ಮುಸ್ಲಿಮರು 'ಫೋಟೋ' ತೆಗಿಸಿಕೊಳ್ಳುವಂತಿಲ್ಲ!
ನವದೆಹಲಿ, ಸೆ.11: ಮುಸ್ಲಿಮರು ಛಾಯಾಚಿತ್ರ(ಫೋಟೋ) ತೆಗೆಸಿಕೊಳ್ಳುವಂತಿಲ್ಲ. ಫೋಟೊ ತೆಗೆಸಿಕೊಳ್ಳುವುದು ಕಾನೂನು ಬಾಹಿರ. ಇಸ್ಲಾಂ ಧರ್ಮದಲ್ಲಿ ಇದು ನಿಷಿದ್ಧ ಹಾಗೂ ಪಾಪ ಕಾರ್ಯ ಎಂದು ಫೋಟೋಗ್ರಾಫಿ ವಿರುದ್ಧ ಫತ್ವಾ ಹೊರಡಿಸಲಾಗಿದೆ.
ದೆಹಲಿಯ ದಾರುಲ್ ಉಲೂಮ್ ಇದೀಗ ಫತ್ವಾ ಹೊರಡಿಸಿದೆ. ಸೌದಿ ಅರೇಬಿಯಾದಲ್ಲಿ ಪವಿತ್ರ ಮೆಕ್ಕಾ ಕ್ಷೇತ್ರದಲ್ಲಿ ಛಾಯಾಚಿತ್ರ (ವಿಡಿಯೋ) ತೆಗೆಯಲು ಹಾಗೂ ಸಾಮೂಹಿಕ ಪ್ರಾರ್ಥನೆ (ನಮಾಜ್) ಮಾಡುವುದನ್ನು ಚಿತ್ರೀಕರಿಸಲು ಸಂಪೂರ್ಣ ಅವಕಾಶ ನೀಡಿದೆ.
ಅದರೆ. ದೆಹಲಿಯ ದಾರುಲ್ ಉಲೂಮ್, ಗುರುತಿನ ಚೀಟಿ, ಪಾಸ್ ಪೋರ್ಟ್ ಗಾಗಿ ತೆಗೆಸುವ ಕೆಲ ಸಂದರ್ಭಗಳ ಫೋಟೋ ಹೊರತುಪಡಿಸಿದರೆ, ಉಳಿದಂತೆ ಮುಸ್ಲಿಮರು ಫೋಟೋ ತೆಗೆಸಿಕೊಳ್ಳುವುದು ಅಪರಾಧ ಎಂಬ ಫತ್ವಾವನ್ನು ಹೊರಡಿಸಿದೆ.
ಮದುವೆ ಕಾರ್ಯಗಳ ವಿಡಿಯೋ ಚಿತ್ರೀಕರಣ, ಮುಂದಿನ ಪೀಳಿಗೆ ನೋಡಲಿ ಎಂಬ ಕಾರಣಕ್ಕಾಗಿ ಛಾಯಾಚಿತ್ರ ತೆಗೆಸಿಕೊಳ್ಳುವುದು ಧರ್ಮಬಾಹಿರ ಎಂದು ಹೇಳಿರುವ ದಾರುಲ್ ಉಲೂಮ್ ಸದಸ್ಯ ಮುಫ್ತಿ ಅಬ್ದುಲ್ ಇರ್ಫಾನ್ ಖಾದ್ರಿ ರಜಾಕಿ ಹಾಗೂ ಮುಫ್ತಿ ಅಬ್ದುಲ್ ಖಾಸಿಂ ನೊಮಾನಿ ಮೊಹತ್ ಮೀಮ್, ಸೌದಿ ಅರೇಬಿಯಾದಲ್ಲಿ ಅವರು ಮಾಡಿಕೊಳ್ಳಲಿ, ಆದರೆ ನಾನಂತೂ ಅದನ್ನು ನಿಷೇಧಿಸುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಇಂಜಿನಿಯರಿಂಗ್ ಪದವೀಧರ ಮುಸ್ಲಿಂ ಯುವಕನೊಬ್ಬ ನನಗೆ ಫೋಟೋಗ್ರಾಫಿಯಲ್ಲಿ ಹೆಚ್ಚಿನ ಆಸಕ್ತಿಯಿದೆ ನಾನು ವೃತ್ತಿಯಾಗಿ ಅದನ್ನು ಸ್ವೀಕರಿಸಲು ಸಾಧ್ಯವೇ ಎಂದು ದರೂಲ್ ಉಲೂಮ್ ನ ಸದಸ್ಯರ ಮುಂದೆ ಪ್ರಶ್ನೆ ಇಟ್ಟಾಗ ನೊಮಾನಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಇಸ್ಲಾಮ್ ನ ಹದಿತ್ ಇದನ್ನು ಎಂದಿಗೂ ಒಪ್ಪುವುದಿಲ್ಲ. ನೀನು ಈ ಕೋರ್ಸ್ ಮಾಡುವಂದಿಲ್ಲ. ಬೇರೆ ಉದ್ಯೋಗ, ಇಂಜಿನಿಯರಿಂಗ್ ವಿಷಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಫತ್ವಾದ ಜತೆಗೆ ಹೇಳಲಾಗಿದೆ.ಈ ಕುರಿತ ಪ್ರಕಟಣೆಯನ್ನು ಶಾಲೆಗಳಲ್ಲೂ ಪ್ರಕಟಿಸಲಾಗಿದೆ.
