ಗ್ರೀನ್ ಟೀ vs ಬ್ಲಾಕ್ ಟೀ: ಆರೋಗ್ಯಕ್ಕೆ ಯಾವುದು ಬೆಸ್ಟ್? ಗೊಂದಲ ಬೇಡ, ತಜ್ಞರ ಉತ್ತರ ಇಲ್ಲಿದೆ
ಇಂದಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಮೊದಲು ಬೇಡುವುದೆ ಗಿಡಮೂಲಿಕೆ ಚಹಾಗಳು. ಅದರಲ್ಲೂ ವಿಶೇಷವಾಗಿ 'ಗ್ರೀನ್ ಟೀ' ಮತ್ತು 'ಬ್ಲಾಕ್ ಟೀ' ನಡುವೆ ಯಾವುದು ಉತ್ತಮ ಎಂಬ ದೊಡ್ಡ ಮಟ್ಟದ ಚರ್ಚೆ ಮತ್ತು ಗೊಂದಲಲ್ಲಿದೆ. ಕೆಲವರು ಗ್ರೀನ್ ಟೀ ಕುಡಿಯಿರಿ ಎಂದರೆ ಇನ್ನು ಕೆಲವರು ಬ್ಲಾಕ್ ಟೀ ಆರೋಗ್ಯಕ್ಕೆ ರಾಮಬಾಣ ಎನ್ನುತ್ತಾರೆ. ಹಾಗಾದರೆ ಈ ಎರಡರಲ್ಲಿ ಯಾವುದು ನಿಜಕ್ಕೂ ಒಳ್ಳೆಯದು? ತಜ್ಞರು ಏನು ಹೇಳುತ್ತಾರೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಒಂದೇ ಗಿಡ, ಬೇರೆ ಬೇರೆ ರೂಪ!
ಗ್ರೀನ್ ಟೀ ಮತ್ತು ಬ್ಲಾಕ್ ಟೀ ಇವೆರಡನ್ನೂ 'ಕ್ಯಾಮೆಲಿಯಾ ಸಿನೆನ್ಸಿಸ್' ಎಂಬ ಒಂದೇ ಸಸ್ಯದಿಂದ ತಯಾರಿಸಲಾಗುತ್ತದೆ. ಆದರೆ ಇವುಗಳ ತಯಾರಿಕಾ ಪ್ರಕ್ರಿಯೆ ಮಾತ್ರ ವಿಭಿನ್ನ.
ಗ್ರೀನ್ ಟೀ: ಇವುಗಳನ್ನು ಅತಿ ಕಡಿಮೆ ಸಂಸ್ಕರಣೆಗೆ ಒಳಪಡಿಸಲಾಗುತ್ತದೆ. ಎಲೆಗಳನ್ನು ಹೆಚ್ಚು ಒಣಗಿಸದೆ ಇರುವುದರಿಂದ ಇವುಗಳಲ್ಲಿನ ಪೋಷಕಾಂಶಗಳು ಹಾಗೆಯೇ ಉಳಿಯುತ್ತವೆ.
ಬ್ಲಾಕ್ ಟೀ: ಈ ಚಹಾ ಎಲೆಗಳನ್ನು ಹೆಚ್ಚು ಸಂಸ್ಕರಣೆಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆಯಿಂದಾಗಿ ಎಲೆಗಳು ಕಪ್ಪಾಗುತ್ತವೆ ಮತ್ತು ರುಚಿಯಲ್ಲಿ ಬದಲಾವಣೆ ಕಂಡುಬರುತ್ತದೆ.

ಪೋಷಕಾಂಶಗಳ ಸಮರ: ಯಾವುದರಲ್ಲಿ ಏನಿದೆ?
ಈ ಎರಡು ಪಾನೀಯಗಳು ದೇಹಕ್ಕೆ ಒಂದೇ ರೀತಿಯ ಲಾಭಗಳನ್ನು ನೀಡಿದರೂ, ಅವುಗಳ ಗುಣಲಕ್ಷಣಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ.
ಕೆಫೀನ್ ಅಂಶ: ಗ್ರೀನ್ ಟೀ ಸೇವನೆಯಿಂದ ದೇಹಕ್ಕೆ ಕಡಿಮೆ ಪ್ರಮಾಣದ ಕೆಫೀನ್ ಸಿಗುತ್ತದೆ. ಆದರೆ ಬ್ಲಾಕ್ ಟೀಯಲ್ಲಿ ಕೆಫೀನ್ ಪ್ರಮಾಣ ತುಸು ಅಧಿಕವಾಗಿರುತ್ತದೆ.
ರುಚಿ: ಗ್ರೀನ್ ಟೀ ಸ್ವಲ್ಪ ಕಹಿ ಅಥವಾ ಒಗರಾಗಿದ್ದರೆ, ಬ್ಲಾಕ್ ಟೀ ಸ್ವಲ್ಪ ಹುಳಿ ಮಿಶ್ರಿತ ರುಚಿಯನ್ನು ಹೊಂದಿರುತ್ತದೆ.
ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ 'ಗ್ರೀನ್ ಟೀ' ಮುಂಚೂಣಿ
ಗ್ರೀನ್ ಟೀಯಲ್ಲಿ 'EGCG' (Epigallocatechin Gallate) ಎಂಬ ಶಕ್ತಿಶಾಲಿ ಆಂಟಿ-ಆಕ್ಸಿಡೆಂಟ್ ಇರುತ್ತದೆ. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವುದಲ್ಲದೆ ಕ್ಯಾನ್ಸರ್ ಕಣಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವಾಗಿ ಸ್ತನ ಕ್ಯಾನ್ಸರ್, ಪ್ರೊಸ್ಟೇಟ್ ಮತ್ತು ಕೋಲನ್ ಕ್ಯಾನ್ಸರ್ ಬರದಂತೆ ತಡೆಯಲು ಗ್ರೀನ್ ಟೀ ಸಹಕಾರಿ. ಬ್ಲಾಕ್ ಟೀ ಸಂಸ್ಕರಣೆ ವೇಳೆ ಈ EGCG ಪ್ರಮಾಣ ಕಡಿಮೆಯಾಗುವುದರಿಂದ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಬ್ಲಾಕ್ ಟೀಗಿಂತ ಗ್ರೀನ್ ಟೀ ಹೆಚ್ಚು ಪರಿಣಾಮಕಾರಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಆರೋಗ್ಯಕ್ಕಾಗುವ ಪ್ರಯೋಜನಗಳು ಮತ್ತು ಮುನ್ನೆಚ್ಚರಿಕೆ
ಖಾಲಿ ಹೊಟ್ಟೆಯಲ್ಲಿ ಕುಡಿಯುವುದು: ಅತಿಯಾದ ಗ್ರೀನ್ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಕೆಲವರಿಗೆ ಅಸಿಡಿಟಿ ಆಗಬಹುದು. ಊಟವಾದ 1 ಗಂಟೆಯ ನಂತರ ಗ್ರೀನ್ ಟೀ ಕುಡಿಯುವುದು ಉತ್ತಮ.
ಸಕ್ಕರೆ ಬಳಸಬೇಡಿ: ಇವೆರಡರ ಪೂರ್ಣ ಲಾಭ ಪಡೆಯಲು ಸಕ್ಕರೆ ಅಥವಾ ಹಾಲು ಸೇರಿಸದೆ ಕುಡಿಯಿರಿ. ರುಚಿಗಾಗಿ ಸ್ವಲ್ಪ ನಿಂಬೆ ರಸ ಅಥವಾ ಜೇನುತುಪ್ಪ ಸೇರಿಸಬಹುದು.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications