Teacher Recruitment: ಶಾಲೆಗಳಿಗೆ ಹಿಂದಿ ಶಿಕ್ಷಕರ ನೇಮಕಾತಿ, ಆದೇಶ
ಬೆಂಗಳೂರು, ಅಕ್ಟೋಬರ್ 29: ಸರ್ಕಾರಿ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಆದೇಶವೊಂದನ್ನು ಹೊರಡಿಸಿದೆ. 2014-15ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಬೆಂಗಳೂರು ಇಲ್ಲಿನ ಅರ್ಜಿಗಳ ತೀರ್ಪುಗಳನ್ನು ಅನುಷ್ಠಾನಗೊಳಿಸುವ ಕುರಿತು ಎಂಬ ವಿಷಯವನ್ನು ಈ ಆದೇಶ ಒಳಗೊಂಡಿದೆ.
ಈ ಕುರಿತು ಇಲಾಖೆಯ ಆಯುಕ್ತರಾದ ಡಾ. ಕೆ. ವಿ. ತ್ರಿಲೋಕಚಂದ್ರ ಆದೇಶ ಹೊರಡಿಸಿದ್ದಾರೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2014-15ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಬೆಂಗಳೂರು ಇಲ್ಲಿ ಕೆಲವು ಅಭ್ಯರ್ಥಿಗಳು ದಾವೆ ಹೂಡಿದ್ದು, ಸದರಿ ದಾವೆ ಅರ್ಜಿ ಕುರಿತು ದಿನಾಂಕ 25.01.2024ರಂದು ತೀರ್ಪು ನೀಡಿರುತ್ತದೆ.

ಸದರಿ ತೀರ್ಪುಗಳನ್ನು ಪರಿಶೀಲಿಸಿ ತೀರ್ಪಿನಲ್ಲಿರುವ ಒಟ್ಟು 17 ಅಭ್ಯರ್ಥಿಗಳು ನೇಮಕಾತಿಗೆ ಅರ್ಹತೆ ಹೊಂದಿರುವುದರಿಂದ ಸದರಿ ಅಭ್ಯರ್ಥಿಗಳನ್ನು ಹಿಂದಿ ಭಾಷಾ ಶಿಕ್ಷಕರ ನೇಮಕಾತಿಗೆ ಪರಿಗಣಿಸಲು 17 ಹೆಚ್ಚುವರಿ ಹುದ್ದೆಗಳ ಅವಶ್ಯಕತೆ ಇರುವುದರಿಂದ ಹೆಚ್ಚುವರಿ 17 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಅನುಮತಿ ಕೋರಲಾಗಿತ್ತು.
2014-15ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕರಣಗಳಲ್ಲಿ ನೀಡಿರುವ ತೀರ್ಪುಗಳನ್ನು ಅನುಷ್ಠಾನಗೊಳಿಸಲು ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಿಂದಿ ಭಾಷಾ ಶಿಕ್ಷಕರ ಖಾಲಿ ಇರುವ 1318 ಹುದ್ದೆಗಳಲ್ಲಿ 16 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಸಹಮತಿ ನೀಡಲಾಗಿರುತ್ತದೆ ಹಾಗೂ ಸರ್ಕಾರದ ಪತ್ರದಲ್ಲಿ ಕೆಎಸ್ಟಿ ಅರ್ಜಿ ಪ್ರಕರಣದಲ್ಲಿ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸಲು ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಿಂದಿ ಭಾಷಾ ಶಿಕ್ಷಕರ ಖಾಲಿ ಇರುವ ಹುದ್ದೆಗಳಲ್ಲಿ 1 ಹುದ್ದೆಯನ್ನು ಬಳಸಿಕೊಂಡು ನೇಮಕಾತಿ ಮಾಡಲು ಸಹ ಸರ್ಕಾರದ ಸಹಮತಿ ನೀಡಲಾಗಿರುತ್ತದೆ.