ನೊಮಾನಿ ಹೊರಡಿಸಿರುವ ಫತ್ವಾಗೆ ಅಖಿಲ ಭಾರತ ಮುಸ್ಲಿಮ್ ಕಾನೂನು ವೈಯಕ್ತಿಕ ಬೋರ್ಡ್ ಸದಸ್ಯ ಮುಫ್ತಿ ಅಬ್ದುಲ್ ಇರ್ಫಾನ್ ಖಾದ್ರಿ ರಜಾಕಿ ಕೂಡಾ ಒಮ್ಮತ ವ್ಯಕ್ತಪಡಿಸಿದ್ದಾರೆ.
ಇಸ್ಲಾಂ ಧರ್ಮದಲ್ಲಿ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳ ಚಿತ್ರ ತೆಗೆಯಲು ಕೂಡಾ ಅವಕಾಶವಿಲ್ಲ. ನಿಯಮ ಮೀರಿ ನಡೆದುಕೊಂಡವರು ದೇವರಿಗೆ ಉತ್ತರ ಹೇಳಬೇಕಾಗುತ್ತದೆ ಎಂದು ರಜಾಕಿ ಹೇಳಿದ್ದಾರೆ.
ಈ ಸುದ್ದಿ ವರದಿ ಮಾಡಲು ಹೊರಟ ವಿಡಿಯೋ ಪತ್ರಕರ್ತರು ಈಗ ನೀವು ಕೆಮೆರಾ ಎದುರಿಸಿ ಮಾತನಾಡುತ್ತಿದ್ದೀರಲ್ಲ ಇದು ತಪ್ಪಾಗುವುದಿಲ್ಲವೇ ಎಂದು ಪ್ರಶ್ನಿಸಿದಾಗ, ಹೌದು ಇದು ಕೂಡಾ ತಪ್ಪು ನೀವು ಕೂಡಾ ಅಲ್ಲಾಹ್ ನಲ್ಲಿ ಕ್ಷಮೆ ಬೇಡಬೇಕು. ನಿರ್ಬಂಧಿತ ಕಾರ್ಯಕ್ಕೆ ಪ್ರೇರೇಪಿಸುವ ಕೆಲಸದಿಂದ ಮುಕ್ತಿ ನೀಡು ಎನ್ನಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇಸ್ಲಾಂ ಧರ್ಮ ಬೋಧನೆ ಮಾಡುವ ಪೀಸ್ ಟಿವಿ, ಕ್ಯೂ ಟಿವಿ, ಎಆರ್ ವೈ ಮುಂತಾದ ಚಾನೆಲ್ ಗಳು ಲೈವ್ ನಮಾಜ್, ಹಜ್ ಯಾತ್ರೆ ದೃಶ್ಯಗಳನ್ನು ಪ್ರಸಾರ ಮಾಡುತ್ತದೆ. ಇದೆಲ್ಲ ತಪ್ಪು ಎಂದರೆ ಹೇಗೆ ಎಂದು ಶಿಯಾ ಸಮಿತಿಯ ಮುಫ್ತಿ ಸೈಫ್ ಅಬ್ಬಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಸುನ್ನಿ ಪಂಗಡದವರಿಗೆ ಫೋಟೊಗ್ರಾಫಿ ತಪ್ಪಲ್ಲ ಎಂದು ತಿಳಿ ಹೇಳಬೇಕಿದೆ ಎಂದು ಹೇಳಿದ್ದಾರೆ.(ಪಿಟಿಐ)
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications