ತನ್ನಿರೆ ಹಾಲ ತನಿಯೆರೆಯೋಣ, ತಾಯ ಹಾಲ ಋಣ
ಹುತ್ತಕ್ಕೆ ಹಾಲೆರೆಯುವ ಸಂಪ್ರದಾಯ ಮತ್ತು ಸಂಭ್ರಮ
ಹುತ್ತಕ್ಕೆ ಶ್ರಾವಣದಲ್ಲಿ ಹಾಲೆರೆಯುವ ಬಗ್ಗೆ ಒಂದು ಚಿಂತನೆ ಇದೆ. ಇದು ಎಷ್ಟು ನಿಜ. ಎಷ್ಟು ಸುಳ್ಳು ಎಂಬುದು ನಮಗೂ ಗೊತ್ತಿಲ್ಲ. ಆದರೆ ಆ ಚಿಂತನಾ ಲಹರಿ ನಿಮಗೂ ಗೊತ್ತಿರಲಿ. ಗೊತ್ತಿದ್ದರೆ ನೆನಪಿಸುತ್ತಿದ್ದಾರೆ ಅಂದುಕೊಳ್ಳಿ.
ಹಾವುಗಳು ಎಂದೂ ಹುತ್ತ ಕಟ್ಟುವುದಿಲ್ಲ. ಗೆದ್ದಲುಗಳು ಕಟ್ಟುವ ಹುತ್ತದಲ್ಲಿ ಹೊಕ್ಕು ಅವು ವಾಸ ಮಾಡುತ್ತವೆ. ಗೆದ್ದಲುಗಳು ತಮ್ಮ ಬಾಯಿಯಿಂದ ಒಸರುವ ರಸದ ನೆರವು ಪಡೆದು, ಭೂಮಿಯ ಒಳಗಿನಿಂದ ಮಣ್ಣನ್ನು ಹೊರತೆಗೆದು ಹುತ್ತವನ್ನು ಕಟ್ಟುತ್ತವೆ. ಈ ಹುತ್ತ ನಯವಾದ ಮಣ್ಣಿನಿಂದ ಮಾಡಿದ್ದು. ಮಳೆ ಬಂದರೂ ಈ ಹುತ್ತ ಕರಗುವುದಿಲ್ಲ. ಹುತ್ತದ ಒಳಗೆ ಕೂಡ ಭೂಮಿ ನಯವಾದ ಮಣ್ಣಿನಿಂದ ಕೂಡಿದ್ದು, ಸಮತಟ್ಟಾಗಿರುತ್ತದೆ. ಇದರಲ್ಲಿ ಕಸವಾಗಲೀ, ಕಲ್ಲಾಗಲೀ ಇರುವುದಿಲ್ಲ.
ಶ್ರಾವಣದ ಚಂದ್ರಮನ ರಶ್ಮಿಗಳು ಹಾವುಗಳಲ್ಲೂ ಕಾಮೋದ್ರೇಕ ಉಂಟು ಮಾಡುತ್ತವೆ. ಹಾವುಗಳು ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಕಾಲವೂ ಇದಂತೆ. ಈ ಲೈಂಗಿಕ ಕ್ರಿಯೆಗೆ ಮುನ್ನ ಹೆಣ್ಣು ಹಾವುಗಳಿಗೆ ಋತುಸ್ರಾವವಾಗುತ್ತದಂತೆ. ಇದಕ್ಕೆ ರಿಪ್ರೊಡಕ್ಟೀವ್ ಸೈಕಲ್ ಎನ್ನುತ್ತಾರೆ. ಈ ಸಮಯದಲ್ಲಿ ಹಾವುಗಳು ಹುತ್ತದಲ್ಲಿ ಸುತ್ತಾಡುವಾಗ ದ್ರವಿಸುವ ರಜಸ್ಸು ಭೂಮಿಯ ಮಣ್ಣನ್ನು ಸೇರುತ್ತವೆ. ಇವು ಹುತ್ತವನ್ನು ಹೊಕ್ಕುವಾಗ ಹುತ್ತದ ನಯವಾದ ಮಣ್ಣು ಈ ರಜಸ್ಸನ್ನು ಹೀರಿಕೊಳ್ಳುತ್ತದೆ.
ಅದೇ ರೀತಿ ಈ ಸಮಯದಲ್ಲಿ ಸ್ಖಲನವಾಗುವ ಗಂಡು ಹಾವಿನ ವೀರ್ಯವೂ ಹುತ್ತದ ಮಣ್ಣಿನಲ್ಲಿ ಸೇರ್ಪಡೆಯಾಗುತ್ತದಂತೆ. ಈ ರೀತಿಯ ದ್ರವ ಬೆರೆತ ಹುತ್ತದ ಮಣ್ಣಿಗೆ ಹೆಂಗಸರು ಹಾಲು ಹಾಕಿದಾಗ ಅಂದರೆ ತನಿ ಎರೆದಾಗ, ಆ ಹುತ್ತದ ಮಣ್ಣಿನಿಂದ ಸುಮಧುರ ಹಾಗೂ ಸುಗಂಧಯುಕ್ತವಾದ ವಾಯು ಹೊರಹೊಮ್ಮುತ್ತದೆ. ಇದು ಹೆಣ್ಣಿನ ಭಾವನೆಗಳನ್ನು ಕೆರಳಿಸುವುದೇ ಅಲ್ಲದೆ, ರಿಪ್ರೊಡಕ್ಟಿವ್ ಆರ್ಗನ್ಸ್ಗಳ ಮೇಲೂ ಪರಿಣಾಮ ಬೀರುತ್ತದಂತೆ. ಚಂದ್ರ ಪ್ರಭಾವವೂ ಇರುವ ಕಾರಣ, ಇದರಿಂದ ಗರ್ಭಧಾರಣೆಗೆ ಸಹಕಾರಿಯಾಗುತ್ತದಂತೆ. ಅದಕ್ಕಾಗಿ ಈ ಪಂಚಮಿಯಲ್ಲಿ ಹುತ್ತಕ್ಕೆ ತನಿ ಎರೆಯಬೇಕು ಎನ್ನುತ್ತಾರೆ ಹಿಂದೂ ಜ್ಯೋತಿಷಿಗಳು ಹಾಗೂ ಧಾರ್ಮಿಕರು.
ಈ ಬಗ್ಗೆ ನಿಮಗೇನಾದರೂ ಖಚಿತ ವೈಜ್ಞಾನಿಕ ಮಾಹಿತಿ ಇದ್ದರೆ ನಮಗೆ ಬರೆದು ತಿಳಿಸಿ, ಅಥವಾ ಇದೆಲ್ಲ ಬೊಗಳೆ ಎನಿಸಿದರೂ ಅದನ್ನೂ ಬರೆದು ತಿಳಿಸಿ.
ಹುತ್ತಕ್ಕೆ ಹಾಲೆರೆಯುವ ಬಗ್ಗೆ ಮತ್ತೊಂದು ಕಾರಣ ಇದೆ. ಹಾವುಗಳು ಇಲಿಗಳನ್ನು ತಿನ್ನುತ್ತವೆ ಎನ್ನುವುದು ನಿಮಗೂ ಗೊತ್ತಲ್ಲ. ಸಾಮಾನ್ಯವಾಗಿ ಜ್ಯೇಷ್ಠ - ಆಷಾಢ ಬಿತ್ತನೆಯ ತಿಂಗಳು. ಶ್ರಾವಣದ ಆರಂಭದ ಹೊತ್ತಿಗೆ ಅವು ಪೈರಾಗಿ ತೊನೆದಾಡುತ್ತಿರುತ್ತವೆ. ಈ ಪೈರನ್ನು ಗದ್ದೆಯ - ಹೊಲ ಇಲಿಗಳು ತಿಂದು ರೈತನಿಗೆ ಭಾರಿ ಹಾನಿ ಉಂಟು ಮಾಡುತ್ತವೆ. ಆದ ಕಾರಣ ಹುತ್ತಕ್ಕೆ ಹಾಲು ಎರೆಯುವುದರಿಂದ ಹಾವುಗಳು ಹೊರ ಬಂದು ಇಲಿಗಳನ್ನು ತಿನ್ನುತ್ತವೆ ಎನ್ನುತ್ತಾರೆ. ಮತ್ತೊಂದು ಕಾರಣ ಏನನ್ನುತ್ತದೆ ಗೊತ್ತೆ. ಇಲಿಗಳನ್ನು ತಿಂದು ರೈತನಿಗೆ ಉಪಕಾರ ಮಾಡುವ ರೈತನಿಗೆ ಹಾಲೆರೆಯುವ ಮೂಲಕ ಕೃತಜ್ಞತೆ ಅರ್ಪಿಸಲಾಗುತ್ತದಂತೆ.
ನಾಗರ ಪಂಚಮಿ ಅಣ್ಣ - ತಂಗಿಯರ ಹಬ್ಬ. ಅಂದು ಸೋದರ - ಸೋದರಿಯರು ಹೊಟ್ಟೆ ತಣ್ಣಗಿರಲಿ, ಬೆನ್ನು ತಣ್ಣಗಿರಲಿ ಎಂದು ಹೇಳಿ ಹುತ್ತಕ್ಕೆ ಎರೆದ ಹಾಲನ್ನು ಸೋದರರ ಹೊಕ್ಕಳಿಗೂ, ಬೆನ್ನಿಗೂ ಹಚ್ಚಿ ಶುಭ ಕೋರುತ್ತಾರೆ. ಮದುವೆಯಾಗಿ ತವರಿನಿಂದ ಹೋದ ಸೋದರಿಗೆ ತಮ್ಮ ಸೋದರರನ್ನು ವರ್ಷಕ್ಕೊಮ್ಮೆಯಾದರೂ ನೋಡುವ ಅವಕಾಶ ಸಿಗಲಿ ಎಂಬ ಕಾರಣದಿಂದ ಈ ಧಾರ್ಮಿಕ ವಿಧಿ ಮಾಡಲಾಗಿದೆ ಎಂಬುದು ಒಂದು ತರ್ಕ. ಹಿಂದೆ ಬಸ್ಸು - ಕಾರುಗಳ ಸೌಕರ್ಯ ಇರಲಿಲ್ಲ. ದೂರ ದೂರದ ಊರಿಗೆ ಮದುವೆ ಮಾಡಿಕೊಟ್ಟ ಸೋದರಿಯ ನೋಡಲು ನಡೆದೇ ಹೋಗ ಬೇಕಾದ ಕಾಲ ಅದಾಗಿತ್ತು. ಆದ ಕಾರಣ ಶಾಸ್ತ್ರದ ಕಟ್ಟಳೆಯಿಂದಲಾದರೂ, ಹೊಲ ಗದ್ದೆಯಲ್ಲಿ ದುಡಿದು ದಣಿದ ಸೋದರ, ಮಳೆನಿಂತ ಈ ಶ್ರಾವಣದಲ್ಲಿ ಸೋದರಿಯನ್ನು ನೋಡಲಿ ಎಂದು ಈ ಕಟ್ಟಳೆ ಮಾಡಲಾಗಿದೆಯಂತೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications