ಕಾರು ಕೊಳ್ಳಬೇಕೆಂಬ ಕನಸಿನ ಕುದುರೆಯನೇರಿ
ನನ್ನ ಬಳಿ ಹೀರೋ ಹೊಂಡಾ ಸ್ಪೆಂಡರ್ ಇದೆ. ಕಳೆದ ಹತ್ತು ವರ್ಷಗಳಿಂದ ಅದು ನನ್ನ ಅನುದಿನದ ಸಂಗಾತಿ. ಅಲ್ಲಲ್ಲಿ ತರಚಿದ ಗಾಯಗಳಾಗಿದ್ದರೂ ನನ್ನ 'ಹೀರೋ'ನನ್ನು ಜತನದಿಂದ ಕಾಯ್ದುಕೊಂಡು ಬಂದಿದ್ದೇನೆ. ಅದೂ ಕೂಡ ನನ್ನನ್ನು ಸಲಹಿಕೊಂಡು ಬಂದಿದೆ. ನಮ್ಮಿಬ್ಬರಲ್ಲಿ ಒಂದು ಬಗೆಯ ಭಾವನಾತ್ಮಕ ಸಂಬಂಧ ಬೆಳೆದುಬಿಟ್ಟಿದೆ.
ಆ ಗಾಡಿಯ ಮೇಲೆ ನಾನು ನನ್ನ ಸಂಸಾರ ಬೆಂಗಳೂರಿನ ಗಲ್ಲಿಗಲ್ಲಿಗಳನ್ನು ಸತ್ತಾಡಿದೆ. ಮೀಟರು ಒಂದು ಬಾರಿ ಎಲ್ಲಾ ಅಂಕಿಗಳನ್ನು ಕಂಡ ಮತ್ತೆ ಸೊನ್ನೆಯೊಂದಿಗೆ ಮತ್ತೆ ತನ್ನ ಪಯಣ ಆರಂಭಿಸಿದೆ. ಗಾಡಿ ಸರ್ವೀಸ್ ಮಾಡುವ ಮೆಕ್ಯಾನಿಕ್ ಮುನಿರತ್ನನಿಂದ ಶಭಾಸ್ಗಿರಿಯನ್ನೂ ಪಡೆದಂಥ ಜಾಣಮರಿ ನನ್ನ ಹೀರೋ ಹೊಂಡಾ.
ಹಿಂದೆ ಹೆಂಡತಿ, ಮುಂದೆ ಮಗಳು, ಹೆಂಡತಿ ಕಂಕುಳಲ್ಲಿ ಮುದ್ದು ಮಗ, ಮಧ್ಯದಲ್ಲಿ ಕುಳಿತು ಸರ್ಕಸ್ ಮಾಡುತ್ತ ಗಾಡಿ ಓಡಿಸುವ ನಾನು. ಆರಂಭದಲ್ಲಿ ಚೆನ್ನಾಗಿತ್ತು. ಈಗ ಮಗಳು ದೊಡ್ಡವಳಾಗಿದ್ದಾಳೆ, ನಾನು ಇಪ್ಪತ್ತು ವರ್ಷಗಳಿಂದ ಎಷ್ಟು ಎತ್ತರವಿದ್ದೆನೋ ಅಷ್ಟೇ ಇದ್ದೇನೆ, ಐದು ಅಡಿ ನಾಲ್ಕು ಇಂಚು. ಮಗಳು ಮುಂದೆ ಕುಳಿತರೆ ಸರಿಯಾಗಿ ಓಡಿಸಲು ಆಗಬೇಕಲ್ಲ? ಬೆಳೆಯುತ್ತಿರುವ ಮಗ ಕೂಡ ಮುಂದೆಯೇ ಕೂಡುತ್ತೇನೆಂದು ಗಲಾಟೆ ಮಾಡುತ್ತಾನೆ. ಯಾರನ್ನು ಎಲ್ಲಿ ಕೂಡಿಸುವುದು?

ನಮ್ಮ ಈ ಪೀಕಲಾಟವನ್ನು ನೋಡಿ ಹಿರಿಯರೊಬ್ಬರು "ಸಂಸಾರ ದೊಡ್ಡದಾತು ಕಾರು ತೊಗೊಳ್ರೀ ಇನ್ನ" ಅಂತ ಪುಗಸಟ್ಟೆ ಸಲಹೆ ಕೊಟ್ಟು ಕನಸಿನ ಬೀಜ ಬಿತ್ತಿದರು. ವಾಜಮೈತಿ ಮಾತು ಅಂದ್ಕೊಂಡೆ. ಪಾಪ ನನ್ನ ಹೀರೋಗೂ ವಯಸ್ಸಾಯಿತು. ಹಾರ್ನ್ ಹೊಡೆದಾಗ ಅವನ ಕಿವಿಗೇ ಸರಿಯಾಗಿ ಕೇಳಿಸಲ್ಲ, ಕಣ್ಣು ಮೊದಲಿಂದಲೂ ಮಂದ, ಕೀಲುಗಳು ಸಾಕಷ್ಟು ಸವೆದಿವೆ, ಏರಿ ಹತ್ತುವಾಗ ಏದುಸಿರು ಬಿಡುತ್ತಾನೆ. ಕಾರು ಕೊಂಡು ನನ್ನ ಹೀರೋಗೂ ಸ್ವಲ್ಪ ರೆಸ್ಟ್ ನೀಡಬೇಕೆಂದು ಅನ್ನಿಸಿದ್ದೇ ಆವಾಗ.
ಕಾರು ಕೊಳ್ಳಬೇಕೆಂಬ ಕನಸಿನ ಬೀಜವೇನೋ ಮೊಳಕೆಯೊಡೆದಿದೆ. ಯಾವ ಕಾರು ಕೊಳ್ಳುವುದು? ಎಷ್ಟು ಬೆಲೆಯದ್ದು? ಸದ್ಯಕ್ಕೆ ನನ್ನನ್ನು ಕಾಡುತ್ತಿರುವ ಪ್ರಶ್ನೆ. ಮನೆ ಸಾಲದ ಇಎಂಐ ಸೇರಿದಂತೆ ನಾನಾ ಇಎಂಐಗಳು ನನ್ನ ಜೇಬಿಗೆ ಸಾಕಷ್ಟು ಕನ್ನ ಕೊರೆದಿವೆ. ಈ ಸಣ್ಣಪುಟ್ಟ ಕನಸೆಂಬ ಕುದುರೆಯ ಬೆನ್ನು ಹತ್ತಿದ ಮೇಲೆ ನನ್ನ ಜೀವನವೇ ಇಎಂಐ ಕಟ್ಟುವುದರಲ್ಲಿ ಕಳೆದುಹೋಗುತ್ತದಾ ಎಂಬ ದಿಗಿಲೂ ಕಾಡುತ್ತಿದೆ.
ಕನಸಿನ ಕುದುರೆ ಏರೆ ಸವಾರಿ ಹೊರಡಬೇಕು ಎಂಬಷ್ಟರಲ್ಲಿ ಬಜೆಟ್ಟು ಬಂದಿದೆ, ಸಣ್ಣ ಮತ್ತು ದೊಡ್ಡ ಕಾರುಗಳು ತುಟ್ಟಿಯಾಗಲಿವೆ ಎಂಬ ಸುದ್ದಿ ಬಂದು ನನ್ನ ಕನಸಿನ ಕುದುರೆಗೆ ಲಗಾಮು ಹಾಕಿದೆ. ರೇಟು ಏರಲಿ ಬಿಡಲಿ, ನನ್ನ ಹೆಂಡತಿಯಂತೂ ಕುದುರೆಗೆ ಬಾರಿಸಲು ಬಾರಿಕೋಲು ಹಿಡಿದು ನಿಂತುಬಿಟ್ಟಿದ್ದಾಳೆ. ಪೆಟ್ರೋಲ್, ಡೀಸೆಲ್ ದರಗಳು ಮೊದಲೇ ಏರುಮುಖದಲ್ಲಿವೆ. ಏನೇ ಆಗಲಿ, ಈ ವರ್ಷ ಕಾರು ಕೊಳ್ಳಬೇಕೆಂಬ ತೀರ್ಮಾನಕ್ಕೆ ಬಂದಿದ್ದೇನೆ. ಮಧ್ಯಮ ವರ್ಗದವನ ನನ್ನ ಬಜೆಟ್ಟಿಗೆ ಯಾವ ಕಾರು ಸೂಕ್ತ ಎಂದು ನೀವೇ ಪ್ಲೀಸ್ ಸಜೆಸ್ಟ್ ಮಾಡಿರಿ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications