ಕಂಗ್ಲಿಷ್ ಎನ್ನಡ ನಡುವೆ ಕುಗ್ಗದ ಕನ್ನಡಕ್ಕೆ ಜೈ

ನಮ್ಮ ಕನ್ನಡ ಕ್ಷೀಣಿಸಲು ನಮ್ಮ ಕನ್ನಡಿಗರು ಬಿಡುತ್ತಾರ? ಸಿನಿಮಾ, ಪುಸ್ತಕ, ಕಿರುತೆರೆ, ಪತ್ರಿಕೆ, ಹಾಡು, ರೇಡಿಯೊ ಇವುಗಳು ತಮ್ಮ ವ್ಯಾಪ್ತಿ ಹೆಚ್ಚಾಗುತ್ತಿರುವಾಗ ಅದು ಕನ್ನಡ ಭಾಷೆಯ ಸುಗಂಧವನ್ನು ಮತ್ತಷ್ಟು ಹರಡುತ್ತಿದೆ ಎಂಬ ಅರ್ಥವಲ್ಲವೆ? ಮತ್ತೇಕೆ ಕನ್ನಡ ಕ್ಷೀಣಿಸುತ್ತಿದೆ ಎಂದು ಬೊಬ್ಬೆ ಹಾಕುತ್ತಿದ್ದೇವೆ?
ಹೌದು, ಕರ್ನಾಟಕದ ಹೃದಯವಾಗಿರುವ ಬೆಂಗಳೂರಿಗೆ ಬಂದಾಗ ಕನ್ನಡಕ್ಕಿಂತ ಬೇರೆ ಭಾಷೆಯ ಕಾರುಬಾರು ಹೆಚ್ಚಾಗಿ ಕಂಡು ಬರುತ್ತದೆ ಬಸ್ ಹತ್ತಿದರೆ ಸಾಕು, ಅಂಗಡಿಗಳಿಗೆ ಹೋದರೆ ಸಾಕು ಅರಕಲು ಮುರುಕಲು ಇಂಗ್ಲೀಷ್ ನಲ್ಲಿಯೆ ಹೆಚ್ಚಾಗಿ ವ್ಯವಹರಿಸುತ್ತಾರೆ.
ಮುಖ್ಯವಾಗಿ ನಗರಗಳ ಮಾರುಕಟ್ಟೆಯಲ್ಲಿ ಸೊಪ್ಪು, ತರಕಾರಿ ಅಂಗಡಿಯಲ್ಲಿ ಕುಳಿತ ಆಂಟಿ, ಅಂಕಲ್ ಗಳು ಸೇರಿದಂತೆ ನಮ್ಮ ಹಾವಭಾವ ನೋಡಿ ಭಾಷೆ ಬದಲಾಯಿಸುತ್ತಾರೆ. ನಿಂಬೆ ಹಣ್ಣು ಬೇಕೆಂದು ಕೇಳಿದ್ರೆ ಕಿತ್ ನಾ ಅಂತಾರೆ. ಇದು ಒಂದು ಉದಾಹರಣೆಯಷ್ಟೇ.
ಹಾಗಂತ ಕನ್ನಡಿಗರು ನಾವು ಕೋಪ ಮಾಡಿಕೊಂಡರೆ ಹೇಗೆ ಹೇಳಿ ? ಎಲ್ಲಾ ಕಡೆಯ ಜನರು ಬಂದು ಜೀವನ ಮಾಡುವ ಈ ಬೆಂಗಳೂರಿನಲ್ಲಿ ಪಾಪ ಅವರು ಹೊಟ್ಟೆ ಪಾಡಿಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಹಾಗಂತ ನಾವೇನು ಮಾಡುತೇವೆ ಎಂದು ಯೋಚಿಸಿ ನಾವೂ ಕನ್ನಡ ಮರೆತು ಇಂಗ್ಲೀಷ್ ನಲ್ಲಿಯೆ ಉತ್ತರಿಸಿ ಬರುತ್ತೇವೆ ನಂತರ ಕನ್ನಡ ಮಾತನಾಡುವರಿಲ್ಲ ಅಂತ ಲಭೋ ಲಭೋ ಬಡ್ಕೊಳ್ತೇವೆ!
ನಾವು ಹೊರ ನಾಡಿನಿಂದ ಬಂದವರ ಜೊತೆ ಕನ್ನಡದಲ್ಲಿ ಮಾತನಾಡದಿದ್ದರೆ ಆವರು ಕೂಡ ನಿಧಾನಕ್ಕೆ ಕಲಿತು ಮಾತನಾಡತೊಡಗುತ್ತಾರೆ , ಆದರೆ ಕೆಲ ಕನ್ನಡಿಗರ ಮನೆಯಲ್ಲಿ ಇಂಗ್ಲೀಷ್ ಅನ್ನವುದಕ್ಕಿಂತಾ ಕಂಗ್ಲೀಷ್ ದೆ ಕಾರುಬಾರು ಹೀಗಾದರೆ ಕನ್ನಡ ಮಾತನಾಡುವರು ಯಾರು ಹೇಳಿ.
ದಿನನಿತ್ಯ ಕನ್ನಡ ಹೆಚ್ಚು ಮಾತನಾಡೋಣ. ಯಾರಾದರೂ ಬೇರೆ ಭಾಷೆಯಲ್ಲಿ ಏನಾದರೂ ಕೇಳಿದರೆ ಮೊದಲು ಕನ್ನಡದಲ್ಲಿ ಉತ್ತರಿಸಿ ಅವರ ತಲೆಗೆ ಹೊಕ್ಕಿಲ್ಲ ಅಂತ ಅನಿಸಿದರೆ ಮತ್ತೊಂದು ಭಾಷೆಯಲ್ಲಿ ಉತ್ತರಿಸೋಣ. ಅಚ್ಚ ಕನ್ನಡ, ಸ್ವಚ್ಛ ಕನ್ನಡಕ್ಕೆ ನಮ್ಮ ಆದ್ಯತೆ ಇರಲಿ.
ಈಗ ಕನ್ನಡ ಪುಸ್ತಕಗಳ ಮಾರಾಟದಲ್ಲಿ ಶೇ. 10ರಷ್ಟು ಹೆಚ್ಚಾಗಿದೆ, ಟಿವಿ ಮಾರುಕಟ್ಟೆ ದುಪ್ಪಟವಾಗಿದೆ. ಇ ಪೇಪರ್ , ಬ್ಲಾಗ್ ನಿಂದಾಗಿ ವಿದೇಶಗಳಲ್ಲೂ ಕನ್ನಡ ಕರ್ನಾಟಕದ ಗಡಿ ದಾಟಿ ವಿದೇಶಗಳಲ್ಲೂ ತನ್ನ ಕಂಪನ್ನು ಸೂಸುತ್ತಿದೆ. ಕನ್ನಡದಲ್ಲಿ ಕೂಡ ಕೋಟಿ ಬಜೆಟ್ ಸಿನಿಮಾಗಳು ಬರುತ್ತಿವೆ(ನೋಡುವಂತಹ ಸಿನಿಮಾ ಕಡಿಮೆ ಇದೆ ಅಂತಿರಾ? ಕ್ಷಮಿಸಿ).
ಕನ್ನಡದ ಕಂದಮ್ಮಗಳು ನಾವು ಅಚ್ಚ ಕನ್ನಡ, ಸ್ವಚ್ಛ ಕನ್ನಡದಲ್ಲಿ ಮಾತನಾಡಿದರೆ, ಇತರರು ಮಾತನಾಡುವಂತೆ ಪ್ರೋತ್ಸಾಹಿಸಿದರೆ ಕನ್ನಡ ಕೊರಗಲು ಹೇಗೆ ಸಾಧ್ಯ? ಅಲ್ಲವೇ?
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications