Inauspicious Plants: ಈ ಗಿಡಗಳನ್ನು ಯಾರಿಗೂ ಉಡುಗೊರೆಯಾಗಿ ನೀಡಲೇಬೇಡಿ.. ಹೆಗಲೇರುತ್ತೆ ಶನಿ..
ಗಿಡಗಳನ್ನು ಕೊಡುವುದು ಒಳ್ಳೆಯ ವಿಷವಾದರೂ ಇಂಥದ್ದೇ ಗಿಡವನ್ನು ಕೊಡಬೇಕು ಎಂಬ ನಂಬಿಕೆ ಇದೆ. ಅನೇಕ ಜನರು ಮಾರುಕಟ್ಟೆಗೆ ಹೋಗಿ ಯಾವ ಸಸ್ಯವು ಸುಂದರವಾಗಿದೆಯೋ ಅದನ್ನು ಖರೀದಿಸಿ ತಮ್ಮ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡುತ್ತಾರೆ.. ಆದರೆ ಈ ರೀತಿ ಮಾಡುವುದು ತುಂಬಾ ತಪ್ಪು.
ಇದರಿಂದ ನಿಮ್ಮ ಸಂಬಂಧಕ್ಕೆ ತೊಂದರೆಯಾಗುತ್ತದೆ ಎಂದು ಜ್ಯೋತಿಷಿಗಳು ಎಚ್ಚರಿಕೆ ನೀಡಿದ್ದಾರೆ. ನೀವು ಯಾರಿಗಾದರೂ ಒಂದು ಗಿಡವನ್ನು ಉಡುಗೊರೆಯಾಗಿ ನೀಡಲು ಬಯಸಿದರೆ ಮನಿ ಪ್ಲಾಂಟ್ ಅಥವಾ ಶೋ ಪ್ಲಾಂಟ್ ಅನ್ನು ನೀಡಬಹುದು. ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಅಲ್ಲದೆ, ಈ ಸಸ್ಯವನ್ನು ಉಡುಗೊರೆಯಾಗಿ ನೀಡುವುದರಿಂದ ಧನಾತ್ಮಕ ಪರಿಣಾಮ ಬೀರುತ್ತದೆ. ಉಡುಗೊರೆ ನೀಡುವವರು ಮತ್ತು ಸ್ವೀಕರಿಸುವವರು ಇಬ್ಬರಿಗೂ ಒಳ್ಳೆಯದಾಗುತ್ತದೆ.

ಇದಲ್ಲದೆ, ಬಿಳಿ ಹೂವುಗಳನ್ನು ಹೊಂದಿರುವ ಸಸ್ಯಗಳನ್ನು ಸಹ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಮತ್ತು ನಿಮ್ಮ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ. ಈ ಸಸ್ಯಗಳು ಹೊರತಾಗಿ ಕೆಲ ಸಸ್ಯಗಳನ್ನು ಯಾವುದೇ ಕಾರಣಕ್ಕೂ ನೀಡುವುದು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ. ಇವುಗಳನ್ನು ನೀಡುವುದರಿಂದ ಪಡೆಯುವುದರಿಂದ ನಕರಾತ್ಮಕ ಶಕ್ತಿ ಕಾಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಜ್ಯೋತಿಷಿಗಳು ನೀವು ಯಾರಿಗಾದರೂ ಸಸ್ಯಗಳನ್ನು ನೀಡುವಾಗ ವಿಶೇಷವಾಗಿ ಮುಳ್ಳಿನ ಗಿಡವನ್ನು ಉಡುಗೊರೆಯಾಗಿ ನೀಡಬಾರದು ಎಂದು ಹೇಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಗುಲಾಬಿ ಅಥವಾ ಕಳ್ಳಿ ಗಿಡವನ್ನು ನೀಡದಿರಲು ಸೂಚಿಸಲಾಗುತ್ತದೆ. ಇವುಗಳನ್ನು ನೀಡುವುದರಿಂದ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.

ಇದಲ್ಲದೆ ಜ್ಯೋತಿಷಿಗಳ ಪ್ರಕಾರ ಈ ಗಿಡಗಳನ್ನು ಕೊಡುವುದು ಅಶುಭ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಏಳಿಗೆ ನಿಮಗೆ ಬಹಳ ಮುಖ್ಯವಾಗಿದ್ದರೆ, ಅವರಿಗೆ ತುಳಸಿ ಗಿಡವನ್ನು ಉಡುಗೊರೆಯಾಗಿ ನೀಡಿ. ತುಳಸಿಯಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ ಆ ಗಿಡವನ್ನು ಉಡುಗೊರೆಯಾಗಿ ನೀಡಿದರೆ ಇಬ್ಬರ ನಡುವೆ ಬಾಂಧವ್ಯ ಮತ್ತು ಮಾಧುರ್ಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
ಅಲ್ಲದೆ ತುಳಸಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ತುಳಸಿಯ ಅತ್ಯಂತ ಸಾಮಾನ್ಯ ವಿಧವೆಂದರೆ ಬಿಳಿ ತುಳಸಿ. ಇದಲ್ಲದೆ ತುಳಸಿಯಲ್ಲಿ ಕಪ್ಪು ತುಳಸಿ, ಕೃಷ್ಣ ತುಳಸಿ, ರಾಮ ತುಳಸಿ, ಸೆಂತುಳಸಿ, ಶಿವ ತುಳಸಿ, ಸಣ್ಣ ತುಳಸಿ, ಕಲ್ತುಳಸಿ, ನಲ್ತುಳಸಿ, ನೀಲತುಳಸಿ, ಮುಳ್ ತುಳಸಿ, ಕರ್ಪೂರ ತುಳಸಿ ಹೀಗೆ ಹೆಚ್ಚು ತಳಿಗಳಿವೆ.

ನಾವು ಅಂದುಕೊಂಡಂತೆ ತುಳಸಿ ಕೇವಲ ಅಶುಭವಲ್ಲ, ಪರಿಸರಕ್ಕೆ ಅದರ ಕೊಡುಗೆ ಅಪಾರವಾಗಿದೆ. ಇದು ಗಾಳಿಯಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮತ್ತು ಆಮ್ಲಜನಕಕ್ಕೆ ಹೊರಹಾಕುವ ಅದ್ಭುತ ಕೆಲಸವನ್ನು ಮಾಡುತ್ತದೆ.
ತುಳಸಿ ಗಿಡವನ್ನು ಪ್ರತಿನಿತ್ಯ ತಿಂದರೆ ಕರುಳು, ಹೊಟ್ಟೆ, ಬಾಯಿಗೆ ಸಂಬಂಧಿಸಿದ ಸಮಸ್ಯೆಗಳು ಜೀವನದುದ್ದಕ್ಕೂ ಬರುವುದಿಲ್ಲ. ತುಳಸಿ ಎಲೆಗಳಿಂದ ಜೀರ್ಣ ಶಕ್ತಿ ಮತ್ತು ನವ ಚೈತನ್ಯವನ್ನು ಪಡೆಯಬಹುದು. ಆದ್ದರಿಂದ ತುಳಸಿ ಗಿಡವನ್ನು ಯಾರಿಗಾದರೂ ಉರುಗೊರೆಯಾಗಿ ನೀಡಬಹುದು.












Click it and Unblock the Notifications