Get Updates
Get notified of breaking news, exclusive insights, and must-see stories!

ಹಾಕಿದ ಜನಿವಾರ ... ಕಳೆದನು ಭವಭಾರ...

ಗುರುಗಳಿಂದ ದೀಕ್ಷೆ ಪಡೆದನಂತರ ಸಂತ ಶಿಶುನಾಳ ಷರೀಫರು ಹಾಡುತ್ತಾರೆ. ' ಹಾಕಿದ ಜನಿವಾರವ ... ಸದ್ಗುರುನಾಥ ಕಳೆದನು ಭವ ಭಾರವ...." ಭವ ರೋಗ ಎಂದರೆ ಹುಟ್ಟು - ಸಾವೆಂಬ ಬೇನೆ. ಇದರಿಂದ ತಪ್ಪಿಸಿಕೊಳ್ಳುವವರು ಯಾರೂ ಇಲ್ಲ. ಆದರೂ ಗುರು ದೀಕ್ಷೆಯಿಂದ ಮುಕ್ತಿ ಮಾರ್ಗವನ್ನು ಕಂಡುಕೊಂಡು ಭಗವತ್ಪಾದ ಸೇರಿ ಮುಂದಿನ ಜನ್ಮದಿಂದ ಮುಕ್ತಿ ಪಡೆಯುವ ಈ ಕ್ರಿಯೆಗೆ ಉಪನಯನವೊಂದೇ ಮಂತ್ರ ಎಂದು ಹೇಳುತ್ತಾರೆ. ಉಪನಯನಾ ನಂತರ ಶ್ರದ್ಧಾ ಭಕ್ತಿಯಿಂದ ತ್ರಿಕಾಲ ಸಂಧ್ಯಾವಂದನೆ, ಜಪ, ತಪಾದಿಗಳನ್ನು ಆಚರಿಸಿ ಪರಲೋಕದಲ್ಲಿ ಸ್ಥಾನ ಪಡೆಯಬಹುದಂತೆ.

ಇದಕ್ಕಾಗೇ ಉಪನಯನವನ್ನು ಸೂಕ್ತ ಕಾಲದಲ್ಲಿ ಮಾಡುತ್ತಾರೆ. ಒಂದು ಮಾತಿದೆ. ಮದುವೆಗೆ ಮುಹೂರ್ತ ಸಿಕ್ಕರೂ ಸಿಗಬಹುದು. ಆದರೆ ಉಪನಯನಕ್ಕೆ ಮುಹೂರ್ತ ದೊರಕುವುದೇ ಕಷ್ಟ ಎಂದು. ತಾಯಿಯ ಗರ್ಭದಿಂದ 8 ವರ್ಷ ಲೆಕ್ಕ ಹಾಕಿದ ಸಂದರ್ಭದಲ್ಲಿ ಯಾವುದೇ ಬ್ರಾಹ್ಮಣ ಬಾಲಕನಿಗೂ ಯಾವುದೇ ಗುರುಬಲ ನೋಡದೆ ಉಪನಯನ ಮಾಡಬಹುದಂತೆ. ಆದರೆ 8 ತುಂಬಿದ ನಂತರ ಉಪನಯನ ಮಾಡುವುದಾದರೆ, ವಟುವಿಗೆ ಗುರುಬಲ ಇರುವುದು ಅತಿ ಮುಖ್ಯ ಎನ್ನುತ್ತಾರೆ ಶಾಸ್ತ್ರವೇತ್ತರು.

ಉಪಾಕರ್ಮ ಆಚರಣೆ
ಉಪನಯನಾ ನಂತರ ಪ್ರತಿ ವರ್ಷವೂ ಉಪಾಕರ್ಮ ಆಚರಿಸಬೇಕು. ಶ್ರಾವಣದಲ್ಲಿ ಬರುವ ಉಪಾಕರ್ಮ ಯಜ್ಞೋಪವೀತ ಧರಿಸಿದವರಿಗೆ ಅತಿ ಮುಖ್ಯವಾದದ್ದು. ಈ ಉಪಾಕರ್ಮವನ್ನು ಋಗ್ವೇದಿಗಳು ಹಾಗೂ ಯಜುರ್ವೇದಿಗಳು ಸಾಮಾನ್ಯವಾಗಿ ಬೇರೆ ಬೇರೆ ದಿನಗಳಂದು ಆಚರಿಸುತ್ತಾರೆ.

ಉಪನಯನ ಆದ ಮೇಲೆ (ಕೆಲವರಾದರೂ) ನಿತ್ಯ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಾರೆ. ಸಮಯ ಮೀರಿದ್ದ ಸಂದರ್ಭದಲ್ಲಿ ಕಾಲಾತಿದೋಷ ಪರಿಹಾರ್ಥವಾಗಿ ಪುನರರ್ಘ್ಯ ಕೊಟ್ಟು ಪರಿಹಾರವನ್ನೂ ಮಾಡಿಕೊಳ್ಳುತ್ತಾರೆ. ಇಷ್ಟೆಲ್ಲಾ ಮಾಡಿದ ಮೇಲೆ ವರ್ಷಕ್ಕೊಮ್ಮೆ ಏಕೆ ಉಪಾಕರ್ಮ ಮಾಡಿಕೊಳ್ಳಬೇಕು. ಇದೇ ಪ್ರಶ್ನೆ ನಮಗೂ ಎದುರಾಗಿತ್ತು. ಬಲ್ಲವರನ್ನು ಕೇಳಿದಾಗ , ಅವರಿಂದ ನಾವು ತಿಳಿದದ್ದನ್ನು ನಿಮಗೂ ತಿಳಿಸುತ್ತಿದ್ದೇವೆ.

