ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೀಜಾಂಕುರ
ಎಂಬ ಹಕ್ಕಿ
ಹಿಡಿದು ಕೊಕ್ಕಿ
ನಲ್ಲಿ ಆಸೆಯ ಬುತ್ತಿ
ಬಂದಿದೆ ನಮ್ಮ ನೆತ್ತಿ
ಯ ಮೇಲೆ ಹಾರಿ
ಬುತ್ತಿಯೊಳಗೆ
ಸಿದ್ಧ
ತಿನಿಸಿಲ್ಲ
ಇದೆ
ಬರಿಯ
ಕಾಳು;
ಬಿತ್ತಿ
ಇಳೆಗೆ
ಬೆಳೆ
ಬೆಳೆಯಬೇಕು
ನಾವ್
ಇಲ್ಲದಿರೆ
ಕಾಳು
ಹಾಳು
ಮುಂದೆ
ಸಮೃದ್ಧಿಯ
ಫಸಲಿಗಾಗಿ
ಅಗತ್ಯ
ಇಂದೇ
ಪ್ರಯತ್ನದ
ಉಳುಮೆ,
ಗುಣದ
ಗೊಬ್ಬರ.
ಎಂದೇ
ಇಂದು
ಆ
ಹಸುರಿನಾಸೆಯ
ಬೀಜಾಂಕುರ
Comments
Story first published: Thursday, March 26, 2009, 14:48 [IST]