Lizard: ಹಲ್ಲಿ ನೋಡಿದರೆ ಸಂಪತ್ತಿನ ದೇವರ ಆಶೀರ್ವಾದ ಪಡೆದಂತೆ.... ನಿಮಗಿದು ಗೊತ್ತಾ?
ಮನೆ ಅಂದ್ಮೆಲೆ ಅಲ್ಲಿ ಹಲ್ಲಿ ಖಂಡಿತಾ ಇದ್ದೇ ಇರುತ್ತದೆ. ಹಲ್ಲಿ ಇಲ್ಲದ ಮನೆಗಳೇ ಇಲ್ಲವೆಂದು ಹೇಳಬಹುದು. ಆದರೆ ಕೆಲವರಿಗೆ ಹಲ್ಲಿಗಳಿರುವುದು ಇಷ್ಟವಾಗುವುದಿಲ್ಲ. ಅದನ್ನು ನೋಡಿದ ತಕ್ಷಣ ಬೆನ್ನಟ್ಟಿ ಹೊಡೆಯುತ್ತಾರೆ. ಆದರೆ ಮನೆಯಲ್ಲಿ ಹಲ್ಲಿ ಇರುವುದು ಶುಭವೋ ಅಶುಭವೋ? ಎನ್ನುವುದು ನಿಖರವಾಗಿ ತಿಳಿದಿಲ್ಲ. ಹಾಗಾದರೆ ಹಲ್ಲಿಗಳ ಬಗ್ಗೆ ಶಾಸ್ತ್ರಗಳು ಏನು ಹೇಳುತ್ತವೆ ಎಂದು ತಿಳಿಯೋಣ.
ಹಲ್ಲಿಗಳಿರುವ ಮನೆಗಳು ಅದೃಷ್ಟವನ್ನು ಹೆಚ್ಚಿಸುತ್ತವೆ ಎಂದು ಆಧ್ಯಾತ್ಮಿಕತೆ ಹೇಳುತ್ತದೆ. ಹೌದು ಶಾಸ್ತ್ರಗಳು ಹೇಳುವಂತೆ ಮನೆಯಲ್ಲಿ ಹಲ್ಲಿ ಇದ್ದರೆ ಅದೃಷ್ಟ... ಹಲ್ಲಿ ಇಲ್ಲದ ಮನೆಯಲ್ಲಿ ಶಾಂತಿ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಹಲ್ಲಿಗಳನ್ನು ದೈವಿಕವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅವುಗಳನ್ನು ಹೊಡೆಯಬಾರದು ಅಥವಾ ಕಿರುಕುಳ ಮಾಡಬಾರದು. ಹೀಗೆ ಮಾಡಿದರೆ ಪಾಪ ಬರುತ್ತದೆ ಎಂಬ ನಂಬಿಕೆ ಇದೆ.

ಹಲ್ಲಿಯ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?
ಮನೆಯಲ್ಲಿ ಜಿರಳೆ, ಜೀರುಂಡೆ, ಹಲ್ಲಿಗಳಿರುವುದು ತೀರಾ ಸಹಜ. ಆದರೆ ಕೆಲವರು ಅವುಗಳನ್ನು ಮನೆಯಲ್ಲಿರುವುದನ್ನು ನೋಡಲು ಇಷ್ಟಪಡುವುದಿಲ್ಲ. ಏಕೆಂದರೆ ಜಿರಳೆಗಳು ವಿವಿಧ ಸೋಂಕುಗಳಿಗೆ ಕಾರಣವಾಗಬಹುದು. ಹಲ್ಲಿಗಳು ಅಡುಗೆಯಲ್ಲಿ ಬೀಳುವ ಭೀತಿಯನ್ನು ಹುಟ್ಟಿಸುತ್ತವೆ. ಹೀಗಾಗಿ ಅದು ಮನೆಯಲ್ಲಿದ್ದರೆ ನಾವು ಅದನ್ನು ಹೊಡೆದು ಹೊರಗೆ ಓಡಿಸುವವರೆಗೂ ಮನೆಯೊಳಗೆ ಪ್ರವೇಶಿಸುವುದಿಲ್ಲ.
ಆದರೆ ಕೆಲವರು ಹಾಗಲ್ಲ. ಹಲ್ಲಿ ಏನು ಮಾಡುತ್ತದೆ? ಮನೆಯಲ್ಲಿರುವ ಕ್ರಿಮಿಕೀಟಗಳನ್ನು ತಿಂದು ಸುಮ್ಮನಾಗುತ್ತದೆ ಎಂದು ಸುಮ್ಮನಾಗುತ್ತಾರೆ. ಇವುಗಳು ಗೋಡೆಗಳು ಮತ್ತು ಮೂಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಯಾರಿಗೂ ತೊಂದರೆ ಕೊಡುವುದಿಲ್ಲ. ಜ್ಯೋತಿಷ್ಯದಲ್ಲಿ ಹಲ್ಲಿಯ ಬಗ್ಗೆ ಬಹಳಷ್ಟು ಹೇಳಲಾಗಿದೆ. ಅಂದಹಾಗೆ ಹಲ್ಲಿಯನ್ನು ನೋಡುವುದನ್ನು ಕೆಲವರು ಮಂಗಳಕರವೆಂದು ಪರಿಗಣಿಸುತ್ತಾರೆ.
ಹಲ್ಲಿಯನ್ನು ನೋಡುವುದು ಶುಭವೇ?
ಹೆಚ್ಚಿನ ಜನರು ಹಲ್ಲಿಗಳಿಗೆ ಹೆದರುತ್ತಾರೆ. ಅದನ್ನು ಮನೆಯಿಂದ ಓಡಿಸಲು ಪ್ರಯತ್ನಿಸುತ್ತಾರೆ. ಆದರೆ ಜ್ಯೋತಿಷ್ಯದ ನಂಬಿಕೆಯ ಪ್ರಕಾರ, ಹಲ್ಲಿಯನ್ನು ಹಣದ ವಿಷಯಗಳಲ್ಲಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂದರೆ, ಹಲ್ಲಿಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ.

ಬೆಳ್ಳಿ ಹಲ್ಲಿಯ ವಿಗ್ರಹದ ಪ್ರಯೋಜನಗಳು
ಕೆಲವು ರಾಜ್ಯಗಳಲ್ಲಿ ಹೊಸ ಮನೆಯ ವಾಸ್ತು ಪೂಜೆಯನ್ನು ಬೆಳ್ಳಿ ಹಲ್ಲಿಯ ವಿಗ್ರಹಗಳನ್ನು ಬಳಸಲಾಗುತ್ತದೆ. ಏಕೆಂದರೆ ಹಲ್ಲಿಯು ಮನೆಯ ಸಂತೋಷ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ.
ವಾಸ್ತು ಅರ್ಥವೇನು?
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಪೂಜಾ ಕೊಠಡಿ ಮತ್ತು ಸ್ವಾಗತ ಕೊಠಡಿಯಲ್ಲಿ ಹಲ್ಲಿಗಳು ಕಾಣಿಸಿಕೊಂಡರೆ ಅದು ತುಂಬಾ ಮಂಗಳಕರವಾಗಿದೆ. ಇದರರ್ಥ ನೀವು ಮುಂದಿನ ದಿನಗಳಲ್ಲಿ ಹೆಚ್ಚಿನ ಹಣವನ್ನು ಪಡೆಯಲಿದ್ದೀರಿ. ದೀಪಾವಳಿಯಂದು ನಿಮ್ಮ ಮನೆಯಲ್ಲಿ ಹಲ್ಲಿ ಇದ್ದರೆ ವರ್ಷವಿಡೀ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಅಷ್ಟೇ ಅಲ್ಲ, ಇದು ನಿಮಗೆ ಅಪಾರ ಸಂತೋಷ ಮತ್ತು ಸಂಪತ್ತನ್ನು ತರುತ್ತದೆ.
3 ಹಲ್ಲಿಗಳನ್ನು ನೋಡುವವುದರ ಹಿಂದೆ ಅದೃಷ್ಟವಿದೆಯೇ?
ಮನೆಯಲ್ಲಿ 3 ಹಲ್ಲಿಗಳನ್ನು ಒಂದೇ ಸ್ಥಳದಲ್ಲಿ ನೋಡುವುದು ತುಂಬಾ ಅದೃಷ್ಟ. ಹೀಗಾಗಿ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ನೀವು ಹೊಸ ಮನೆಗೆ ಪ್ರವೇಶಿಸುವ ಸಮಯದಲ್ಲಿ ಹಲ್ಲಿಯನ್ನು ನೋಡಿದರೆ, ಅದು ತುಂಬಾ ಮಂಗಳಕರವೆಂದು ನಂಬಲಾಗಿದೆ.
ಮನೆಯ ಪೂಜಾ ಕೋಣೆಯಲ್ಲಿ ಹಲ್ಲಿ
ಮನೆಯ ಪೂಜಾ ಕೊಠಡಿಯಲ್ಲಿರುವ ಹಲ್ಲಿಯು ಅದೃಷ್ಟವನ್ನು ತರುತ್ತದೆ ಎಂದು ಪರಿಗಣಿಸಲಾಗುತ್ತದೆ. ಸಮೃದ್ಧಿ ಮತ್ತು ಸಂತೋಷಕ್ಕಾಗಿ ಮನೆಯಲ್ಲಿ ಪೂಜಾ ಕೋಣೆಯಲ್ಲಿ ಬೆಳ್ಳಿ ಹಲ್ಲಿಯನ್ನು ಇಡಬೇಕು. ಕೆಲವರ ಮನೆಗಳನ್ನು ನೋಡಿದರೆ ಪೂಜಾ ಕೋಣೆಯಲ್ಲಿ ಹಲ್ಲಿಗಳು ಸದಾ ಇರುತ್ತವೆ. ಅಂತಹ ಮನೆಗಳನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ.