ಉಪಾಕರ್ಮ ಆಚರಣೆ ಶಾಸ್ತ್ರೀಯ ಕಟ್ಟುಪಾಡಿನಲ್ಲಿ ನಡೆಯುವ ವಾರ್ಷಿಕ ವಿಧಿ. ಸಂವತ್ಸರ ಕೃತ ದೋಷ ಪರಿಹಾರಾರ್ಥ ಅಂದರೆ ವರ್ಷವಿಡೀ ತಿಳಿದೋ, ತಿಳಿಯದೆಯೋ ಆದ ತಪ್ಪಿಗೆ ದೇವರ ಕ್ಷಮೆ ಕೋರಿ, ಅದರಿಂದ ಕಟ್ಟಿಕೊಂಡ ಪಾಪ ನಿವಾರಣೆಗಾಗಿ ವರ್ಷಕ್ಕೊಮ್ಮೆ ಈ ಆಚರಣೆ ಮಾಡಲಾಗುತ್ತದಂತೆ.

ಉಪಾಕರ್ಮದ ದಿನ ಅಭ್ಯಂಜನ ಮಾಡಿ, ಪುಣ್ಯಾಹ, ನಾಂದಿ ನಂತರ ಉತ್ಸರ್ಜನ ಹೋಮ ಮಾಡಿ, ಗುರು ಕಾಣಿಕೆ ನೀಡಿ, ಕನಿಷ್ಠ 5 ಜನ ವಟುಗಳಿಗೆ ಜನಿವಾರ ಅರ್ಥಾತ್‌ ಯಜ್ಞೋಪವೀತ ಹಾಗೂ ವಸ್ತ್ರವನ್ನು ದಾನವಾಗಿ ನೀಡಿ, ನವ ಯಜ್ಞೋಪವೀತ ಧಾರಣೆಯನ್ನು ಮಾಡಿಕೊಳ್ಳುವುದು ಸಂಪ್ರದಾಯ.

ಉತ್ಸರ್ಜನ ಎಂದರೆ, ದೇಶ ಶುದ್ಧಿ ಎಂದರ್ಥವಂತೆ. ಅಂದರೆ ದೇಹ ಶುದ್ಧಿಗಾಗಿ ಮಾಡುವ ಹೋಮ ಉತ್ಸರ್ಜನ. ಈ ಹೋಮ ಅಥವಾ ಯಾಗ ಮಾಡುವುದರಿಂದ ವರ್ಷವಿಡೀ ಮಾಡಿದ ಗಾಯಿತ್ರಿ ಮಂತ್ರ ಜಪ, ಪೂಜೆ, ಸಂಧ್ಯಾವಂದನೆಗೆ ಬಲ ಬರುತ್ತದಂತೆ. ಋಗ್ವೇದಿಗಳು ಸಾಮಾನ್ಯವಾಗಿ ಉಪಾಕರ್ಮದ ದಿನ ಉತ್ಸರ್ಜನ ಹೋಮವನ್ನು ಮಾತ್ರ ಮಾಡುತ್ತಾರೆ.

ಆದರೆ, ಯಜುರ್ವೇದಿಗಳು ಉತ್ಸರ್ಜನ ಹಾಗೂ ವಿರಿಜಾ ಎಂಬ ಎರಡು ಹೋಮಗಳನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನ್ಮತಃ ಬ್ರಾಹ್ಮಣರಾದರೂ ಮಂತ್ರ, ವೇದಾದ್ಯಯನ ಮಾಡುವವರ ಸಂಖ್ಯೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಅಂದು ವೇದಶಾಸ್ತ್ರ ಪಾರಂಗತರ ಮನೆಯಲ್ಲಿ ಹತ್ತಾರು ಜನ ಬ್ರಾಹ್ಮಣರು ಸೇರಿ, ಸಾಮೂಹಿಕ ಯಾಗ ಕಾರ್ಯದಲ್ಲಿ ಭಾಗವಹಿಸಿ ನವ ಯಜ್ಞೋಪವೀತ ಧಾರಣೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ದೇವಾಲಯಗಳಿಗೆ ಹೋಗಿ ಅರ್ಚಕರಿಗೇ ದಕ್ಷಿಣೆ ಹಾಗೂ ಯಜ್ಞೋಪವೀತವನ್ನು ದಾನವಾಗಿ ನೀಡಿ, ಅವರ ಸಮ್ಮುಖದಲ್ಲಿ ಶಾಸ್ತ್ರಾನುಸಾರ ಉಪಾಕರ್ಮವನ್ನು ಮಾಡಿಕೊಳ್ಳುತ್ತಾರೆ.

ಇದೆಲ್ಲ ಅವರವರ ನಂಬಿಕೆ, ವಿಶ್ವಾಸದ ವಿಷಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+