ಯಾಕೆ ಮುಜುಗರವಾಗುವಂಥಾದ್ದು ಏನಿದೆ ಅದರಲ್ಲಿ?
ವಿಜ್ಞಾನದ ಮೇಷ್ಟ್ರು ಸೀರಿಯಸ್ಸಾಗಿ ಪಾಠ ಮಾಡುತ್ತಿರುತ್ತಾರೆ. ಅವರು ಪಾಠ ಮಾಡುವುದೆಂದರೆ ಹತ್ತನೇ ಕ್ಲಾಸಿನ ಮಕ್ಕಳಿಗೆ ಕೂಡ ಅಚ್ಚುಮೆಚ್ಚು. ಆದರೂ, ಆಗಾಗ ತರಲೆ ವಿಷಯಗಳನ್ನು ಹೇಳುವಲ್ಲಿ ಅವರದು ಎತ್ತಿದ ಕೈಯಾಗಿತ್ತು. ಅಂದು ಅವರು ಮಾನವನ ಅವಯವಗಳ ಬಗ್ಗೆ ಪಾಠ ಮಾಡುತ್ತಿದ್ದರು. ಆದರೆ, ಅವರು ತರಲೆ ಮಾಡುವ ಮೂಡಿನಲ್ಲಿ ಇರಲಿಲ್ಲ.
ಕೈಯಲ್ಲಿ ಪುಸ್ತಕ ಹಿಡಿದು, ಮೂಗಿನ ತುದಿಗೆ ಕನ್ನಡಕವನ್ನು ಇಳಿಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒಂದು ಸೀರಿಯಸ್ಸಾದ ಪ್ರಶ್ನೆ ಕೇಳಿದರು.
ಮೇಷ್ಟ್ರು : ಮಕ್ಳಾ, ಮಾನವನ ಯಾವ ಅವಯವ ಹಿಗ್ಗಿದರೆ ಐದು ಪಟ್ಟು ದೊಡ್ಡದಾಗುತ್ತದೆ?
ಮಕ್ಕಳಲ್ಲಿ ಗುಸುಗುಸು ಆರಂಭವಾಯಿತು. ಯಾರು ಕೈ ಎತ್ತುತ್ತಾರೆ ಎಂದು ಮೇಷ್ಟ್ರು ಕೂಡ ಕುತೂಲಹದಿಂದ ನೋಡುತ್ತಿದ್ದರು. ತನ್ನ ವಯಸ್ಸು ಮೀರಿದ ಅಂಗಸೌಷ್ಟವದಿಂದ ಎಲ್ಲ ಹುಡುಗರನ್ನು ಚುಂಬಕದಂತೆ ಸೆಳೆಯುತ್ತಿದ್ದ ಲವೀನಾ ಚಟಕ್ಕನೆ ಎದ್ದುನಿಂತಳು. ಮೇಷ್ಟ್ರು 'ಯಸ್ ಲವೀನಾ?' ಎಂದು ಕೇಳಿದರು.
ಲವೀನಾ : ಮೇಷ್ಟ್ರೆ ನೀವು ಈ ಪ್ರಶ್ನೆ ಕೇಳಬಾರದಿತ್ತು. ಇದಕ್ಕೆ ಯಾರಿಂದಲೂ ಉತ್ತರಿಸಲು ಸಾಧ್ಯವಿಲ್ಲ. ತುಂಬಾ ಮುಜುಗರವಾಗುತ್ತದೆ.
ಮೇಷ್ಟ್ರು : ಯಾಕೆ ಮುಜುಗರವಾಗುವಂಥಾದ್ದು ಏನಿದೆ ಅದರಲ್ಲಿ?
ಲವೀನಾ ಉತ್ತರಿಸಲಾಗದೆ, ಸ್ವಲ್ಪ ಬಗ್ಗಿ ತನ್ನ ಉಂಗುಷ್ಟದ ಉಗುರಿನಿಂದ ನೆಲವನ್ನು ಕೆರೆಯಲು ಆರಂಭಿಸಿದ ಸಮಯದಲ್ಲಿ, ಬ್ರೈಟ್ ಸ್ಟುಡೆಂಟ್ ಎಂದು ಹೆಸರು ಪಡೆದಿದ್ದ ಸುರೇಸ ಎದ್ದುನಿಂತ. ಲವೀನಾ ಮೇಲಿದ್ದ ಮೇಷ್ಟ್ರ ಕಣ್ಣು ಅತ್ತ ಸರಿಯಿತು.
ಸುರೇಸ : ಕಣ್ಣಿನ ಪಾಪೆ ಸರ್.
ಮೇಷ್ಟ್ರು ಮತ್ತು ಎಲ್ಲ ಮಕ್ಕಳಿಂದ ಕಿವಿಗಡಚಿಕ್ಕುವ ಚಪ್ಪಾಳೆಗಳ ಸುರಿಮಳೆ.
ಕಣ್ಣಿಗೇರಿಸಿಕೊಂಡಿದ್ದ ಕನ್ನಡಕವನ್ನು ಮತ್ತೆ ಮೂಗಿನ ತುದಿಗೆ ಇಳಿಸಿದ ಮೇಷ್ಟ್ರು, ಲವೀನಾ ಬಳಿಗೆ ಬಂದು "ಕೇಳಮ್ಮಾ ಲವೀನಾ, ನಿನ್ನ ಯೋಚನೆ ದಾರಿತಪ್ಪಿರುವುದು ಮಾತ್ರವಲ್ಲ, ನಿನ್ನ ನಿರೀಕ್ಷೆಗಳು ಕೂಡ ಅಳತೆ ಮೀರಿವೆ!" ಎಂದು ಹೇಳಿದಾಗ ಮಕ್ಕಳೆಲ್ಲ ಬಾಯಿ ಮೇಲೆ ಗಟ್ಟಿಯಾಗಿ ಕೈಹಿಡಿದುಕೊಂಡು ಮುಸಿಮುಸಿ ನಕ್ಕಿದ್ದರು. ಲವ್ಲಿ ಲವೀನಾ ಮುಖ ಆಗ ನೋಡಬೇಕಿತ್ತು!
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications