Get Updates
Get notified of breaking news, exclusive insights, and must-see stories!

ಕಾಲಾಯ ತಸ್ಮೈ ನಮಃ

Archana Kuladeep Dongre, Bangalore
  • ಅರ್ಚನಾ ಕುಲದೀಪ್‌ ಡೋಂಗ್ರೆ; ಬೆಂಗಳೂರು
    [email protected]
ಉರುಳಿತು ಮತ್ತೊಮ್ಮೆ ಕಾಲಚಕ್ರ
ಮರಳಿ ಬಂದಿದೆ ಯುಗಾದಿ ।
ಕಳೆದ ಸಮಯ ನೇರ ಯಾ ವಕ್ರ
ಕಾಲನದ್ದು ತಪ್ಪದ ಹಾದಿ ।।

ಸುನಾಮಿ ಏಳಲಿ, ಕತ್ರೀನಾ ಬೀಸಲಿ,
ಕಾಲಕ್ಕಿಲ್ಲ ಯಾವುದೇ ಚಿಂತೆ ।
ಭೂಮಾತೆಯೇ ಕಂಪಿಸಲಿ
ಸಮಯ ಎಂದಾದರೂ ನಿಂತೀತೆ?

ಬಿದ್ದುಹೋಗುತಿಹ ಸರ್ಕಾರಗಳು
ಹೊಯ್ದಾಡುವ ಷೇರು ಸೂಚ್ಯಂಕ ।
ರೈತರ ಆತ್ಮಹತ್ಯೆ ಪ್ರಕರಣಗಳು
ಕಾಲನಿಗಿದೆಯೇ ಆತಂಕ?

ಕಾಲ್‌ ಸೆಂಟರ್‌ ಹುಡುಗಿಯ ಕೊಲೆ
ಕಾಲನಿಗೆ ಯಾವ ಲೆಕ್ಕ ಆ ಗಳಿಗೆ?
ಗಲಭೆ,ಗೊಂದಲಗಳ ಸರಮಾಲೆ
ಕೊಂಚವೂ ಬಿಸಿ ತಟ್ಟದು ಕಾಲನಿಗೆ!

ಒಂದೆಡೆ ಹನಿ ನೀರಿಗೆ ತತ್ವಾರ
ಮತ್ತೊಂದೆಡೆ ಮಳೆರಾಯನ ಆರ್ಭಟ ।
ಶಾಂತಿಭಂಗಕ್ಕೆ ಉಗ್ರರ ಹುನ್ನಾರ
ಕಾಲನದ್ದು ಮಾತ್ರ ನಾಗಾಲೋಟ ।।


ಮುಖಪುಟ / ವ್ಯಯನಾಮ ಸಂವತ್ಸರಕ್ಕೆ ಸ್ವಾಗತ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+