ವೃತಾಚರಣೆ ವೇಳೆ ಈ ಉಪ್ಪನ್ನು ಸೇವಿಸಿದರೆ ಮಾತ್ರ ಪೂಜಾ ಫಲ ಸಿಗುವುದು! ಈ ಗ್ರಹದೊಂದಿಗೆ ಇದೆ ಆಳವಾದ ಸಂಬಂಧ
ನಮ್ಮಲ್ಲಿ ಅನೇಕ ಸಂದರ್ಭಗಳಲ್ಲಿ ವೃತ ಆಚರಿಸಲಾಗುತ್ತದೆ. ಅದರಲ್ಲಿಯೂ ಮಹಿಳೆಯರು ಆಚರಿಸುವ ವೃತಕ್ಕೆ ಲೆಕ್ಕವೇ ಇರುವುದಿಲ್ಲ. ಆದರೆ ಸುಮ್ಮನೆ ವೃತಾಚಾರಣೆ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸರಿಯಾದ ರೀತಿ ನೀತಿಗಳೊಂದಿಗೆ ವೃತ ಆಚರಿಸಿದರೆ ಅದಕ್ಕೆ ತಕ್ಕ ಫಲವೂ ಸಿಗುತ್ತದೆ.
ಉಪವಾಸಕ್ಕೆ ಸಂಬಂಧಿಸಿದ ಹಲವು ನಿಯಮಗಳಿವೆ. ಅವುಗಳನ್ನು ಚಾಚೂ ತಪ್ಪದೆ ಪಾಲಿಸಿದರೆ, ಮಾತ್ರ ವೃತ ಪರಿಪೂರ್ಣವಾಗುವುದು. ವೃತದ ಸಂಪೂರ್ಣ ಫಲ ಸಿಗುವುದು. ಕೆಲವು ಉಪವಾಸಗಳಲ್ಲಿ ಬರೀ ಹಣ್ಣುಗಳನ್ನು ಮಾತ್ರ ತಿನ್ನಲಾಗುತ್ತದೆ. ಕೆಲವು ವೃತದಲ್ಲಿ ದಿನದ ಒಂದು ಹೊತ್ತು ಅಂದರೆ ಒಪ್ಪತ್ತು ಮಾತ್ರ ಆಹಾರ ಸೇವಿಸಲಾಗುತ್ತದೆ. ಕೆಲವು ಉಪವಾಸಗಳಲ್ಲಿ ನಿಗದಿತ ಅವಧಿಯವರೆಗೆ ತಿನ್ನಬಾರದು ಅಥವಾ ಏನನ್ನೂ ಕುಡಿಯಬಾರದು ಎನ್ನುವ ನಿಯಮವಿರುತ್ತದೆ. ಅದೇ ರೀತಿ, ಉಪವಾಸದ ಸಮಯದಲ್ಲಿ ಉಪವಾಸ ಆಹಾರ ಸೇವಿಸುವಾಗ ಬಿಳಿ ಉಪ್ಪನ್ನು ಸೇರಿಸಲೇಬಾರದು ಎನ್ನುವ ನಿಯಮವಿದೆ. ಅದರ ಬದಲಿಗೆ ಇಲ್ಲಿ ಕಲ್ಲು ಉಪ್ಪನ್ನು ಅಥವಾ ಸೇಂಧಾ ಉಪ್ಪನ್ನು ಸೇರಿಸಬೇಕು.

ಯಾವುದಿದು ಸೇಂಧಾ ಉಪ್ಪು:
ಸೆಂಧಾ ಉಪ್ಪು ಅಂದರೆ ಕಲ್ಲು ಉಪ್ಪು ಅಥವಾ ಹಿಮಾಲಯನ್ ಪಿಂಕ್ ಸಾಲ್ಟ್. ಇದು ಸಂಸ್ಕರಿಸದ ನೈಸರ್ಗಿಕ ಖನಿಜ ಉಪ್ಪಾಗಿದೆ. ಇದು ಯಾವುದೇ ಕೃತಕ ರಾಸಾಯನಿಕಗಳನ್ನು ಹೊಂದಿರದ ಅತ್ಯಂತ ಶುದ್ಧವಾದ ಉಪ್ಪಿನ ರೂಪವಾಗಿದೆ. ಸಾಮಾನ್ಯ ಉಪ್ಪಿಗಿಂತ ಭಿನ್ನವಾಗಿ, ಇದು ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಸುಮಾರು ೮೪ ಪ್ರಮುಖ ಖನಿಜಗಳನ್ನು ಹೊಂದಿದೆ.
ಇದೇ ಉಪ್ಪು ಸೇವಿಸಬೇಕು:
ಉಪವಾಸದ ಸಮಯದಲ್ಲಿ, ಸಾಮಾನ್ಯ ಉಪ್ಪಿನ ಬದಲು ಈ ಕಲ್ಲು ಉಪ್ಪನ್ನು ಮಾತ್ರ ಸೇವಿಸುವುದಕ್ಕೆ ಅವಕಾಶವಿದೆ. ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಕಲ್ಲು ಉಪ್ಪನ್ನು ಬಳಸುವುದು ಬಹಳ ಮಹತ್ವದ್ದಾಗಿದೆ. ಯಾಕೆಂದರೆ ಈ ಕಲ್ಲು ಉಪ್ಪಿನೊಂದಿಗೆ ಒಂದು ಗ್ರಹ ಸಂಬಂಧ ಹೊಂದಿದೆ ಎನ್ನಲಾಗಿದೆ.
ಉಪವಾಸದ ಸಮಯದಲ್ಲಿ ಕಲ್ಲು ಉಪ್ಪಿನ ಮಹತ್ವ:
ಕಲ್ಲು ಉಪ್ಪು ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ಉಪ್ಪನ್ನು ಬಳಸುವುದರಿಂದ ಗ್ರಹಗಳ ನಕಾರಾತ್ಮಕ ಪ್ರಭಾವಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಪೂಜೆಗಳ ಸಮಯದಲ್ಲಿ ಇದು ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜ್ಯೋತಿಷ್ಯದ ಪ್ರಕಾರ, ಕಲ್ಲು ಉಪ್ಪು ಉಪವಾಸದಿಂದ ಬಿಡುಗಡೆಯಾಗುವ ಶಕ್ತಿಯನ್ನು ಸಮತೋಲನಗೊಳಿಸುತ್ತದೆ ಮತ್ತು ಭೂಮಿಯ ಅಂಶದೊಂದಿಗೆ ಸಂಬಂಧ ಹೊಂದಿದೆ.
ಕಲ್ಲು ಉಪ್ಪು ಯಾವ ಗ್ರಹಕ್ಕೆ ಸಂಬಂಧಿಸಿದೆ?:
ಜ್ಯೋತಿಷ್ಯದ ಪ್ರಕಾರ, ಕಲ್ಲುಪ್ಪು ಚಂದ್ರ ಮತ್ತು ಶುಕ್ರನೊಂದಿಗೆ ಸಂಬಂಧ ಹೊಂದಿದೆ. ಚಂದ್ರನು ಮನಸ್ಸನ್ನು ಪ್ರತಿನಿಧಿಸಿದರೆ, ಶುಕ್ರನು ಸಂತೋಷ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತಾನೆ. ಉಪವಾಸದ ಸಮಯದಲ್ಲಿ ಕಲ್ಲುಪ್ಪು ಸೇವಿಸುವುದರಿಂದ ಜಾತಕದಲ್ಲಿ ಚಂದ್ರನು ಬಲಗೊಳ್ಳುತ್ತಾನೆ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸುತ್ತಾನೆ. ಇದು ಚಡಪಡಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಸುಧಾರಿಸುತ್ತದೆ. ಶುಕ್ರನು ಬಲಗೊಳ್ಳುತ್ತಾನೆ, ಇದು ಸಂಪತ್ತನ್ನು ಹೆಚ್ಚಿಸುತ್ತದೆ.
ಉಪವಾಸದ ಸಮಯದಲ್ಲಿ ಕಲ್ಲು ಉಪ್ಪಿನ ಧಾರ್ಮಿಕ ಮಹತ್ವ:
ಕಲ್ಲುಪ್ಪು ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ನಿಯಮಿತವಾಗಿ ಉಪ್ಪನ್ನು ವಿವಿಧ ಪ್ರಕ್ರಿಯೆಗಳ ಮೂಲಕ ತಯಾರಿಸಲಾಗುತ್ತದೆ. ಹಾಗಾಗಿ ಅದನ್ನು ಶುದ್ಧ ಎಂದು ಪರಿಗಣಿಸಲಾಗುವುದಿಲ್ಲ. ಅದಕ್ಕಾಗಿಯೇ ಕಲ್ಲು ಉಪ್ಪನ್ನು ಉಪವಾಸ ಮತ್ತು ಪೂಜೆಗೆ ಶಿಫಾರಸು ಮಾಡಲಾಗುತ್ತದೆ. ಇದರ ಸೇವನೆಯು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಭಕ್ತಿ ಧ್ಯಾನವನ್ನು ಪ್ರೋತ್ಸಾಹಿಸುತ್ತದೆ. ಕಲ್ಲು ಉಪ್ಪು ಸಾತ್ವಿಕ ಆಹಾರದ ಭಾಗವಾಗಿದೆ.
ಉಪವಾಸದ ಸಮಯದಲ್ಲಿ ಕಲ್ಲು ಉಪ್ಪಿನೊಂದಿಗೆ ಸಂಬಂಧಿಸಿದ ಧಾರ್ಮಿಕ ನಂಬಿಕೆಗಳು :
ಪುರಾಣಗಳು ಮತ್ತು ಧಾರ್ಮಿಕ ಸಂಪ್ರದಾಯಗಳು ಉಪವಾಸ ಆಹಾರಗಳು ಸರಳ ಮತ್ತು ನೈಸರ್ಗಿಕವಾಗಿರಬೇಕು ಎಂದು ಶಿಫಾರಸು ಮಾಡುತ್ತವೆ. ಕಲ್ಲು ಉಪ್ಪು ನೈಸರ್ಗಿಕವಾಗಿ ಕಲ್ಲುಗಳಿಂದ ಬರುತ್ತದೆ.ಅದಕ್ಕಾಗಿಯೇ ಇದನ್ನು ಶುದ್ಧವೆಂದು ಪರಿಗಣಿಸಲಾಗುತ್ತದೆ. ಕಲ್ಲು ಉಪ್ಪನ್ನು ಏಕಾದಶಿ, ನವರಾತ್ರಿ, ಮಹಾಶಿವರಾತ್ರಿ, ಸೋಮವಾರಗಳು ಮತ್ತು ಇನ್ನೂ ಹೆಚ್ಚಿನ ಉಪವಾಸಗಳಲ್ಲಿ ಬಳಸಲಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications