಬೇಕು. ಮನೆಯಲ್ಲಿ ಓಂ ರಾಮ್ ರಾಮಾಯ ನಾಮವನ್ನು ಪಠಿಸಬೇಕು. ರಾಮಮಂದಿರ ಕುಂಭಾಭಿಷೇಕದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದವರು ಮನೆಯಲ್ಲಿಯೇ ಪೂಜೆಯನ್ನು ಮಾಡಬಹುದು.
*ಮೊದಲು ನಿಮ್ಮ ಮನೆಯ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿ.
*ಸ್ನಾನ ಮಾಡಿ ಮತ್ತು ನಿಮ್ಮ ಹಣೆಯ ಮೇಲೆ ಶ್ರೀಗಂಧವನ್ನು ಲೇಪಿಸಿ.
*ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ ಮತ್ತು ಪೂಜೆಯನ್ನು ಆರಂಭಿಸಿ
*ರಾಮನ ವಿಗ್ರಹದ ಕೆಳಗಿನ ಪೂಜಾ ಕೋಣೆಯಲ್ಲಿ ಸಣ್ಣ ರಂಗೋಲಿ ಅನ್ನು ಹಾಕಿ ಮತ್ತು ಅದನ್ನು ಅಲಂಕರಿಸಿ.
*ಪವಿತ್ರ ಓಂ ಚಿಹ್ನೆಯನ್ನು ಹಾಕಿ. ಇದು ನಿಮ್ಮ ಪೂಜಾ ಕೊಠಡಿಯನ್ನು ಪವಿತ್ರಗೊಳಿಸುತ್ತದೆ. ಪೂಜಾ ಕೋಣೆಯಲ್ಲಿ ಮೇಜು ಇಟ್ಟು ಸ್ವಚ್ಛವಾದ ಕೆಂಪು ಬಟ್ಟೆಯಿಂದ ಸುತ್ತಿ.. ಹಾಗೆಯೇ ಒಂದು ಹಿಡಿ ಬೆಲ್ಲದ ಅನ್ನವನ್ನು ಅಲ್ಲಿ ಇಟ್ಟು ಈ ಭತ್ತದ ಹಾಸಿನ ಮೇಲೆ ಹೊಳೆಯುವ ತಾಮ್ರದ ಕಲಶವನ್ನು ಇಡಿ.
*ಕಲಶವನ್ನು ಶ್ರೀಗಂಧ ಮತ್ತು ಕುಂಕುಮದಿಂದ ಅಲಂಕರಿಸಿ. ನಂತರ ತೆಂಗಿನಕಾಯಿಯನ್ನು ಅದರ ಮೇಲೆ ಇರಿಸಿ. ಅಲ್ಲಿ ಕೆಲವು ಹಣ್ಣುಗಳನ್ನು ಇಡಿ. ಇದರ ನಂತರ ನೀವು ನಿಮ್ಮ ಪೂಜೆಯನ್ನು ಪ್ರಾರಂಭಿಸಬಹುದು. "ಓಂ ರಾಮ್ ರಾಮಾಯ ನಮ" ಎಂಬ ರಾಮ ಮಂತ್ರವನ್ನು 108 ಬಾರಿ ಜಪಿಸಿ.
* ಮನೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸಿ ಅದಕ್ಕೆ ಹಾಲು, ಜೇನುತುಪ್ಪ ಮತ್ತು ಇತರ ಪವಿತ್ರ ನೈವೇದ್ಯಗಳಿಂದ ಅಭಿಷೇಕ ಮಾಡಿ. ಇದು ವಿಗ್ರಹವನ್ನು ಮಾತ್ರವಲ್ಲದೆ ವಾತಾವರಣವನ್ನೂ ಶುದ್ಧಗೊಳಿಸುತ್ತದೆ ಎಂದು ನಂಬಲಾಗಿದೆ.
ನೀವು ಈ ಮಂತ್ರವನ್ನು ಜಪಿಸುತ್ತಿರುವಾಗ ಶ್ರೀರಾಮನ ಉಜ್ವಲ ರೂಪವನ್ನು ಮನದಲ್ಲಿ ದೃಶ್ಯೀಕರಿಸಿ. ನಿಮ್ಮನ್ನು ದೇವರೊಂದಿಗೆ ಒಂದಾಗಿ ಭಾವಿಸಿ. ಆತನ ಆಶೀರ್ವಾದಗಳು ನಿಮ್ಮ ದಾರಿಗೆ ಬರುತ್ತವೆ ಎಂದು ಯೋಚಿಸಿ. ಈ ವಿಧಾನವನ್ನು ಅನುಸರಿಸಿ ಪೂಜೆಗಳನ್ನು ಮಾಡಿದರೆ ಕೋಟಿಗಟ್ಟಲೆ ಲಾಭವಾಗುತ್ತದೆ.

ಏನೆಲ್ಲಾ ಪ್ರಯೋಜನಗಳು?
* ಅಯೋಧ್ಯೆಗೆ ಭೇಟಿ ನೀಡಿದ ಸಂತೃಪ್ತಿ ನಿಮಗಾಗುವುದು.
* ಅಯೋಧ್ಯೆ ರಾಮನ ಮೂರ್ತಿ ಪೂಜೆಯಷ್ಟೇ ಖುಷಿ ನಿಮಗೆ ಸಿಗುವುದು
* ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ನೀವು ಪಾಲ್ಗೊಂಡಂತಾಗುತ್ತದೆ.
* ಶ್ರೀರಾಮನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಹನುಮನ ಆಶೀರ್ವಾದವೂ ಲಭಿಸುವುದು
* ಶ್ರೀರಾಮನ ಕಥೆಯನ್ನು ಓದಿ ಅದು ಕೂಡ ನಿಮಗೆ ತಿಳಿದಂತಾಗುತ್ತದೆ
* ಮನೆಯಲ್ಲಿ ಶಾಂತಿ, ನೆಮ್ಮದಿ, ಸಂತೋಷವನ್ನು ಪಡೆಯಬಹುದು
* ಮನೆಯಲ್ಲಿ ರಾಮನ ಪೂಜೆ ಮಾಡುವುದರಿಂದ ಆರ್ಥಿಕವಾಗಿ ನೀವು ಸದೃಢರಾಗಿರುವಿದಿ. ಜೊತೆಗೆ ಸಮಸ್ಯೆಗಳು ದೂರವಾಗುತ್ತವೆ.
* ಒಳ್ಳೆ ಕಾರ್ಯಗಳನ್ನು ಮಾಡಿ ಈ ದಿನ ದಾನ ಧರ್ಮವನ್ನು ಮಾಡಿದ ಪುಣ್ಯ ನಿಮಗೆ ಸಿಗಲಿದೆ.
*ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲೂ ಆಶ್ರೀರಾಮನ ದರ್ಶನದೊಂದಿಗೆ ಜೀವನದ ಸಂಕಷ್ಠಗಳಿಂದ ಭಕ್ತರು ಮುಕ್ತಿ ಪಡೆಯಬಹುದು.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications