ಬೀಜಾಂಕುರ

ಎಂಬ ಹಕ್ಕಿ
ಹಿಡಿದು ಕೊಕ್ಕಿ
ನಲ್ಲಿ ಆಸೆಯ ಬುತ್ತಿ
ಬಂದಿದೆ ನಮ್ಮ ನೆತ್ತಿ
ಯ ಮೇಲೆ ಹಾರಿ
ಬುತ್ತಿಯೊಳಗೆ
ಸಿದ್ಧ ತಿನಿಸಿಲ್ಲ
ಇದೆ ಬರಿಯ ಕಾಳು;
ಬಿತ್ತಿ ಇಳೆಗೆ
ಬೆಳೆ ಬೆಳೆಯಬೇಕು ನಾವ್
ಇಲ್ಲದಿರೆ
ಕಾಳು ಹಾಳು
ಮುಂದೆ ಸಮೃದ್ಧಿಯ
ಫಸಲಿಗಾಗಿ ಅಗತ್ಯ
ಇಂದೇ ಪ್ರಯತ್ನದ ಉಳುಮೆ,
ಗುಣದ ಗೊಬ್ಬರ.
ಎಂದೇ
ಇಂದು
ಆ ಹಸುರಿನಾಸೆಯ
ಬೀಜಾಂಕುರ











Click it and Unblock the Notifications