ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಿ.ಎಸ್. ಶಿವರುದ್ರಪ್ಪಕ್ಯೂ ನಿಂತು ಚೈತ್ರನಿಗಾಗಿ ಕಾಯುತ್ತಿದ್ದೇವೆ ನಾವೆಲ್ಲ ,ಬಂದನೇ ಹಿಡಿದು ಬಣ್ಣ ಬಣ್ಣಗಳ ಬಕೆಟ್ಟನ್ನು ?ಓ, ಬಂದ. ಗಾಳಿಯ ಕುಂಚವನದ್ದಿ ಬಣ್ಣದಲಿಆಗಲೇ ಬಳಿದಿದ್ದಾನೆ ಹಲವು ಮರಗಳನು !ಎಷ್ಟು ತಡ, ಏಕೆ ತಡ ? ಇವನೊಬ್ಬ ಮುನಿಸಿಪಲ್ ಕಂಟ್ರಾಕ್ಟರು; ತನಿಖೆ ಮಾಡುವರಿಲ್ಲ , ಇವನನ್ನು ಕೇಳುವರಿಲ್ಲ ವರದಿಅಲ್ಲರ್ಧ ಇಲ್ಲರ್ಧ- ಇವನ ಕೆಲಸವೆ ಹೀಗೆಇನ್ನು ಯಾವಾಗಲೋ ನಮ್ಮ ಸರದಿ !ಸಾಕಪ್ಪ ಸಾಕು ; ಕೊರೆವ ಕತ್ತರಿಗಾಳಿ ಹತ್ತರಿ ಹೊಡೆದು, ಇದ್ದ ತರಗು- ಬರಗನು ತೆಗೆದು ಬತ್ತಲೆ ಮಾಡಿ, ಛಳಿಯ ಪಾಲಿಷ್ ಹಾಕಿ, ಹೀಗೆ ಬಿರು ಬಿಸಿಲಲ್ಲಿನಿಲಿಸಬಹುದೇ ಇವನು ನಮ್ಮ ಮರ್ಯಾದೆಯನುಕಾಸಿಗಿಂತಲು ಕೂಡ ಕಡಮೆ ಮಾಡಿ !ಹಿಂದೆಲ್ಲ ಹೀಗಿರಲಿಲ್ಲ , ಕವಿಗಳೆ ಕೇಳಿ.ಈಗೀಗಂತು ಹೆಚ್ಚಾಗುತಿದೆ ಅವ್ಯವಸ್ಥೆ - ಅರ್ಜಿ ಸಲ್ಲಿಸಿ ನಾವು ಎಷ್ಟು ದಿವಸಗಳಾಯ್ತು , ಏನು ಕತೆ ; ಹೀಗೆಲ್ಲ ಕೆಡಬಾರದಪ್ಪ ಹೆಸರಾದ ಸಂಸ್ಥೆ.ಒಂದು ಚಿತ್ರ
ಮುಖಪುಟ --> ಮುಖಪುಟ / ಯುಗಾದಿ
Comments
Story first published: Friday, April 5, 2002, 16:50 [IST]