ಪ್ರಯುಕ್ತ ಒಟ್ಟಾರೆ 17 ಅಭ್ಯರ್ಥಿಗಳನ್ನು ನ್ಯಾಯಾಲಯದ ತೀರ್ಪು ಹಾಗೂ ಸರ್ಕಾರದ ಆದೇಶಗಳನ್ವಯ 2014-15ನೇ ಸಾಲಿನ ಹಿಂದಿ ಭಾಷಾ ಶಿಕ್ಷಕರ ನೇಮಕಾತಿಗೆ ಪರಿಗಣಿಸಬೇಕಾಗಿರುವುದರಿಂದ ಸದರಿ ಅಭ್ಯರ್ಥಿಗಳ ವಿಭಾಗವಾರು ಪ್ರತ್ಯೇಕ ಆಯ್ಕೆ ಪಟ್ಟಿಗಳನ್ನು ದಿನಾಂಕ 28/10/2024 ರೊಳಗೆ ತಯಾರಿಸಿ ಇಲಾಖಾ ವೆಬ್ಸೈಟ್ನಲ್ಲಿ ಪ್ರಕಟಿಸುವುದು. ಸದರಿ ಆಯ್ಕೆ ಪಟ್ಟಿಗಳನ್ನು, ಆಯಾ ವಿಭಾಗಿಯ ಆಯ್ಕೆ ಪ್ರಾಧಿಕಾರಿಗಳು ಹಾಗೂ ಪದನಿಮಿತ್ತ ವಿಭಾಗೀಯ ಸಹ ನಿರ್ದೇಶಕರುಗಳಿಗೆ ಕಳುಹಿಸಿ ಸೂಚನಾ ಫಲಕದಲ್ಲಿ ಪ್ರಕಟಿಸಲು ಸೂಚಿಸುವಂತೆ ತಿಳಿಸಿದೆ. ಮುಂದುವರೆದು ಈ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಈ ಕೆಳಗಿನಂತೆ ಉಳಿದ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದೆ.
* ನ್ಯಾಯಾಲಯದ ಅರ್ಜಿಯಲ್ಲಿರುವ ಅಭ್ಯರ್ಥಿಗಳ ಹೆಸರುಗಳು ಹಾಗೂ ಆಯ್ಕೆಪಟ್ಟಿಯಲ್ಲಿ ಇರುವ ಅಭ್ಯರ್ಥಿಗಳು ಹೆಸರುಗಳು ಎರಡೂ ಎರಡೂ ಒಬ್ಬರದೇ ಆಗಿರುತ್ತದೆ ಎಂಬ ಕುರಿತು. ದಾಖಲೆಗಳನ್ನು ಪರಿಶೀಲಿಸಿಕೊಂಡು ಖಚಿತಪಡಿಸಿಕೊಳ್ಳುವುದು. ಈ ಕುರಿತು ಅಭ್ಯರ್ಥಿಗಳಿಂದ ಸ್ವಯಂ ಅಫಿಡವಿಟ್ ಪಡೆದುಕೊಂಡು ಕ್ರಮವಹಿಸಲು ನೇಮಕಾತಿ ಪ್ರಾಧಿಕಾರಿಗಳಿಗೆ ಸೂಚಿಸುವುದು. ಅಭ್ಯರ್ಥಿಗಳು ಆಫಿಡವಿಟ್ನಲ್ಲಿ ನೀಡುವ ಮಾಹಿತಿಯು ತಪ್ಪು ಎಂದು ಕಂಡುಬಂದಲ್ಲಿ ಭಾರತ ದಂಡ ಸಂಹಿತೆ ಪ್ರಕಾರ ಶಿಕ್ಷೆಗೆ ಒಳಪಡುವುದಾಗಿ ಅಭ್ಯರ್ಥಿಗಳು ಒಪ್ಪಿ, ಪ್ರಮಾಣೀಕರಿಸಬೇಕು.
