Get Updates
Get notified of breaking news, exclusive insights, and must-see stories!

Vaikuntha Ekadashi 2025: ಏಕಾದಶಿ ದಿನಾಂಕ, ಪಾರಣ ಸಮಯ, ಪೂಜಾ ವಿಧಿಗಳು, ಮಹತ್ವ

ವೈಕುಂಠ ಏಕಾದಶಿಯು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರವಾದ ಆಚರಣೆಯಾಗಿದೆ. ಈ ದಿನವನ್ನು ವಿಷ್ಣು ದೇವನನ್ನು ಪೂಜಿಸಲು ಅತ್ಯಂತ ಪವಿತ್ರವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಭಕ್ತರು ವಿಷ್ಣು ದೇವನನ್ನು ಅತ್ಯಂತ ಭಕ್ತಿಯಿಂದ ಪೂಜಿಸುತ್ತಾರೆ. ಏಕಾದಶಿ ತಿಥಿಯಿಂದ ಕಠಿಣ ಉಪವಾಸವನ್ನು ಪ್ರಾರಂಭಿಸಿ ದ್ವಾದಶಿ ತಿಥಿಯಂದು ಕೊನೆಗೊಳಿಸಲಾಗುತ್ತದೆ. ಹಾಗಾದರೆ 2025ರ ಮೊದಲ ವೈಕುಂಠ ಏಕಾದಶಿ ದಿನಾಂಕ, ಶುಭ ಸಮಯ, ಮಹತ್ವ, ಪ್ರಾಮುಖ್ಯತೆಯನ್ನು ತಿಳಿಯೋಣ.

ಏಕಾದಶಿ ಹಿಂದೂ ಧರ್ಮದಲ್ಲಿ ಒಂದು ಪ್ರಮುಖ ಉಪವಾಸವಾಗಿದೆ. ಇದನ್ನು ಪ್ರತಿ ತಿಂಗಳ ದ್ವಾದಶಿ ತಿಥಿಯಂದು ಆಚರಿಸಲಾಗುತ್ತದೆ. 'ಏಕ' ಅಂದರೆ 'ಒಂದು' ಮತ್ತು 'ದಶ' ಅಂದರೆ 'ಹತ್ತು'. ವೈಕುಂಠ ಏಕಾದಶಿ ಉಪವಾಸವನ್ನು ಮಾಡುವುದರಿಂದ ವಿಷ್ಣುವಿನ ಆಶೀರ್ವಾದವನ್ನು ಭಕ್ತರು ಪಡೆಯುತ್ತಾರೆ. ಇದು ವ್ಯಕ್ತಿಗಳ ಪಾಪಗಳನ್ನು ದೂರ ಮಾಡುತ್ತದೆ. ಹೀಗಾಗಿ ಈ ದಿನ ಭಕ್ತರು ಕಠಿಣ ಉಪವಾಸವನ್ನು ಕೈಗೊಳ್ಳುತ್ತಾರೆ. 2025ನೇ ವರ್ಷದ ಮೊದಲ ತಿಂಗಳು ಅಂದರೆ ಜನವರಿ 9ನೇ ತಾರೀಕು ವೈಕುಂಠ ಏಕಾದಶಿ ಆರಂಭವಾಗುತ್ತದೆ. ಹಾಗಾದರೆ ಏಕಾದಶಿ ತಿಥಿ ಪ್ರಾರಂಭವಾಗುವ ದಿನಾಂಕ ಸಮಯದ ಬಗ್ಗೆ ತಿಳಿಯೋಣ.

Ekadashi in january 2025 know here date parana time pooja rites and significance in kannada

ಏಕಾದಶಿ ದಿನಾಂಕ ಹಾಗೂ ಸಮಯ:-

*ಏಕಾದಶಿ ತಿಥಿ ಪ್ರಾರಂಭವಾಗುತ್ತದೆ - ಜನವರಿ 9, 2025 - ಮಧ್ಯಾಹ್ನ 12:22ಕ್ಕೆ

* ಏಕಾದಶಿ ತಿಥಿ ಕೊನೆಗೊಳ್ಳುತ್ತದೆ - ಜನವರಿ 10, 2025 - ಬೆಳಗ್ಗೆ 10:19ಕ್ಕೆ

*ಪರಾನಾ ಸಮಯ - ಜನವರಿ 11, 2025 - ಬೆಳಗ್ಗೆ 07:14 ರಿಂದ ಬೆಳಗ್ಗೆ 08:21ರವರೆಗೆ

*ಪಾರಣ ದಿನದ ದ್ವಾದಶಿ ಅಂತ್ಯದ ಕ್ಷಣ - ಜನವರಿ 11, 2025 - ಬೆಳಗ್ಗೆ 08:21ರವರೆಗೆ

ಷಟ್ಟಿಲ ಏಕಾದಶಿ 2025: ಮಾಘ ಮಾಸ (ಕೃಷ್ಣ ಪಕ್ಷ)

ಏಕಾದಶಿ ತಿಥಿ ಆರಂಭ - ಜನವರಿ 24, 2025 - ಸಂಜೆ 07:25 ನಿಮಿಷಕ್ಕೆ

ಏಕಾದಶಿ ತಿಥಿ ಕೊನೆಗೊಳ್ಳುತ್ತದೆ - ಜನವರಿ 25, 2025 - ರಾತ್ರಿ 08:31 ನಿಮಿಷಕ್ಕೆ

ಪರಾನಾ ಸಮಯ - ಜನವರಿ 26, 2025 - ಬೆಳಗ್ಗೆ 07:11 ರಿಂದ ಬೆಳಗ್ಗೆ 09:20ನಿಮಿಷಕ್ಕೆ

ಪಾರಣ ದಿನದ ದ್ವಾದಶಿ ಅಂತ್ಯದ ಕ್ಷಣ - ಜನವರಿ 26, 2025- ರಾತ್ರಿ 08:54ಕ್ಕೆ

ಮಹತ್ವ

ವೈಕುಂಠ ಏಕಾದಶಿ ಹಿಂದೂಗಳಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ ವಿಷ್ಣುವನ್ನು ಪೂಜಿಸಲು ಅತ್ಯಂತ ಪವಿತ್ರವಾದ ದಿನವೆಂದು ಪರಿಗಣಿಸಲಾಗಿದೆ. ಆತನನ್ನು ಪೂರ್ಣ ಭಕ್ತಿಯಿಂದ ಪೂಜಿಸುವ ಭಕ್ತರು ಮತ್ತು ಅವನಲ್ಲಿ ನಂಬಿಕೆಯನ್ನು ಹೊಂದುವವರಿಗೆ ಸಂತೋಷ, ಸಮೃದ್ಧಿ ಮತ್ತು ಇತರ ಎಲ್ಲಾ ಲೌಕಿಕ ಸಂತೋಷಗಳು ಸಿಗಲಿವೆ ಎಂಬ ನಂಬಿಕೆ ಇದೆ.

ಪ್ರಾಮುಖ್ಯತೆ

1. ಏಕಾದಶಿಯನ್ನು ಆತ್ಮಾವಲೋಕನ, ಸ್ವಯಂ ಪರೀಕ್ಷೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಪರಿಪೂರ್ಣ ದಿನವೆಂದು ಪರಿಗಣಿಸಲಾಗಿದೆ.

2. ಬ್ರಹ್ಮಾಂಡದ ರಕ್ಷಕ ಎಂದು ಪರಿಗಣಿಸಲ್ಪಟ್ಟ ಭಗವಾನ್ ವಿಷ್ಣುವನ್ನು ಏಕಾದಶಿಯಂದು ಪೂಜಿಸಲಾಗುತ್ತದೆ.

3. ಜನಪ್ರಿಯ ನಂಬಿಕೆಯ ಪ್ರಕಾರ ಏಕಾದಶಿಯು ಶುದ್ಧೀಕರಣದ ದಿನವಾಗಿದೆ. ಈ ಸಮಯದಲ್ಲಿ ವಿಷ್ಣುವಿನ ಭಕ್ತರು ತಮ್ಮ ಮನಸ್ಸು ಮತ್ತು ಹೃದಯಗಳನ್ನು ಶುದ್ಧೀಕರಿಸಿಕೊಳ್ಳುತ್ತಾರೆ. ಹಿಂದಿನ ಅಪರಾಧಗಳಿಗೆ ಕ್ಷಮೆ ಕೇಳಿ ಪೂಜೆ ಮಾಡುತ್ತಾರೆ.

4. ಭಕ್ತರು ಏಕಾದಶಿಯಂದು ಮೋಕ್ಷವನ್ನು ಸಾಧಿಸುವ ದಿನ ಎಂದು ನಂಬುತ್ತಾರೆ.

ಪೂಜಾ ವಿಧಿಗಳು

1. ಉಪವಾಸ: ಏಕಾದಶಿಯಂದು ಭಕ್ತರು ಇಡೀ ದಿನ ಆಹಾರವನ್ನು ಸೇವಿಸುವುದನ್ನು ಬಿಟ್ಟು ವಿಷ್ಣವಿನ ಆರಾಧನೆ ಮಾಡಲಾಗುತ್ತದೆ.

2. ವಿಷ್ಣುವನ್ನು ಪೂಜಿಸುವುದು: ಭಕ್ತರು ಈ ದಿನ ವಿಷ್ಣು ದೇವನ ಆಶೀರ್ವಾದ ಪಡೆಯಲು ಪ್ರಾರ್ಥನೆಗಳನ್ನು ಮಾಡುತ್ತಾರೆ, ಹೂವು, ಹಣ್ಣು ಇತರ ವಸ್ತುಗಳನ್ನು ಅರ್ಪಿಸಿ ಪೂಜಿಸುತ್ತಾರೆ.

3. ಪೂಜೆ: ಏಕಾದಶಿಯಂದು ದೇವಸ್ಥಾನ ಹಾಗೂ ಮನೆಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ, ಇದರಲ್ಲಿ ಭಗವಾನ್ ವಿಷ್ಣುವನ್ನು ಪ್ರಾರ್ಥಿಸುವುದು ಮತ್ತು ಮಂತ್ರಗಳನ್ನು ಪಠಿಸುವುದು ಒಳಗೊಂಡಿರುತ್ತದೆ.

4. ದಾನ: ಈ ದಿನ ಅಗತ್ಯವಿರುವವರಿಗೆ ಸಹಾಯ ಮಾಡುವುದು ತುಂಬಾ ಉತ್ತಮ ಫಲ ನೀಡುತ್ತದೆ. ಹೀಗಾಗಿ ಭಕ್ತರು ಆಹಾರ, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ದಾನ ಮಾಡುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+