ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲಾಯ ತಸ್ಮೈ ನಮಃ

By Staff
|
Google Oneindia Kannada News
Archana Kuladeep Dongre, Bangalore
  • ಅರ್ಚನಾ ಕುಲದೀಪ್‌ ಡೋಂಗ್ರೆ; ಬೆಂಗಳೂರು
    [email protected]
ಉರುಳಿತು ಮತ್ತೊಮ್ಮೆ ಕಾಲಚಕ್ರ
ಮರಳಿ ಬಂದಿದೆ ಯುಗಾದಿ ।
ಕಳೆದ ಸಮಯ ನೇರ ಯಾ ವಕ್ರ
ಕಾಲನದ್ದು ತಪ್ಪದ ಹಾದಿ ।।

ಸುನಾಮಿ ಏಳಲಿ, ಕತ್ರೀನಾ ಬೀಸಲಿ,
ಕಾಲಕ್ಕಿಲ್ಲ ಯಾವುದೇ ಚಿಂತೆ ।
ಭೂಮಾತೆಯೇ ಕಂಪಿಸಲಿ
ಸಮಯ ಎಂದಾದರೂ ನಿಂತೀತೆ?

ಬಿದ್ದುಹೋಗುತಿಹ ಸರ್ಕಾರಗಳು
ಹೊಯ್ದಾಡುವ ಷೇರು ಸೂಚ್ಯಂಕ ।
ರೈತರ ಆತ್ಮಹತ್ಯೆ ಪ್ರಕರಣಗಳು
ಕಾಲನಿಗಿದೆಯೇ ಆತಂಕ?

ಕಾಲ್‌ ಸೆಂಟರ್‌ ಹುಡುಗಿಯ ಕೊಲೆ
ಕಾಲನಿಗೆ ಯಾವ ಲೆಕ್ಕ ಆ ಗಳಿಗೆ?
ಗಲಭೆ,ಗೊಂದಲಗಳ ಸರಮಾಲೆ
ಕೊಂಚವೂ ಬಿಸಿ ತಟ್ಟದು ಕಾಲನಿಗೆ!

ಒಂದೆಡೆ ಹನಿ ನೀರಿಗೆ ತತ್ವಾರ
ಮತ್ತೊಂದೆಡೆ ಮಳೆರಾಯನ ಆರ್ಭಟ ।
ಶಾಂತಿಭಂಗಕ್ಕೆ ಉಗ್ರರ ಹುನ್ನಾರ
ಕಾಲನದ್ದು ಮಾತ್ರ ನಾಗಾಲೋಟ ।।


ಮುಖಪುಟ / ವ್ಯಯನಾಮ ಸಂವತ್ಸರಕ್ಕೆ ಸ್ವಾಗತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X