* 2014-15ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಹಿಂದಿ ಶಿಕ್ಷಕರ ನೇಮಕಾತಿಗೆ ಒಟ್ಟು 125 ಹುದ್ದೆಗಳನ್ನು ಅಧಿಸೂಚಿಸಲಾಗಿದ್ದು, ಆದರೆ ನ್ಯಾಯಾಲಯದ ತೀರ್ಪಿನಂತೆ ನೇಮಕಾತಿ ಪ್ರಕ್ರಿಯೆಗೆ ಕ್ರಮವಹಿಸಬೇಕಾಗಿರುವುದರಿಂದ ಅಧಿಸೂಚಿಸಿದ ಹುದ್ದೆಗಳಿಗಿಂತ ಹೆಚ್ಚಿನ ಹುದ್ದೆಗಳನ್ನು ನೇಮಕಾತಿ ಮಾಡಬೇಕಾಗಿರುವುದರಿಂದ ಸದರಿ ಹುದ್ದೆಗಳ ಸಮತಳ ಹಾಗೂ ಲಂಬ ಮೀಸಲಾತಿಯನ್ನು ಮುಂದಿನ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಹುದ್ದೆಗಳ ಸಂಖ್ಯೆಯನ್ನು ಸರಿದೂಗಿಸಿಕೊಳ್ಳುವ ಪರತ್ತಿಗೊಳಪಟ್ಟಿರುತ್ತದೆ.
* ಸದರಿ ಅಭ್ಯರ್ಥಿಗಳ ಮೂಲ ಅರ್ಜಿಯನ್ನು ಪಡೆದು ಎಲ್ಲಾ ಅಗತ್ಯ ಮೂಲ ದಾಖಲೆಗಳನ್ನು ಪರಿಶೀಲಿಸಲು ಆಯ್ಕೆ ಪ್ರಾಧಿಕಾರಿಗಳಿಗೆ ಸೂಚಿಸುವುದು.
* ನಂತರ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಮೂಲಕ ಖಾಲಿಯಿರುವ ಹುದ್ದೆಗಳಿಗೆ ಸ್ಥಳ ಆಯ್ಕೆ ಪ್ರಕ್ರಿಯೆ ನಡೆಸುವುದು.
* ಅಭ್ಯರ್ಥಿಗಳ ಅಂಕಪಟ್ಟಿ ಪ್ರಮಾಣ ಪತ್ರಗಳ ನೈಜತೆ/ ಸಿಂಧುತ್ವ ಪರಿಶೀಲನೆಯಾಗಿ ಬಂದ ನಂತರವೇ ನೇಮಕಾತಿ ಆದೇಶ ನೀಡಲು ನೇಮಕಾತಿ ಪ್ರಾಧಿಕಾರಿಗಳಿಗೆ ತಿಳಿಸುವಂತೆ ಆಯ್ಕೆ ಪ್ರಾಧಿಕಾರಿಗಳಿಗೆ ಸೂಚಿಸುವುದು.
* ಸದರಿ ಅಭ್ಯರ್ಥಿಗಳಿಗೆ ಸೇವಾ ಜೇಷ್ಠತೆಯನ್ನು ಹಾಗೂ ಆರ್ಥಿಕ ಸೌಲಭ್ಯಗಳನ್ನು ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಮಾತ್ರ ನೀಡಲು ನೇಮಕಾತಿ ಪ್ರಾಧಿಕಾರಿಗಳಿಗೆ ಕ್ರಮವಹಿಸಲು ಸೂಚಿಸುವುದು ಹಾಗೂ ಈ ಕುರಿತು ಸಂಬಂಧಿಸಿದ ಅಭ್ಯರ್ಥಿಗಳಿಂದ ಮುಚ್ಚಳಿಕೆ ಪತ್ರಗಳನ್ನು ಪಡೆಯುವುದು.
ಈ ಮೇಲಿನಂತೆ ನೇಮಕಾತಿಗೆ ಅರ್ಹರಿರುವ 17 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಣೆ, ಸದರಿ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳನಿಯುಕ್ತಿ ಪ್ರಕ್ರಿಯೆ ನಡೆಸಿ ನೇಮಕಾತಿ ಆದೇಶ ನೀಡುವುದು ಎಂದು ಹೇಳಿದೆ.












Click it and Unblock the Notifications