ಮಲಗುವ ಕೋಣೆಯಲ್ಲಿ ಹಲ್ಲಿ
ನಿಮ್ಮ ಮಲಗುವ ಕೋಣೆಯಲ್ಲಿ ಹಲ್ಲಿಗಳಿದ್ದರೆ ನೀವು ಒಂಟಿಯಾಗುವಿರಿ ಎಂದರ್ಥ. ಒಂದು ಜೋಡಿ ಹಲ್ಲಿಗಳು ಒಳ್ಳೆಯದು ಎಂದು ಕೂಡ ಹೇಳಲಾಗುತ್ತದೆ. ಇದರಿಂದ ಪತಿ-ಪತ್ನಿಯರ ಜಗಳಗಳು ಬೇಗ ಬಗೆಹರಿಯುತ್ತವೆ. ಅಷ್ಟರಮಟ್ಟಿಗೆ ಇದು ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ. ಹೀಗಾಗಿ ಹಲ್ಲಿಯನ್ನು ಕಂಡರೆ ಅಸಹ್ಯ ಪಡದೆ ಅದು ತರುವ ಅದೃಷ್ಟದ ಬಗ್ಗೆ ಯೋಚಿಸಬಹುದು.
ಅಡುಗೆಮನೆಯಲ್ಲಿ ಹಲ್ಲಿ
ಅಡುಗೆ ಮನೆಯಲ್ಲಿ ಹಲ್ಲಿ ಇರುವುದು ಒಳ್ಳೆಯದಲ್ಲ. ಹಾಗಾಗಿ ಅಡುಗೆ ಮನೆ ಹಲ್ಲಿ ಮುಕ್ತವಾಗಿರುವಂತೆ ನೋಡಿಕೊಳ್ಳಿ. ಹಲ್ಲಿ ನಮ್ಮ ಮೇಲೆ ಬಿದ್ದರೆ, ಅದು ಬೀಳುವ ಸ್ಥಳವು ಪ್ರಯೋಜನಗಳನ್ನು ಹೊಂದಿದೆಯೇ ಎಂದು ತಿಳಿದಿರಬೇಕು. ಹಲ್ಲಿ ಬಿದ್ದ ಪರಿಣಾಮ ಭಯಪಡದೆ ಅಂದು ತುಳಸಿಯಿಂದ ವಿಷ್ಣುವಿಗೆ ಪೂಜೆ ಸಲ್ಲಿಸಿದರೆ ಪಾಪಗಳು ತೊಲಗಿ ಪುಣ್ಯ ಸಂಚಯವಾಗುತ್ತದೆ.
ದೇವಸ್ಥಾನದಲ್ಲಿ ಹಲ್ಲಿಯನ್ನು ನೋಡುವುದು ದೇವರ ದರ್ಶನಕ್ಕೆ ಸಮಾನ
ಅಷ್ಟೇ ಅಲ್ಲ, ಹಲ್ಲಿಯನ್ನು ನೋಡುವುದು ಪೂರ್ವಜರ ಆಶೀರ್ವಾದ ಪಡೆದಂತೆ ಎಂದು ನಂಬಲಾಗಿದೆ. ಅಂದರೆ ಪೂರ್ವಜರ ಆಶೀರ್ವಾದ ಮತ್ತು ಅನುಗ್ರಹ ನಮಗೆ ಸಿಗುತ್ತದೆ. ಅಲ್ಲದೆ, ಲಕ್ಷ್ಮಿ ದೇವಿಯು ನಿಮ್ಮನ್ನು ಆಶೀರ್ವದಿಸಲಿದ್ದಾಳೆ ಎಂದರ್ಥ. ದೇವಸ್ಥಾನಗಳಲ್ಲಿ ವೃಶ್ಚಿಕ ಮರಗಳಲ್ಲಿ ಹಲ್ಲಿ ಕಂಡರೆ ದೇವರ ದರ್ಶನಕ್ಕೆ ಸಮವಾಗಿದೆ.
-
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Money Saving Vastu Tips: ವಾಸ್ತು ಪ್ರಕಾರ ಹಣ ಉಳಿಯುತ್ತಿಲ್ಲವೇ? ಈ ಸರಳ ಉಪಾಯಗಳನ್ನು ಅನುಸರಿಸಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು












Click it and Unblock the Notifications